Search This Blog

Thursday, December 15, 2011

ಎರಡೇ ಎಕರೆಯಲ್ಲಿ ವಾರ್ಷಿಕ 10 ಲಕ್ಷ ರೂಪಾಯಿ ಗಳಿಕೆ.......!


'ನನ್ನ ಯಶಸ್ಸಿನ ತಳಹದಿಯೇ ಸಮಗ್ರ ಕೃಷಿ. ಇದೇ ಸಾಧನೆಯ ಮಂತ್ರ ಮತ್ತು ಜೀವಾಳ' ಹೀಗೆನ್ನುತ್ತಾರೆ ಇಡೀ ಕೃಷಿರಂಗವೇ ತಮ್ಮತ್ತ ಅಚ್ಚರಿಯಿಂದ ನೋಡುವಂತೆ ಮಾಡಿದ ರೈತ ಸದಾನಂದ. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರದ ತಪಸೀಹಳ್ಳಿ ಗ್ರಾಮ ನಿವಾಸಿ. ವ್ಯವಸಾಯ ಎಂದರೆ ನಷ್ಟದಾಯಕ ಬಾಬತ್ತು ಎನ್ನುವ ಭಾವನೆ ದಟ್ಟವಾಗಿದೆ. ಇಂಥ ಸಂದರ್ಭದಲ್ಲಿ ಐವತ್ತರ ವಯೋಮಾನದ ಅತಿ ಸಣ್ಣ ರೈತ ಸದಾನಂದ ಅವರು ಕೃಷಿಯಲ್ಲಿ ಮಾಡಿದ ಸಾಧನೆ ಮತ್ತು ಇದೇ ಹಾದಿಯಲ್ಲಿ ಮುಂದುವರಿಲು ರೂಪಿಸಿಕೊಂಡಿರುವ ಯೋಜನೆಗಳು ಬಲು ಅಪರೂಪದ ವಿದ್ಯಮಾನ.....



ಹೆಚ್ಸದಾನಂದ ಅವರದು ಕೃಷಿಕಕುಟುಂಬದ ಹಿನ್ನೆಲೆಎಸ್.ಎಸ್.ಎಲ್.ಸಿ.ತನಕ ವಿದ್ಯಾಭ್ಯಾಸನಂತರ ಪ್ರತಿಷ್ಠಿತಸಾರ್ವಜನಿಕ ಉದ್ದಿಮೆಯೊಂದರ ನೌಕರಿ.2000ನೇ ಇಸವಿಯಲ್ಲಿ ಕೆಲಸ ಬಿಡಲುನಿರ್ಧರಿಸಿದಾಗ ಆತ್ಮೀಯರ ಸಲಹೆ 'ಇನ್ನೂ20 ವರ್ಷ ಸವರ್ಿಸಿದೆಕೈ ತುಂಬಸಂಬಳ ಬರುವ ಕೆಲಸ ಬಿಡಬೇಡಆದರೆಸದಾನಂದ ಕೆಲಸ ಬಿಡಲು ನಿರ್ಧರಿಸಿದ್ದರು.ಇದರ ಹಿಂದೆ ಮನಸಿನಲ್ಲಿ ವರ್ಷಗಳ ಕಾಲರೂಪಿಸಿಕೊಂಡ ಯೋಜನೆಯಿತ್ತುಊರಿಗೆಹಿಂದಿರುಗಿ ಹಿರಿಯರಿಂದ ಬಂದಿದ್ದ ಭೂಮಿಯಲ್ಲಿ ಕಾಯಕ ಮಾಡಲು ಮನಸ್ಸು ಮಾಡಿದ್ದರುಇವರೊಂದಿಗೆ ಪತ್ನಿ,ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು ಊರಿಗೆ ಹಿಂದಿರುಗಿದರುಊರೊಳಗೆ ಮನೆ ಇದ್ದರೂ ಜಮೀನಿನಲ್ಲಿಯೇ ಆಗಪುಟ್ಟದೊಂದು ಮನೆ ಮಾಡಿ ನೆಲಸಿದರು.

ಪ್ರಾರಂಭದಲ್ಲಿ ಅಂದುಕೊಂಡಷ್ಟು ಕೃಷಿಕಾರ್ಯ ಸರಳವಾಗಿರಲಿಲ್ಲಆದರೆ ಸದಾನಂದ ಮುಂದಿಟ್ಟ ಹೆಜ್ಜೆಹಿಂದಿಡಲಿಲ್ಲಒಂದೆರಡು ವರ್ಷ ಇರುವ ಎರಡೂಕಾಲು ಎಕರೆ ಮಳೆಯಾಶ್ರಿತ ಜಮೀನಿನಲ್ಲಿ ಕ್ಷೇತ್ರಬೆಳೆಗಳನ್ನುಬೆಳೆದರುಆದರೆ ಇದರಿಂದ ನಷ್ಟವೇನೂ ಆಗದಿದ್ದರು ಲಾಭ ಮಾತ್ರ ಖಂಡಿತ ಆಗಿರಲಿಲ್ಲಕುಟುಂಬದ ಹೆಚ್ಚುತ್ತಿದ್ದಅವಶ್ಯಕತೆಗಳನ್ನು ಪೂರೈಸುವಷ್ಟು ಆದಾಯ ತರುತ್ತಿರಲಿಲ್ಲಆದ್ದರಿಂದ ನೀರಾವರಿ ಆಶ್ರಿತ ತೋಟಗಾರಿಕೆಮಾಡಲು ನಿಶ್ಚಯಿಸಿದರುಕೊಳವೆಬಾವಿ ತೋಡಿಸಲು ನಿರ್ಧರಿಸಿದಾಗ ಜಮೀನಿನಲ್ಲಿ ನೀರಿನ ಲಭ್ಯತೆ ಇದೆಯೇಎಂದು ತಜ್ಞರಿಂದ ತಿಳಿದು ಮುಂದುವರಿದರುತೋಡಿಸಿದ ಕೊಳವೆ ಬಾವಿ ಪ್ರತಿ ಒಂದು ಗಂಟೆಗೆ 4000ಗ್ಯಾಲನ್ ನೀರು ಪೂರೈಸತೊಡಗಿದಾಗ ಸಮಾಧಾನ.

ಜಮೀನಿನಲ್ಲಿ ನೀರು ಸಿಕ್ಕಿದ ಶುರುವಿನಲ್ಲಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆಯತೊಡಗಿದರುಪರವಾಗಿಲ್ಲಎನ್ನುವ ಆದಾಯ ತರಕಾರಿ ಕೃಷಿಯಿಂದ ಬಂದರೂ ಸಮಾಧಾನಕರವಾಗಿರಲಿಲ್ಲವರ್ಷವಿಡೀ ಆದಾಯ ತರುವರೀತಿ ಕೃಷಿಯೋಜನೆ ರೂಪಿಸಬೇಕೆಂದು ನಿರ್ಧರಿಸಿದರುಅದರಂತೆ ಕಾರ್ಯಪ್ರವೃತ್ತರೂ ಆದರುತ್ರೈ ಮಾಸಿಕ,ಅರೆವಾರ್ಷಿಕ; ವಾರ್ಷಿಕ ಮತ್ತು ಬಹು ವಾರ್ಷಿಕ ಬೆಳೆಗಳನ್ನು ಬೆಳೆಸಲು ಮತ್ತು ಜಾನುವಾರು ಸಾಕಾಣಿಕೆಮಾಡಲು ನಿರ್ಧರಿಸಿದರುಆದರೆ ಇರುವ ಜಮೀನು ಕೇವಲ ಎರಡೂಕಾಲು ಎಕರೆಇಷ್ಟು ಕಡಿಮೆ ಪ್ರಮಾಣದಜಮೀನಿನಲ್ಲಿಯೇ ಅಂದುಕೊಂಡಿದ್ದೆಲ್ಲವನ್ನೂ ಮಾಡಬೇಕಿತ್ತುವ್ಯವಸ್ಥಿತವಾಗಿ ಯೋಜನೆ ಮಾಡಿದ ಕಾರಣಎಲ್ಲವೂ ಸಾಧ್ಯವಾಯಿತು.

ಜಮೀನಿನ ಅಂಚಿನ ಸುತ್ತಲೂ 50 ತೆಂಗಿನ ಸಸಿಗಳನ್ನು ನೆಟ್ಟರುಅದರೊಂದಿಗೆ ಜಮಿನಿನ ಒಳಭಾಗದಲ್ಲಿಸಫೋಟಾಹಲಸುಅಗಸೆತೇಗಸಿಲ್ವರ್ ಓಕ್ಹೊಂಗೆ ಇತ್ಯಾದಿ ಸಸಿಗಳನ್ನು ನೆಟ್ಟರು20ಗುಂಟೆಯಲ್ಲಿ ಅಡಿಕೆ ಸಸಿಗಳನ್ನು ಹಾಕಿದರುಇವೆಲ್ಲವುಗಳಿಗೂ ಸಸ್ಯತ್ಯಾಜ್ಯಗಳಿಂದಲೇ ಮುಚ್ಚಿಗೆ ಮಾಡಿಸಾವಯವ ಗೊಬ್ಬರಗಳನಷ್ಟೇ ಪೋಷಕಾಂಶವಾಗಿ ಪೂರೈಸತೊಡಗಿದರು2003-4ನೇ ಇಸವಿಯೊಳಗೆ ಇವರತೋಟದಲ್ಲಿ ಹೈನುಗಾರಿಕೆಕುರಿ ಮತ್ತು ಕೋಳಿ ಸಾಕಾಣಿಕೆ ಸಾಗತೊಡಗಿತ್ತುಬಯೋಗ್ಯಾಸ್ ಸ್ಥಾವರಸ್ಥಾಪನೆಯಾಗಿತ್ತುಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡತೊಡಗಿದರುಇವೆಲ್ಲದರಿಂದ ವಾರ್ಕಷಿಕ  ಆದಾಯ 3 ಲಕ್ಷರುಪಾಯಿಗಳಿಗೆ ತಲುಪಿತ್ತುಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 'ಗ್ರಾಮೀಣ ಜೈವಿಕ ಸಂಪನ್ಮೂಲ ಘಟಕ'ದವರರನ್ನು ಸಂಪರ್ಕಿಸಿ ಕೃಷಿ ಅಭಿವೃದ್ಧಿ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಸಂಗ್ರಹಿಸಿದರುನಂತರ ತರಕಾರಿಬೆಳೆಗಳನ್ನು ಅಧಿಕ ಪ್ರಮಾಣದಲ್ಲಿ ಬೆಳೆಯತೊಡಗಿದರುಪುಷ್ಪಕೃಷಿ ಕೈಗೊಂಡರುವಿವಿಧ ಸಸಿಗಳ ನರ್ಸರಿಪ್ರಾರಂಭಿಸಿದರುಸುಧಾರಿತ ತಳಿಗಳ ಕುರಿಗಳ ಸಂಖ್ಯೆ ಹೆಚ್ಚಿಸಿದರು. ಕೋಳಿಗಳ ಸಂಖ್ಯೆಯೂ ಹೆಚ್ಚಾಯಿತು. ವರ್ಮಿ ಕಾಂಪೋಸ್ಟ್ ಘಟಕಅಜೋಲ್ಲಾ ಉತ್ಪಾದನಾ ಘಟಕಗಳು ಸ್ಥಾಪನೆಯಾದವುಎಲ್ಲವೂ ವೈಜ್ಞಾನಿಕಮಾದರಿಯ ನಿರ್ವಹಣೆ.

2009ನೇ ಇಸವಿಯೊಳಗೆಪಷ್ಪಕೃಷಿಅತ್ಯುತ್ತಮವಾಗಿಅಭಿವೃದ್ಧಿಯಾಗಿತ್ತು.ತೆರೆದ ಪದ್ಧತಿಯಲ್ಲಿಮಾಡುತ್ತಿದ್ದ ಗುಲಾಬಿಕೃಷಿಯನ್ನು ನಿಯಂತ್ರಿತಪದ್ಧತಿಗೆಬದಲಾಯಿಸಿದರು.ಇದರಿಂದಮೊದಲಿಗಿಂತಲೂಉತ್ತಮ ಫಲಿತಾಂಶದೊರೆಯಿತು20ಗುಂಟೆಯಲ್ಲಿದ್ದ ಅಡಿಕೆಸಸಿಗಳು ಇಳುವರಿ ನೀಡತೊಡಗಿದವುಮುಚ್ಚಿಗೆಚೆನ್ನಾಗಿ ಕಳಿಸಿದ ಸಾವಯವ ಗೊಬ್ಬರಗಳ ಪೂರೈಕೆಕಾರಣದಿಂದ ಇವುಗಳಿಂದ ಉತ್ತಮ  ಪ್ರಮಾಣದ ಇಳುವರಿ ಲಭ್ಯಇದೇ ಅಡಿಕೆ ತೋಟದಲ್ಲಿ ಗಿರಿರಾಜ ಮತ್ತುಗಿರಿರಾಣಿ ತಳಿಗಳ ಕೋಳಿಗಳ ಸಾಕಾಣಿಕೆ ಆರಂಭಿಸಿದರುಕೋಳಿಗಳ ರಕ್ಷಣೆಗೆ ತೋಟದ ಸುತ್ತಲೂ ಸುಭದ್ರಬೇಲಿ.

ಗುಲಾಬಿ ಹೂವಿನ ಪ್ರಭೇದವಾದ ಕರಿಷ್ಮಾ ಹೂ ತಳಿಯನ್ನು ಒಂದೂವರೆ ಎಕರೆಗೆ ವಿಸ್ತರಿಸಿದರುತರಕಾರಿಕೃಷಿಗಿಂತಲೂ ಪಷ್ಪಕೃಷಿ ಹೆಚ್ಚಿನ ಲಾಭದಾಯಕ ಎನ್ನುವುದು ಅನುಭವಕ್ಕೆ ಬಂದಿದೆಎನ್ನುತ್ತಾರೆ ಸದಾನಂದ.ಗುಲಾಬಿಯ ವಿವಿಧ ತಳಿಗಳ ಹೂವುಗಳಿಗೆ ಮಾರುಕಟ್ಟೆಯಲ್ಲಿ ವರ್ಷವಿಡೀ ಬೇಡಿಕೆಸಮೀಪದ ಮತ್ತು ಸ್ಥಳೀಯಮಾರುಕಟ್ಟೆಯಾದ ದೊಡ್ಡಬಳ್ಳಾಪುರಕ್ಕೆ ಇವರು ಬೆಳೆಯುವ ಪುಷ್ಪಗಳ ಹೆಚ್ಚಿನ ಪ್ರಮಾಣ ಪೂರೈಕೆಯಾಗುತ್ತದೆ.ಇದರಿಂದ ದಿನನಿತ್ಯವೂ ಆದಾಯ ದೊರೆಯುತ್ತದೆಇದರಿಂದ ಬರುವ ಹಣದಿಂದಲೇ ಇವರ ಎಲ್ಲ ಕೃಷಿನಿರ್ವಹಣೆಯೂ ಸಾಗುತ್ತಿದೆ.

ಹತ್ತು ಗುಂಟೆಯಲ್ಲಿ ತರಕಾರಿ ಸಸಿಗಳ ನರ್ಸರಿ ಮಾಡಿದ್ದಾರೆದೊಡ್ಡಬಳ್ಳಾಪುರ ಒಂದರಿಂದಲೇ ಸಸಿಗಳಿಗೆ ಬರುವಕೋರಿಕೆ ಪೂರೈಸಲು ಸಾಧ್ಯವಾಗದಷ್ಟು ಹೆಚ್ಚಿನ ಬೇಡಿಕೆಯಿದೆವಿವಿಧ ತಳಿಗಳ ಬೀಜೋತ್ಪಾದನೆಯೂನಡೆಯುತ್ತಿದೆಇದು ಇವುಗಳು ಸ್ಥಳೀಯ ರೈತರಿಗೆ ಮಾರಾಟವಾಗುತ್ತಿವೆಆಯಾ ಕಾಲಘಟ್ಟದಲ್ಲಿ ಬೇಡಿಕೆಯಿರುವಮತ್ತು ಋತುಮಾನಕ್ಕನುಗುಣವಾದ ಉತ್ಪನ್ನಗಳ ಕೃಷಿಯಲ್ಲಿ ತೊಡಗಿರುವುದರಿಂದ ವರ್ಷದ ಎಲ್ಲ ದಿನಗಳುಇವರ ತೋಟದಲ್ಲಿ ಚಟುವಟಿಕೆ ಸಾಗುತ್ತಿರುತ್ತದೆಆದಾಯವೂ ಗಳಿಕೆಯಾಗುತ್ತಿರುತ್ತದೆ.
  
ಸದಾ ಹೊಸತನೇನಾದರೂ ಮಾಡಬೇಕೆಂಬ ಹಂಬಲ-ತುಡಿತ ಸದಾನಂದ ಅವರಿಗಿದೆಕೈಗೊಂಡ ಕಾರ್ಯದಲ್ಲಿಗಣನೀಯ ಸಾಧನೆ ಮಾಡುವ ಛಲವೂ ಇದೆ ನಿಟ್ಟಿನಲ್ಲಿ ಮಾಹಿತಿಗಳ ಸಂಗ್ರಹಣೆ ಮಾಡುತ್ತಿರುತ್ತಾರೆ.ಮೀನುಗಾರಿಕೆ ಕೈಗೊಂಡರೆ ಹೇಗೆ ಎಂಬ ಆಲೋಚನೆ ಮೂಡಿದಾಗ ತಡಮಾಡದೇ ಇದರ ಸಾಧಕ ಬಾಧಕಗಳು,ತಮ್ಮ ತೋಟದಲ್ಲಿ ಮೀನುಗಾರಿಕೆ ಕೈಗೊಳ್ಳಬಹುದೇ ಎಂಬ ಬಗ್ಗೆ ತಜ್ಞರೊಂದಿಗೆ ಚರ್ಚಿಸಿದರು'ನಿಮ್ಮತೋಟದಲ್ಲಿ ಈಗಾಗಲೇ ಇರುವ ವಿಸ್ತಾರವಾದ ನೀರಿನ ತೊಟ್ಟಿಯಲ್ಲಿಯೇ ಮೀನುಗಾರಿಕೆ ಮಾಡಬಹುದು.ಇದಕ್ಕಾಗಿಯೇ ಪ್ರತ್ಯೇಕ ತೊಟ್ಟಿ ನಿಮಾರ್ಣದ ಅವಶ್ಯಕತೆಯಿಲ್ಲಎಂದು ತಜ್ಞರು ಹೇಳಿದಾಗ ಸದಾನಂದ ಇದನ್ನುಕಾರ್ಯರೂಪಕ್ಕೆ ತಂದರುಶೀಘ್ರವಾಗಿ ಬೆಳವಣಿಗೆಯಾಗುವ ಉತ್ತಮ ತಳಿಗಳ ಮೀನುಮರಿಗಳನ್ನು ತಂದುಸಾಕಾಣಿಕೆ ಮಾಡತೊಡಗಿದರುರೋಗ-ರುಜಿನ ತಾಗದಂತೆ ನಿರ್ವಹಣೆಯನ್ನೂ ಮಾಡತೊಡಗಿದರುಕೆಲತಿಂಗಳುಗಳಲ್ಲಿಯೇ ಇದರಿಂದಲೂ ಉತ್ತಮ ಆದಾಯ ಬರತೊಡಗಿತು.

ತೋಟದಲ್ಲಿರುವ ಹಸುಗಳಿಗೆ ಬೇಕಾದ ಪೌಷ್ಟಿಕ ಆಹಾರದ ಉತ್ಪಾದನೆಯನ್ನೂ ಮಾಡಲಾಗುತ್ತಿದೆಅತ್ಯುತ್ತಮಪೌಷ್ಟಿಕ ಪಶು ಆಹಾರವಾದ ಅಜೋಲ್ಲಾ ಕೃಷಿ ಮಾಡುತ್ತಿದ್ದಾರೆಇದರ ಸೇವನೆಯಿಂದ ಇಲ್ಲಿರುವ ಮಿಶ್ರತಳಿಹಸುಗಳು ಉತ್ತಮ ಪ್ರಮಾಣ-ಗುಣಮಟ್ಟದ ಹಾಲು ಉತ್ಪಾದನೆ ಮಾಡುತ್ತಿವೆಇವುಗಳ ಸಗಣಿ ವ್ಯರ್ಥವಾಗಲೂಬಿಡದೇ ದಿನಬಂಧು ಮಾದರಿ ಬಯೋಗ್ಯಾಸ್ ಸ್ಥಾವರ ನಿರ್ಮಾಣ ಮಾಡಲಾಗಿದೆಇದರಿಂದ ಬರುವ ಜೈವಿಕಅನಿಲವೇ ಮನೆಯ ಬಹುತೇಕ ಅಡುಗೆ ಕಾರ್ಯಗಳಿಗೆ ಬೇಕಾದ ಇಂಧನವಾಗಿ ಪೂರೈಕೆಯಾಗುತ್ತಿದೆಬಯೋಗ್ಯಾಸ್ ಸ್ಲರಿ ಮತ್ತು ತೋಟದ ಸಸ್ಯತ್ಯಾಜ್ಯಗಳನ್ನು ಮಿಶ್ರಣ ಮಾಡಿ ಚೆನ್ನಾಗಿ ಕಳಿಸಲಾಗುತ್ತದೆಇದರಿಂದಲಭ್ಯವಾಗುವ ಉತ್ತಮ ಗುಣಮಟ್ಟದ ಕಾಂಪೋಸ್ಟ್ ಗೊಬ್ಬರತೋಟಕ್ಕೆ ಬೇಕಾದ ಪೋಷಕಾಂಶವನ್ನುಪೂರೈಸುವ ಪ್ರಮುಖ ಸಾವಯವ ಮೂಲ.

ತೋಟದಲ್ಲಿರುವ ಕೊಳವೆ ಬಾವಿಯಿಂದಸಾಕಷ್ಟು ಪ್ರಮಾಣದ ನೀರು ಲಭ್ಯವಿದೆಆದರೆಇದರ ಒಂದು ಹನಿ ನೀರೂ ಅನಗತ್ಯವಾಗಿಬಳಕೆಯಾಗುತ್ತಿಲ್ಲನೀರಿನ ಮಿತವ್ಯಯದದೃಷ್ಟಿಯಿಂದ ತೋಟಕ್ಕೆ ಹನಿ ನೀರಾವರಿಪದ್ಧತಿ ಅಳವಡಿಸಿದ್ದಾರೆ

'ಹನಿ ನೀರಾವರಿ ಪದ್ಧತಿಅಳವಡಿಸಿಕೊಂಡಿರುವುದರಿಂದ ತೋಟದಲ್ಲಿಕಳೆಗಳ ಬಾಧೆ ಇಲ್ಲಪರಿಣಾಮಕಳೆನಿಯಂತ್ರಣಕ್ಕೆಕೃಷಿಕಾರ್ಮಿಕರಿಗೆ ನೀಡಬೇಕಾದ ಹಣವೂಉಳಿತಾಯವಾಗಿದೆನೀಡುವ ಎಲ್ಲಪೋಷಕಾಂಶ ಬೆಳೆಗಳಿಗೆ ದಕ್ಕುವುದರಿಂದಇಳುವರಿಯೂ ಅತ್ಯುತ್ತಮಇದಲ್ಲದೇ ಆಗಾಗತೋಟದಲ್ಲಿ ಮಾಡಬೇಕಾದ ಸಿಂಪಡಣಾಕಾರ್ಯಗಳನ್ನು ಮನೆಮಂದಿಯೇ ಮಾಡುತ್ತೇವೆ.ಸಿಂಪಡಣೆ-ಧೂಮೀಕರಣ ಮಾಡಲು ಬೇಕಾದ ಮೋಟಾರನ್ನು ಹೊರಗಿನಿಂದ ಖರೀದಿಸಿತರದೇ ನಮ್ಮಲ್ಲಿಯೇ ಇದ್ದ ಹಳೇ ಸ್ಕೂಟರ್ ಇಂಜಿನಿನಲ್ಲಿ ಅಲ್ಪ ಸ್ವಲ್ಪ ಮಾರ್ಪಾಡು ಮಾಡಿ ಬಳಸುತ್ತಿದ್ದೇವೆ.ಇದರಿಂದಲೂ ಸಾಕಷ್ಟು ಪ್ರಮಾಣದ ಉಳಿತಾಯವಾಗುತ್ತದೆಉಳಿಕೆಯಾಗಿದ್ದು ಕೂಡ ಲಾಭವೇ ತಾನೇ'ಎಂದು ಮುಗುಳ್ನಗುತ್ತಾರೆ 'ಸದಾನಂದ'
  

ತೋಟದ ಯಾವುದೇ ಉತ್ಪನ್ನಗಳ ತ್ಯಾಜ್ಯಗಳು ಅನುತ್ಪಾದಕವಾಗಲು ಬಿಡದೇ ಪೋಷಕಾಂಶಗಳಾಗಿಮರುಬಳಕೆ ಮಾಡುತ್ತಿರುವುದರಿಂದಲೇ ಕೃತಕ ಗೊಬ್ಬರಗಳಿಗೆ ವಿನಿಯೋಗಿಸಬೇಕಾದ ಹಣ ಗಣನೀಯಪ್ರಮಾಣದಲ್ಲಿ ಉಳಿತಾಯವಾಗುತ್ತದೆಇವರ ಎರಡೂಕಾಲು ಎಕರೆ ತೋಟದಲ್ಲಿರುವ ಪ್ರತಿಯೊಂದು ಘಟಕಒಂದಕ್ಕೊಂದು ಪೂರಕವಾಗಿರುವುದನ್ನು ಕಾಣಬಹುದುಉದಾಹರಣೆಗೆ ಹೇಳುವುದಾದರೆ ಹೈನುರಾಸುಗಳಿಗೆ,ಕುರಿಗಳಿಗೆಕೋಳಿಗಳಿಗೆ ಬೇಕಾದ ಆಹಾರ ತೋಟದಿಂದಲೇ ಪೂರೈಕೆಯಾಗುತ್ತದೆತೋಟಕ್ಕೆ ಬೇಕಾದಸಮೃದ್ಧ ಪೋಷಕಾಂಶ  ಪ್ರಾಣಿಗಳಿಂದಲೇ ಲಭ್ಯವಾಗುತ್ತದೆಇದರಿಂದಲೇ  ತೋಟ ಪ್ರತಿಯೊಂದುಹಂತದಲ್ಲಿಯೂ ಸಮತೋಲನದಿಂದ ಸಾಗುತ್ತಿರುವುದನ್ನು ಕಾಣಬಹುದುಸದಾನಂದ ಅವರುಬಹುಬೇಡಿಕೆಯಿರುವ ರಾಟ್ ವ್ಹೀಲರ್ ಮತ್ತು ಗ್ರೇಟ್ ಡೆನ್ ನಾಯಿ ತಳಿಗಳ ಅಭಿವೃದ್ಧಿಯಲ್ಲಿಯೂತೊಡಗಿಸಿಕೊಂಡಿದ್ದಾರೆನಾಯಿಮರಿಗಳ ಮಾರಾಟದಿಂದಲೂ ಅತ್ಯುತ್ತಮ ಆದಾಯವಿದೆಇಂಥ ಸಮಗ್ರಕೃಷಿಯ  ಉದಾಹರಣೆ ಅಪರೂಪ.

ವರ್ಷದಿಂದ ವರ್ಷಕ್ಕೆ  ತೋಟದ ಎಲ್ಲಘಟಕಗಳಿಂದಲೂ ಬರುವ ಆದಾಯದಪ್ರಮಾಣ ಏರಿಕೆಯಾಗುತ್ತಲೇ ಇದೆ 'ಮೊದಲಿನಿಂದಲೂ ಮಾಡಬೇಕಾದ ಎಲ್ಲಕೃಷಿಕಾರ್ಯಗಳನ್ನು ಚೆನ್ನಾಗಿ ಯೋಜಿಸಿಮಾಡುತ್ತಿದ್ದೇನೆಇದರಿಂದ ನಷ್ಟಕ್ಕೊಳಗಾಗುವಅವಶ್ಯಕತೆ ಬಂದಿಲ್ಲ ಮತ್ತು ಬರುವುದುಇಲ್ಲ. ಯಾವುದೇ ಒಂದೆರಡು ಬೆಳೆಗಳ ಮೇಲೆಅವಲಂಬಿತರಾಗದೇ ಸಮಗ್ರ ಬೆಳೆ ಪದ್ಧತಿಅಳವಡಿಸಿಕೊಳ್ಳಬೇಕುನೀರಿನ ಮಿತವ್ಯಯದದಿಕ್ಕಿನಲ್ಲಿ ಸಾಧ್ಯವಿರುವ ಪದ್ಧತಿಗಳನ್ನುಅಳವಡಿಸಿಕೊಳ್ಳಬೇಕುಹೊರಗಿನಿಂದಸಾಧ್ಯವಾದಷ್ಟು ಮಟ್ಟಿಗೆ ಅವಶ್ಯವಿರುವಪೋಷಕಾಂಶಗಳನ್ನು ತರಬಾರದು.ಮನೆಮಂದಿಯೇ ಸಾಧ್ಯವಾದಷ್ಟು ಕೆಲಸಗಳನ್ನುಕೃಷಿಕಾರ್ಮಿಕರ ಅವಶ್ಯಕತೆಯನ್ನುಗಣನೀಯವಾಗಿ ತಗ್ಗಿಸಿಕೊಳ್ಳಬೇಕುಕೃಷಿಗೆಪೂರಕವಾಗಿ ಜಾನುವಾರು ಸಾಕಾಣಿಕೆಮಾಡಬೇಕುಆಗ ಹೆಚ್ಚಿನ ಮಟ್ಟದ ಆದಾಯನಿರೀಕ್ಷೆ ಮಾಡಲು ಸಾಧ್ಯಎಂಬುದು ಸದಾನಂದ ಅವರ ಅನುಭವದ ನುಡಿ.

ಯಶಸ್ವಿ ಕೃಷಿಯ ಸಾಮಾಜಿಕ ಫಲಿತಾಂಶ:
ತೋಟದ ಆದಾಯ ಹೆಚ್ಚಳಸದಾನಂದ ಅವರ ಸಾಮಾಜಿಕ ಅಂತಸ್ತಿನ ಮೇಲೆ ಸಕಾರಾತ್ಮಕಪರಿಣಾಮಗಳನ್ನು ಬೀರಿದೆತೋಟದಲ್ಲಿ ಆರಂಭದಲ್ಲಿ ವಾಸಕ್ಕೆಂದು ಕಟ್ಟಿಕೊಂಡ ಮನೆಯನ್ನು ವಿಸ್ತರಿಸಿನವೀಕೃತಗೊಳಿಸಿದ್ದಾರೆನಗರದ ಆಧುನಿಕ ಗೃಹದಲ್ಲಿರುವ ಎಲ್ಲ ಸೌಕರ್ಯಗಳು ಇಲ್ಲಿವೆಮನೆಗೆ ಬೆಲೆಬಾಳುವಗ್ರಾನೈಟ್ ನೆಲಹಾಸಿದೆಬೆಡ್ ರೂಮ್ಗಳುಅಡುಗೆ ಮನೆಬಾತ್ರೂಂ ಅತ್ಯಾಧುನಿಕವಾಗಿವೆ

ದುಬಾರಿ ಬೆಲೆಯ ಕಲರ್ ಟಿವಿಲ್ಯಾಂಡ್ ಪೋನ್ಮೊಬೈಲ್ ಪೋನ್ಗಳುಫ್ರಿಜ್ವಾಷಿಂಗ್ ಮೇಷಿನ್,ಮಿಕ್ಸರ್ ಗ್ರೈಂಡರ್ಸುಧಾರಿತ ಗುಜರಾತ್ ಮಾದರಿ ವಾಟರ್ ಹೀಟರ್ ಇತ್ಯಾದಿಗಳಿವೆಬೆಂಗಳೂರು ನಗರದಲ್ಲಿನೆಲಸಿರುವ ಒಳ್ಳೆಯ ಕೆಲಸದಲ್ಲಿರುವಉತ್ತಮ ಆದಾಯವಿರುವ ವಿದ್ಯಾವಂತ ವರನೊಂದಿಗೆ ಮಗಳ ಮದುವೆಮಾಡಿದ್ದಾರೆ ಮದುವೆ ಸಮಾರಂಭ ಕೂಡ ಅದ್ದೂರಿಯಾಗಿ ನೇರವೇರಿದೆಕೃಷಿಕನ ಮಗಳ ಮದುವೆಸಾಲ-ಸೋಲಗಳಿಲ್ಲದೇ  ರೀತಿ ನಡೆದಿರುವುದು ಮುಖ್ಯವಾಗಿ ಗಮನಿಸಬೇಕಾದ ಸಂಗತಿ

ಸದಾನಂದ ಅವರ ಮಗಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಲಾ ಪದವಿಗಾಗಿ ಓದುತ್ತಿದ್ದಾನೆಪ್ರತಿಭಾವಂತವಿದ್ಯಾರ್ಥಿ ಸಹತಮ್ಮ ಮಗಳ ಮಗನನ್ನು ತಮ್ಮಲ್ಲಿಯೇ ಇರಿಸಿಕೊಂಡು ವಿದ್ಯಾಭ್ಯಾಸ ಸಮಫಪದ ಪ್ರತಿಷ್ಠಿತಶಾಲೆಗೆ ಸೇರಿಸಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆಇತ್ತೀಚೆಗೆ ಸದಾನಂದ ಅವರು ಹೊಸ ಕಾರು ಖರೀದಿಸಿದ್ದಾರೆ.

ಮಾದರಿ ಕೃಷಿಕ ಹೆಚ್ಸದಾನಂದ ಅವರ ಸಾಧನೆ ಬಗ್ಗೆ ವೃತ್ತಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ.ಟೆಲಿವಿಷನ್ಗಳಲ್ಲಿ ಕಾರ್ಯಕ್ರಮಗಳು ಪ್ರಸಾರವಾಗಿವೆವಿದೇಶದ ನಿಯತಕಾಲಿಗಳು ಸಹ ಸದಾನಂದರ ಸಾಧನೆಹೊಗಳಿವೆಪ್ರತಿದಿನವೂ ಇವರಿಂದ ಸಲಹೆಗಳನ್ನು ಕೇಳಲು ಮತ್ತು ತೋಟ ನೋಡಲು ದೇಶ-ವಿದೇಶಗಳಿಂದಆಸಕ್ತರು ಮತ್ತು ಕೃಷಿಕರು ಬರುತ್ತಲೇ ಇರುತ್ತಾರೆಸುಸ್ಥಿರ ರೀತಿಯಲ್ಲಿ ಸಮಗ್ರ ಕೃಷಿ ಕೈಗೊಳ್ಳುವುದನ್ನುಒಂದಿನಿತೂ ಬೇಸರವಿಲ್ಲದೇ ಸದಾನಂದ ವಿವರಿಸುತ್ತಾರೆತಮ್ಮ ಅನುಭವ ಇತರರಿಗೂಪ್ರಯೋಜನಕಾರಿಯಾಗಲಿ ಎಂದು ಆಶಿಸುವ ಇವರ ಗುಣ ಪ್ರಶಂಸನೀಯ.

ಕೃಷಿ ಇಲಾಖೆಕೃಷಿ ವಿಶ್ವವಿದ್ಯಾಲಯಗಳುಅರಣ್ಯ ಇಲಾಖೆಕೃಷಿಗೆ ಸಂಬಂಧಿಸಿದ ಸ್ವಯಂ ಸೇವಾಸಂಸ್ಥೆಗಳ ಜೊತೆ ಪರಸ್ಪರ ಮಾಹಿತಿ ವಿನಿಮಯ ಸಾಗುತ್ತಲೇ ಇರುತ್ತದೆತೋಟಕ್ಕೆ ಬರುವಪ್ರತಿಯೊಬ್ಬರೊಂದಿಗೂ ಸೌಜನ್ಯದಿಂದ ವರ್ತಿಸಿ ಮಾಹಿತಿ ನೀಡುತ್ತಾರೆ.
ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಸಚಿವರುಹಿರಿಯ ಅಧಿಕಾರಿಗಳು ಸದಾನಂದರ ಸಾಧನೆಯಿಂದಪ್ರಭಾವಿತರಾಗಿದ್ದಾರೆಇದರಿಂದಲೇ ಯೋಜನೆಗಳು ರೂಪುಗೊಂಡಿವೆ ಯೋಜನೆಗಳು ಅನುಷ್ಠಾನದಹಾದಿಯಲ್ಲಿಯೂ ಇವೆ.


written by Kumara raitha

1 comment:

  1. ಅತ್ಯುತ್ತಮವಾದ ಮಾಹಿತಿ ಆದರೆ ಸದಾನಂದ ಅವರ ಮೊಬೈಲ್ ಸಂಖ್ಯೆ ಪ್ರಕಟಿಸಿದರೆ
    ಅನುಕೂಲವಾಗುತ್ತಿತ್ತು. ಸಾಧ್ಯವಾದರೆ ಪ್ರಕಟಿಸಿ,
    ನಿಮ್ಮ ಬರಹಕ್ಕೆ ನನ್ನ ತುಂಬು ಹೃದಯದ ಅಭಿನಂದನೆಗಳು.
    ನಂದಿ, ಮಲೆಬೆನ್ನೂರು.ದಾವಣಗೆರೆ.

    ReplyDelete