Search This Blog

Saturday, January 7, 2012

ರಾಮನಗರದಲ್ಲಿ ಫಲಪುಷ್ಪ ಪ್ರದಶ೵ನ

ಇಂದಿನಿಂದ ( ಜನವರಿ 7 ರಿಂದ 9 ರವರಗೆ) ರಾಮನಗರದಲ್ಲಿ ಫಲಪೂಷ್ಪ ಪ್ರದಶ೵ನ ನಡೆಯಲಿದೆ. ತೋಟಗಾರಿಕೆ ಇಲಾಖೆ ಹಾಗು ರಾಮನಗರ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಈ ಮೇಳವನ್ನು ಆಯೋಜಿಸಲಾಗಿದೆ. ಆಸಕ್ತವರು ಸದರಿ ಮೇಳಕ್ಕೆ ಭೇಟಿಕೊಡಿ. ವಿವಿದ ರೀತಿಯ ದೇಶಿಯ ಹಾಗು ವಿದೇಶಿ ಪುಷ್ಪಗಳು ಕಣ್ಣಿಗೆ ರಾರಾಜಿಸುತ್ತವೆ. ಬಣ್ಣ-ಬಣ್ಣದ, ಚಿಕ್ಕ-ದೊಡ್ಡವು, ತೋಟದಲ್ಲಿ ಬೆಳೆಯುವಂತ ನಾನಾ ಬಗೆಯ ಹೂವುಗಳು ನೋಡಬಹುದು. ಮನಸ್ಸಿಗೆ ಮುದ ನೀಡುವ ಹೂವುಗಳನ್ನು ನೋಡಬನ್ನಿ. 




ಅಳಿದು ಉಳಿದು ಹೋಗುತ್ತಿರುವ ಕಾಲಘಟ್ಟದಲ್ಲಿ ಮನಸ್ಸಿಗೆ ಪುಳಕ ನೀಡುವ ಹೂವುಗಳನ್ನು ನೋಡಿ ಖುಷಿಪಡಿ. ನಿಮ್ಮ ಗೆಳೆಯ/ತಿ ರ ಜೊತೆ ಬನ್ನಿ ಸಂತೋಷವನ್ನು ಇಮ್ಮಡಿಗೊಳಿಸಿ.

ಮೇಳವನ್ನು ಕೆಂಗೆಲ್ ಆಂಜನೇಯ ಸ್ವಾಮಿ ದೇವಸ್ಥಾನದ ಎದರುಗಡೆ ಇರುವ ತೋಟಗಾರಿಕಾ ಇಲಾಖೆಯ ತೋಟದಲ್ಲಿ ಆಯೋಜಿಸಲಾಗಿದೆ. 

ಗೋಧಿ ಎಂಬ ಅದ್ಭುತ ಹುಲ್ಲು (Miracle Wheat Grass!)


ಒಂದೇ ಔಷಧದಿಂದ ಹಲವಾರು ಕಾಯಿಲೆಗಳು ಗುಣವಾಗುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತದಲ್ಲವೇ? ಅಂತಹ ಔಷಧವೊಂದಿದೆ. ಆದರೆ ಅದು ಯಾವುದೇ ಔಷಧದ ಅಂಗಡಿಯಲ್ಲಿ ದೊರೆಯುವುದಿಲ್ಲ. ನೀವೇ ಅದನ್ನು ತಯಾರಿಸಿಕೊಳ್ಳಬೇಕು. ಈ ಔಷಧದ ತಯಾರಿಕೆಗೆ ಏನೆಲ್ಲಾ ಪದಾರ್ಥಗಳು ಬೇಕೋ, ಏನೆಲ್ಲಾ ಪರಿಕರಗಳು ಬೇಕೋ ಎಂಬ ಕುತೂಹಲ ನಿಮಗಿರಬಹುದು.ಯಾವುದಾ ಔಷಧ?ಹೇಳಿದರೆ ಖಂಡಿತಾ ಅಚ್ಚರಿಯಾದೀತು. ಆ ದಿವ್ಯ ಔಷಧ ಇನ್ನಾವುದೂ ಅಲ್ಲ; ಗೋಧಿ ಗಿಡದ ರಸ !
ಅಮೇರಿಕದ ಮಹಿಳಾ ವೈದ್ಯೆ ಡಾ.ಎನ್. ಬಿರಾಮೋರ್ ಎಂಬುವರು ಅಸಾಧ್ಯ ರೋಗಗಳಿಂದ ನರಳುತ್ತಿದ್ದವರ ಮೇಲೆಲ್ಲಾ ಗೋಧಿ ಗಿಡದ ರಸದ ಪ್ರಯೋಗ ನಡೆಸಿ ನೂರಕ್ಕೆ ನೂರು ಸಾಫಲ್ಯ ಪಡೆದುದಾಗಿ ಹೇಳುತ್ತಾರೆ. ಈ ವೈದ್ಯೆಯ ಪ್ರಕಾರ ಜಗತ್ತಿನಲ್ಲಿರುವ ಯಾವುದೇ ರೋಗ ಗೋಧಿ ಗಿಡದ ರಸದ ಕ್ರಮಬದ್ಧ ಸೇವನೆಯಿಂದ ಗುಣವಾಗದಿರುವುದಿಲ್ಲ. ದೊಡ್ಡ- ದೊಡ್ಡ ವೈದ್ಯರು ಗುಣಪಡಿಸಲು ಅಸಾಧ್ಯವೆಂದು ಕೈಚೆಲ್ಲಿದ, ಮರಣಶಯ್ಯೆಯಲ್ಲಿದ್ದ ಕ್ಯಾನ್ಸರ್ ರೋಗಿಗಳನ್ನು ಸಹ ಗೋಧಿ ಗಿಡದ ರಸದಿಂದಲೇ ಗುಣಪಡಿಸಿದ್ದಾರಂತೆ.
ಭಗಂಧರ, ಮೂಲವ್ಯಾಧಿ, ಮಧುಮೇಹ, ಗಂಟಲುಬೇನೆ, ಸಂಧಿವಾತ, ಕಾಮಾಲೆ, ಜ್ವರ, ಅಸ್ತಮಾ, ಕೆಮ್ಮು ಇತ್ಯಾದಿ ರೋಗಗಳಿಂದ ಅನೇಕ ವರ್ಷಗಳಿಂದ ಬಳಲುತ್ತಿದ್ದವರನ್ನು ಸಹ ಈ ಸಾಧಾರಣ ಗಿಡದ ರಸದಿಂದಲೇ ಗುಣಪಡಿಸಲಾಗಿದೆಯಂತೆ. ಹೆಚ್ಚೇಕೆ ಆಧುನಿಕ ವೈದ್ಯ ವಿಜ್ಞಾನವು ಗುಣಪಡಿಸಲು ಅಸಾಧ್ಯವೆಂದು ಘೋಷಿಸಿರುವ ಸುಮಾರು 350 ಕಾಯಿಲೆಗಳನ್ನು ಈ ಗಿಡದ ರಸದಿಂದ ಗುಣಪಡಿಸಲಾಗಿದೆ. ಗೋಧಿ ಗಿಡದಲ್ಲಿರುವ ಅದ್ಭುತ ಶಕ್ತಿಯು ಪ್ರಯೋಗಗಳಿಂದ ದೃಢಪಟ್ಟಿದೆ. ಅಮೇರಿಕದ ಅನೇಕ ಪ್ರಸಿದ್ಧ ವೈದ್ಯರು ಈ ಗಿಡದ ರಸದಲ್ಲಿರುವ ಔಷಧೀಯ ಗುಣಗಳನ್ನು ಸಮರ್ಥಿಸಿದ್ದಾರೆ. ಭಾರತದ ಗುಜರಾತ್, ಮುಂಬಯಿ ಪ್ರಾಂತ್ಯಗಳ ಅನೇಕ ವೈದ್ಯರು ಸಹಾ ಈ ಬಗ್ಗೆ ಪ್ರಯೋಗನಿರತರಾಗಿದ್ದಾರೆ.
ಹಸಿರು ರಕ್ತ: ಈ ಎಲ್ಲಾ ಕಾರಣಗಳಿಂದಾಗಿ ಗೋಧಿ ಗಿಡದ ರಸವನ್ನು “ಹಸಿರು ರಕ್ತ” ಎಂದು ಕರೆಯಲಾಗಿದೆ. ಇದು ಶೇ. 40ರಷ್ಟು ಮಾನವ ರಕ್ತವನ್ನು ಹೋಲುತ್ತದೆ. “ದೈವದತ್ತವಾದ ಈ ಅಮೃತದೆದುರು ವೈದ್ಯರು ನೀಡುವ ಇತರ ಅಂಶಗಳು ಏನೇನೂ ಅಲ್ಲ. ಜಗತ್ತಿನ ಪ್ರತಿಯೊಬ್ಬನೂ ಈ ರಸವನ್ನು ಸೇವಿಸಿ ಲಾಭ ಪಡೆಯಬಹುದು” – ಹೀಗೆಂದು ಡಾ. ಬಿರಾಮೋರ್ ಹೇಳುತ್ತಾರೆ.ನೀವು ಮನೆಯಲ್ಲೇ ಈ ಔಷಧವನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. ಹೇಗೆ? ಮುಂದೆ ಓದಿ.
ಮನೆಯಲ್ಲೇ ಮಾಡಿಕೊಳ್ಳಿ ನಿಮ್ಮ ಅನುಕೂಲಕ್ಕೆ ತಕ್ಕಂತೆ 10-12 ಇಲ್ಲವೇ 20 ಮರದ ಇಲ್ಲವೇ ಮಣ್ಣಿನ ಕುಂಡಗಳನ್ನು ತಂದುಕೊಳ್ಳಿ. ಸೂರ್ಯ ಕಿರಣಗಳು ಬೀಳದ ಜಾಗದಲ್ಲಿ ಅವುಗಳನ್ನು ಇಟ್ಟು ಮಣ್ಣು ತುಂಬಿಸಬೇಕು. ರಾಸಾಯನಿಕ ಗೊಬ್ಬರ ಹಾಕಬಾರದು. ನಂತರ ಒಂದೊಂದು ಕುಂಡದಲ್ಲಿ ಸುಮಾರು 60-70 ಉತ್ತಮವಾದ ಗೋಧಿಯ ಕಾಳುಗಳನ್ನು ಬಿತ್ತಬೇಕು. ದಿನವೂ ನೀರು ಹಾಕಲು ಮರೆಯಬೇಡಿ. 3-4 ದಿನಗಳಲ್ಲಿ ಬಿತ್ತಿದ್ದ ಗೋಧಿಯು ಮೊಳಕೆ ಬರುವುದು. ನಂತರ 8-10 ದಿನಗಳಲ್ಲಿ ಅದು 5-6 ಅಂಗುಲ ಎತ್ತರದ ಗಿಡವಾಗುತ್ತದೆ.
ಆಗ ಅದರಲ್ಲಿ 30-40 ಗಿಡಗಳನ್ನು ಬೇರು ಸಹಿತ ಕಿತ್ತು ಬೇರನ್ನು ಚೆನ್ನಾಗಿ ತೊಳೆಯಬೇಕು. ನಂತರ ಚೆನ್ನಾಗಿ ಅರೆಯಬೇಕು. ಗ್ರೈಂಡರ್/ಮಿಕ್ಸರ್ ಗಳನ್ನು ಈ ಕೆಲಸಕ್ಕೆ ಉಪಯೋಗಿಸಬಹುದು. 6 ಅಂಗುಲಕ್ಕಿಂತ ಎತ್ತರದ ಗಿಡ ರಸ ತೆಗೆಯಲು ಅನರ್ಹ. ಹೀಗೆ ಅರೆದ ನಂತರ ಶುದ್ಧವಾದ ಬಟ್ಟೆಯ ಸಹಾಯದಿಂದ ಹಿಂಡಿ ರಸ ತೆಗೆದುಕೊಳ್ಳಬೇಕು. ಈ ರಸವನ್ನು ಕೂಡಲೇ ರೋಗಿಗಳಿಗೆ ಕುಡಿಸಬೇಕು. ಏಕೆಂದರೆ ರಸ ತೆಗೆದ ಅರ್ಧ ಗಂಟೆಯ ನಂತರ ರಸ ಸತ್ವಹೀನವಾಗಿಬಿಡುತ್ತದೆ. ರೋಗಿಯು ಈ ರಸವನ್ನು ಸಾವಕಾಶವಾಗಿ ಸೇವಿಸಬೇಕು. ಬೆಳಿಗ್ಗೆ ಮತ್ತು ಸಾಯಂಕಾಲ ಒಂದು ಸಾರಿಗೆ 30 ಎಂ.ಎಲ್ ನಂತೆ ರೋಗಿಗಳಿಗೆ ಈ ರಸ ಕೊಡಬೇಕು. ಈ ರಸದ ಸೇವನೆಯ ನಂತರ ಒಂದು ಲೋಟ ನೀರು ಕುಡಿಯಬೇಕು.
ಹಳೆಯ ರೋಗದಿಂದ ನರಳುತ್ತಿರುವವರಿಗೆ ದಿನಕ್ಕೆ ನಾಲ್ಕು ಬಾರಿ ಈ ರಸ ಕೊಡಬೇಕು. ಇಂತಹವರು ಪ್ರಾರಂಭದಲ್ಲಿ 8-10 ದಿನ ದೈನಂದಿನ ಆಹಾರ ಸೇವನೆಯನ್ನು ನಿಲ್ಲಿಸಿ ಆಗಾಗ ಎಳನೀರು(ಸೀಯಾಳ, ಬೊಂಡ) ಸೇವಿಸುತ್ತಿರಬೇಕು. ಮೊದಲ ಕೆಲವು ದಿನ ನೀವು 30 ಎಂ.ಎಲ್ ರಸ ಸೇವಿಸಿರಿ. ನಿಮ್ಮ ಶರೀರಕ್ಕೆ ಅದು ಒಗ್ಗುತ್ತದೆ, ಏನೂ ತೊಂದರೆಯಿಲ್ಲ ಎನಿಸಿದ ನಂತರ ಬೆಳಿಗ್ಗೆ ಮತ್ತು ಸಾಯಂಕಾಲ ಹೊತ್ತಿಗೆ 30 ಎಂ.ಎಲ್ ನಂತೆ ಒಟ್ಟು 60 ಎಂ.ಎಲ್ ಸೇವಿಸಬೇಕು. ಒಂದಿಷ್ಟು ಕಾಲ ಭೇದಿಯಾಗುವ ಪರಿಸ್ಥಿತಿ ಬಂದರೆ, ಹೊಟ್ಟೆ ತೊಳೆಸಿದಂತಾದರೆ ಒಂದೆರಡು ವಾರ ಈ ರಸದ ಸೇವನೆಯನ್ನು ನಿಲ್ಲಿಸಿ. ನಂತರ ಅಲ್ಪ ಪ್ರಮಾಣದಿಂದ ಪ್ರಾರಂಭಿಸಿ.
ಈ ರೀತಿ ಗೋಧಿ ಗಿಡದ ರಸವನ್ನು ಸೇವಿಸಿದರೆ 8-10 ದಿನಗಳಲ್ಲೇ ರೋಗಗಳೆಲ್ಲಾ ನಿವಾರಣೆಯಾಗತೊಡಗುತ್ತವೆ. 15-20 ದಿನಗಳಲ್ಲಿ ರೋಗಗಳು ಪೂರ್ಣ ಗುಣವಾಗುವುವು. ಉಲ್ಬಣಾವಸ್ಥೆಯಲ್ಲಿರುವ ಕಾಯಿಲೆಗಳಿಗೆ ಇನ್ನೂ ಕೆಲವು ದಿನ ರಸದ ಪ್ರಯೋಗ ಅಗತ್ಯ. ಮರಣಾವಸ್ಥೆಯಲ್ಲಿರುವ ರೋಗಿಯು ಕೂಡ 2-3 ತಿಂಗಳಲ್ಲೇ ಗುಣಮುಖನಾಗುವನು. ರಸ ತೆಗೆಯುವ ತಾಪತ್ರಯವೇ ಬೇಡವೆನಿಸಿದರೆ ಗಿಡಗಳನ್ನು ಸಣ್ಣ- ಸಣ್ಣ ಚೂರುಗಳಾಗಿ ಕತ್ತರಿಸಿ ಸಲಾಡ್(salad) ನಂತೆ ಸೇವಿಸಬಹುದು. ಬೇಕಿದ್ದರೆ ತರಕಾರಿಗಳನ್ನು ಸೇರಿಸಬಹುದು. ಬೇಕಿದ್ದರೆ ಗಿಡಗಳನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿದೂ ರಸವನ್ನು ಸೇವಿಸಬಹುದು. ಇದರಿಂದ ಹಲ್ಲು ಮತ್ತು ವಸಡುಗಳು ಗಟ್ಟಿಯಾಗುತ್ತವಲ್ಲದೆ ಬಾಯಿಯ ದುರ್ವಾಸನೆಯೂ ದೂರವಾಗುತ್ತದೆ.
ದಿನದ ಯಾವ ಸಮಯದಲ್ಲಿ ಬೇಕಾದರೂ ಈ ರಸ ಸೇವಿಸಲು ಅಡ್ಡಿಯಿಲ್ಲ. ಆದರೆ, ಇದನ್ನು ಸೇವಿಸಿದ ನಂತರ ಒಂದು ಅಥವಾ ಕನಿಷ್ಟ ಅರ್ಧ ಗಂಟೆಯವರೆಗೆ ಯಾವುದೇ ಘನ ಅಥವಾ ದ್ರವ ಅಹಾರಗಳನ್ನು ಸೇವಿಸಬಾರದು. ಪ್ರಾರಂಭದಲ್ಲಿ ಈ ರಸದ ಸೇವನೆಯಿಂದ ಹಲವರಿಗೆ ವಮನವಾದೀತು. ಆಮಶಂಕೆ, ಶೀತಾದಿಗಳಿಂದ ನರಳಬೇಕಾಗಬಹುದು. ಆದರೆ ಭಯ ಬೇಡ. ವಾಂತಿಯಾಗುವುದನ್ನು ನಿವಾರಿಸಲು ಗಿಡಗಳನ್ನು ಅರೆಯುವಾಗ ಬೆಳ್ಳುಳ್ಳಿ ಅಥವಾ ವೀಳೆಯದೆಲೆಯನ್ನು ಸೇರಿಸಿಕೊಳ್ಳಬಹುದು. ಆದರೆ ಲಿಂಬೆಯ ರಸ ಅಥವಾ ಉಪ್ಪನ್ನು ಉಪಯೋಗಿಸಲೇಬಾರದು.
ಈ ಗೋಧಿ ಗಿಡದ ರಸವು ಹಾಲು, ಮೊಸರು, ಮಾಂಸಾದಿಗಳಿಗಿಂತ ಅತ್ಯಧಿಕ ಸತ್ವಯುತವಾದುದು. ಆದ್ದರಿಂದ ರೋಗಿಯಿರಲಿ, ನಿರೋಗಿಯಿರಲಿ, ಮಗುವಿರಲಿ, ಮುದುಕನಿರಲಿ ಇದರ ಸೇವನೆಯಿಂದ ಬಹಳ ಲಾಭವುಂಟು. ಹೊಸದಾಗಿ ಹುಟ್ಟಿದ ಮಗುವಿಗೂ ಸಹ ಈ ರಸದ 5-6 ಹನಿಗಳನ್ನು ಕುಡಿಸಬಹುದು.
ವರ್ಷವಿಡೀ ಗಿಡದ ಪೂರೈಕೆಗೋಧಿ ಗಿಡದ ರಸವನ್ನು ನಾವು ವರ್ಷವಿಡೀ ಪಡೆಯುವುದು ಹೇಗೆ? ಈಗಾಗಲೇ ತಿಳಿಸಿರುವಂತೆ 10ರಿಂದ 20 ಕುಂಡಗಳು ನಿಮ್ಮ ಹತ್ತಿರ ಇವೆಯಲ್ಲವೇ? ಒಂದೊಂದು ದಿನ ಒಂದೊಂದು ಕುಂಡದಲ್ಲಿ ಗೋಧಿಯ ಕಾಳುಗಳನ್ನು ಬಿತ್ತುತ್ತಿದ್ದೀರಿ. ನೀವು 8 ಅಥವಾ 10ನೇ ಕುಂಡದಲ್ಲಿ ಗೋಧಿ ಕಾಳುಗಳನ್ನು ಬಿತ್ತುವ ದಿನ 1ನೇ ಕುಂಡದಲ್ಲಿನ ಗಿಡವು ಕೊಯ್ಲಿಗೆ ಬಂದಿರುತ್ತದೆ. ಆ ಕುಂಡದ ಗಿಡಗಳನ್ನು ಕಿತ್ತುಕೊಳ್ಳಿ. ಅದೇಕ್ಷಣದಲ್ಲಿ ಆ ಕುಂಡಕ್ಕೆ ಪುನಃ ಗೋಧಿಯ ಕಾಳುಗಳನ್ನು ಬಿತ್ತಿ. 2ನೇ ದಿನ 2ನೇ ಕುಂಡದ ಗಿಡಗಳನ್ನು ಕಿತ್ತ ನಂತರ ಆ ಕುಂಡದಲ್ಲಿ ಗೋಧಿಯ ಕಾಳುಗಳನ್ನು ಬಿತ್ತಿರಿ. ಹೀಗೆ ಯಾವ ಕುಂಡದಲ್ಲಿ ಗೋಧಿ ಗಿಡಗಳನ್ನು ಕೀಳುತ್ತೀರೋ ಆಯಾ ಕುಂಡದಲ್ಲಿ ಗೋಧಿ ಕಾಳುಗಳನ್ನು ಬಿತ್ತುತ್ತಾ ಬಂದರೆ 5-6 ಅಂಗುಲ ಎತ್ತರದ ಗೋಧಿ ಗಿಡಗಳು ವರ್ಷಪೂರ್ತಿ ನಿಮಗೆ ದೊರೆಯುತ್ತವೆ.
ಬಹು ಹಿಂದೆಯೇ ಗೊತ್ತಿತ್ತು: 1931ರಷ್ಟು ಹಿಂದೆಯೇ ಚಾರ್ಲ್ಸ್ ಸ್ಚನಾಬೆಲ್ ಎಂಬ ಆಹಾರ ವಿಜ್ಞಾನಿ ಗೋಧಿ ಹುಲ್ಲಿನ ಸಾಮರ್ಥ್ಯವನ್ನು ಕಂಡುಕೊಂಡಿದ್ದನು. ಗೋಧಿಯ ಹಾಗೂ ಇತರ ಧಾನ್ಯಗಳ ಹುಲ್ಲುಗಳನ್ನು (ಉದಾ: ಬಾರ್ಲಿ ಹುಲ್ಲು ಇತ್ಯಾದಿ) ಪೂರಕ ಆಹಾರವಾಗಿ ವ್ಯಾಪಕವಾಗಿ ಬಳಸಲಾಗುತಿತ್ತು. ಯಾವಾಗ ಔಷಧೋತ್ಪನ್ನ ಕೈಗಾರಿಕೆಗಳು ಹುಟ್ಟಿಕೊಂಡು ರಾಸಾಯನಿಕ ಅನ್ನಾಂಗಗಳ ತಯಾರಿಕೆ ಪ್ರಾರಂಭವಾಯಿತೋ ಆಗ ಜನರ ಗಮನ ಆ ಕಡೆ ಹರಿದು ಗೋಧಿ ಹುಲ್ಲಿನ ಬಳಕೆ ಹಿಂದೆ ಬಿತ್ತು. ಆದರೆ, ಈ ರಾಸಾಯನಿಕ ಅನ್ನಾಂಗಗಳು ಗೋಧಿ ಹುಲ್ಲಿನಿಂದ ದೊರೆಯುವ ತಾಜಾ ಅನ್ನಾಂಗಗಳಿಗೆ ಸಮವಲ್ಲ.
1960ರಲ್ಲಿ ಅನ್ ವಿಗ್ಮೋರ್ ಎಂಬ ವೈದ್ಯೆ ಚಿಕಿತ್ಸೆಗೆ ಬಗ್ಗದ ತನ್ನ ದೊಡ್ಡ ಕರುಳಿನ ಊತವನ್ನು ಗೋಧಿ ಹುಲ್ಲಿನ ಚಿಕಿತ್ಸೆಯಿಂದ ಗುಣಪಡಿಸುವಲ್ಲಿ ಯಶಸ್ವಿಯಾದರು. ನಂತರ ಈಕೆಯು ಕಾಯಿಲೆಗಳಿಂದ ನರಳುತ್ತಿದ್ದ ನೆರೆಹೊರೆಯ ಅನೇಕರಿಗೆ ಈ ಹುಲ್ಲಿನ ಚಿಕಿತ್ಸೆ ನೀಡಿದಾಗ ಅವರೆಲ್ಲರೂ ಗುಣಮುಖರಾಗಿ ನವಚೈತನ್ಯ ಪಡೆದರು. ಇದರಿಂದ ಉತ್ತೇಜಿತರಾದ ವಿಗ್ಮೋರ್ “ಹಿಪ್ಪೋಕ್ರೇಟ್ಸ್ ಹೆಲ್ತ್ ಇನ್ಸ್ಟಿಟ್ಯೂಟ್” – ಎಂಬ ತನ್ನದೇ ಚಿಕಿತ್ಸಾಲಯದಲ್ಲಿ ಗಂಭೀರವಾದ ಕಾಯಿಲೆಗಳಿಂದ ನರಳುತ್ತಿದ್ದ ಅನೇಕ ರೋಗಿಗಳನ್ನು ಗೋಧಿ ಹುಲ್ಲಿನ ಚಿಕಿತ್ಸೆಯಿಂದ ಯಶಸ್ವಿಯಾಗಿ ಗುಣಪಡಿಸಿದರು.
ಈ ಹುಲ್ಲಿನಲ್ಲಿ ಏನೇನಿವೆ? ಒಂದು ಟೀ ಚಮಚದಷ್ಟು ಗೋಧಿ ಹುಲ್ಲಿನ ರಸದಲ್ಲಿ 10ರಿಂದ 15 ಕ್ಯಾಲೊರಿಗಳು ಮಾತ್ರ ಇವೆ. ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲ. ಹತ್ತಿರ ಹತ್ತಿರ 1 ಗ್ರಾಂ.ನಷ್ಟು ಪ್ರೊಟೀನ್ ಇದೆ. ಉಪಯುಕ್ತ ಅಮೀನೋ ಆಮ್ಲಗಳಲ್ಲಿ ಎಲ್ಲ ಎಂಟು ಬಗೆ ಈ ರಸಗಳಲ್ಲಿವೆ. ಗೋಧಿ ಹುಲ್ಲಿನ ರಸದಲ್ಲಿ ಅನ್ನಾಂಗಗಳಾದ  ಎ, ಬಿ1, ಬಿ2, ಬಿ3, ಬಿ4, ಬಿ6, ಬಿ8 ಮತ್ತು ಬಿ12, ಸಿ ಇ ಮತ್ತು ಕೆ ಗಳಿವೆ. ಹಾಗೆಯೇ 1 ಟೀ ಚಮಚ ಗೋಧಿ ಹುಲ್ಲಿನ ರಸದಲ್ಲಿ 15 ಎಂ.ಜಿ ಕ್ಯಾಲ್ಸಿಯಂ, 8 ಎಂಸಿಜಿ ಅಯೋಡಿನ್, 3.5 ಎಂಸಿಜಿ ಸೆಲೆನಿಯಂ, 870 ಎಂಸಿಜಿ ಕಬ್ಬಿಣ, 62 ಎಂಸಿಜಿ ಸತುವುಗಳಲ್ಲದೆ ಅನೇಕ ಇತರ ಖನಿಜಾಂಶಗಳಿವೆ.ಗೋಧಿ ಹುಲ್ಲಿನ ರಸವನ್ನು ಉಪಯುಕ್ತವಾಗುವಂತೆ ಮಾಡುವ  ಇನ್ನೂ ಇತರ ನಾಲ್ಕು ಘಟಕಗಳಿವೆ.
ಯಾವುವು ಆ ಘಟಕಗಳು? ಆ ಘಟಕಗಳಾವುವೆಂದರೆ,
ಅ) ಸೂಪರ್ ಆಕ್ಸೈಡ್ ಡಿಸ್ಮ್ಯೂಟೇಸ್(super oxide dismutase)
ಆ) ಪಿ4 ಡಿ1
ಇ) ಮ್ಯೂಕೋ ಪಾಲಿಸ್ಯಾಕ್ಚೆರೈಡ್ಸ್(Muco-palisaccharides) ಹಾಗೂ
ಈ) ಕ್ಲೋರೋಫಿಲ್( chlorophyll-ಪತ್ರಹರಿತ್ತು)
ಮೊದಲನೆಯದಾದ ಸೂಪರ್ ಆಕ್ಸೈಡ್ ಡಿಸ್ಮ್ಯೂಟೇಸ್ ಎಂಬ ಘಟಕವು ಕ್ಯಾನ್ಸರ್ ನಿರೋಧಕವೆಂದು ಕಂಡುಬಂದಿದೆ. ಇದು ಹೇಗೆಂದರೆ, ಕ್ಯಾನ್ಸರ ಪೀಡಿತ ಜೀವಕೋಶದಲ್ಲಿ ಈ ಘಟಕದ ಕೊರತೆ ಇರುತ್ತದಂತೆ. ಆ ಕೊರತೆಯನ್ನು ಗೋಧಿ ಹುಲ್ಲಿನ ಸೇವನೆಯಿಂದ ತುಂಬಿಬಿಟ್ಟರೆ ಆ ಜೀವಕೋಶದಲ್ಲಿ ಕ್ಯಾನ್ಸರ್ ಇರುವುದಿಲ್ಲ. ಇನ್ನು ಎರಡನೆಯ ಘಟಕ ಪಿ4ಡಿ1 ಎಂಬುದರ ವಿಚಾರ: ಇದು ಗೋಧಿ ಹುಲ್ಲಿನಲ್ಲಿರುವ “ಗ್ಲೂಕೋ-ಪ್ರೊಟೀನ್”. ಇದರಲ್ಲಿ ಮುಖ್ಯವಾಗಿ ಮೂರು ಭಾಗಗಳಿವೆ. ಮೊದಲನೆಯದಾಗಿ ಇದು ಆಂಟಿಆಕ್ಸಿಡಂಟ್ ಆಗಿ ಕೆಲಸ ಮಾಡುತ್ತದೆ. ಅಲ್ಲದೆ ಇದು ಆರ್ ಎನ್ ಎ ಮತ್ತು ಡಿ ಎನ್ ಎ ಗಳನ್ನು ಪುನರುಜ್ಜೀವನಗೊಳಿಸುವುದು. ಆರ್ ಎನ್ ಎ ಮತ್ತು ಡಿ ಎನ್ ಎ ಗಳು ಶರೀರ ನಿರ್ಮಾಣ ವಸ್ತುಗಳು. ಪಿ4 ಡಿ1 ಘಟಕವು ಜೀವಕೋಶಗಳು ಕ್ಷೀಣೀಸುವಿಕೆ ಅಥವಾ ಬದಲಾವಣೆಯನ್ನು ನಿಧಾನಗೊಳಿಸುತ್ತದೆ ಅಥವಾ ಇಲ್ಲವಾಗಿಸುತ್ತದೆ.
ಎರಡನೆಯದಾಗಿ ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಕೀಲು ನೋವಿನಂತಹ ಉರಿಯೂತ ಪರಿಸ್ಥಿತಿಯಲ್ಲಿ ಗೋಧಿ ಹುಲ್ಲಿನ ಪ್ರಯೋಗದಿಂದ ಆಶ್ಚರ್ಯಕರ ಪರಿಣಾಮವುಂಟಾಗುತ್ತದೆಂಬುದು ಕಂಡುಬಂದಿದೆ. ಪಿ4ಡಿ1 ನ 3ನೆಯ ಅಂಶವೆಂದರೆ, ಕ್ಯಾನ್ಸರ್ ಕೋಶಗಳನ್ನು ಆಕ್ರಮಿಸಿ ಅವುಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆಂದು ನಂಬಲಾಗಿದೆ. ಮೂರನೆಯ ಘಟಕ ಮೂಕೊಪಾಲಿಸ್ಯಾಕ್ಚರೈಡ್ಸ್. ಇದು ಶರೀರದ ದುರಸ್ತಿ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ. ಅಲ್ಲದೇ ಇದು ಹಾನಿಗೊಂಡ ಹೃದಯ ಹಾಗೂ ಆರ್ಟರಿ ಟಿಶ್ಯೂವನ್ನು ದುರಸ್ತಿಗೊಳಿಸಲು ಸಹಾಯಕ ಕೂಡ.
4ನೆಯ ಘಟಕ ಪತ್ರಹರಿತ್ತು. ರಾಸಾಯನಿಕವಾಗಿ ಇದು ಹಿಮೊಗ್ಲೋಬಿನ್ ಗೆ ಸರಿಸಮಾನ. ಪತ್ರಹರಿತ್ತಿನಲ್ಲಿ 3 ರೀತಿಯ ಲಾಭಗಳಿವೆ. ಇದು ಗಾಯಗಳ ಮೇಲೆ ಬ್ಯಾಕ್ಟೀರಿಯಾ ನಿರೋಧಕವಾಗಿ ಕೆಲಸ ಮಾಡುತ್ತದೆ. ಜೀರ್ಣಾಂಗಗಳಲ್ಲಿ ಯೀಸ್ಟ್ (yeast) ನಿರೋಧಕದಂತೆ ಕೆಲಸ ಮಾಡಿದರೆ, ಶರೀರದಲ್ಲಿರುವ ಅನೇಕ ವಿಷಕಾರಕ ವಸ್ತುಗಳನ್ನು ನಿವಾರಿಸುತ್ತದೆ. ಜೊತೆಗೆ ಇದು ಉರಿಯೂತ ನಿವಾರಕ ಗುಣವನ್ನು ಪಡೆದಿದೆ. ಹಾಗಾಗಿ ಇದನ್ನು ಕೀಲು ನೋವು, ಹೊಟ್ಟೆಯ ಅಲ್ಸರ್, ಗಂಟಲು ನೋವು, ದೊಡ್ಡ ಕರುಳಿನ ಊತ ಹಾಗೂ ಇತರ ಉರಿಯೂತಗಳಲ್ಲಿ ಈ ಹಿಂದೆಯೇ ಹೇಳಿದ ಹಾಗೆ ಗೋಧಿ ಗಿಡದ ಪತ್ರಹರಿತ್ತು ಉಪಯುಕ್ತ.
ಸಂಪೂರ್ಣ ಆಹಾರ: ಗೋಧಿಯ ಹುಲ್ಲನ್ನು ಒಂದು ಸಂಪೂರ್ಣ ಆಹಾರ ಎಂದು ತೀರ್ಮಾನಿಸಲಾಗಿದೆ. ಏಕೆಂದರೆ ಅದರಲ್ಲಿ ಮಾನವನ ಶರೀರ ಪೋಷಣೆಗೆ ಬೇಕಾಗುವ ಎಲ್ಲ ಅಮೀನೋ ಆಮ್ಲ, ಆನ್ನಾಂಗ ಹಾಗೂ ಖನಿಜಗಳು ಇವೆ.
1 ಔನ್ಸ್ ಗೋಧಿ ಹುಲ್ಲಿನ ರಸವು 2.5 ಪೌಂಡ್ ತರಕಾರಿಗಳಲ್ಲಿರುವಷ್ಟು ಪೌಷ್ಟಿಕಾಂಶಕ್ಕೆ ಸಮ. 1 ಔನ್ಸ್ ಗೋಧಿ ಹುಲ್ಲಿನ ರಸದಲ್ಲಿ 1 ಔನ್ಸ್ ಕಿತ್ತಲೆ ಹಣ್ಣಿನ ರಸದಲ್ಲಿರುವುದಕ್ಕಿಂತಲೂ ಹೆಚ್ಚು ಪ್ರಮಾಣದ ‘ಸಿ’ ಅನ್ನಾಂಗವಿರುತ್ತದೆ. 1 ಔನ್ಸ್ ಕ್ಯಾರೆಟ್ ರಸದಲ್ಲಿರುವುದರ ಎರಡು ಪಟ್ಟು ‘ಎ’ ಅನ್ನಾಂಗವು ಅಷ್ಟೇ ಪ್ರಮಾಣದ ಗೋಧಿ ಹುಲ್ಲಿನ ರಸದಲ್ಲಿರುತ್ತದೆ. 25 ಎಂಎಲ್ ಗೋಧಿ ಹುಲ್ಲಿನ ರಸದಲ್ಲಿ 1 ಕೆಜಿ ತರಕಾರಿಯಲ್ಲಿರುವಷ್ಟೇ ಅನ್ನಾಂಗಗಳು, ಖನಿಜಾಂಶಗಳು ಹಾಗೂ ಅಮೀನೋ ಆಮ್ಲಗಳು ಇರುತ್ತವೆಂದು ತಿಳಿದು ಬಂದಿದೆ.
ಒಂದು ಎಚ್ಚರಿಕೆ: ಗೋಧಿ ಹುಲ್ಲಿನ ರಸದಲ್ಲಿ ‘ಕೆ’ ಅನ್ನಾಂಗವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ರಕ್ತವನ್ನು ಹೆಪ್ಪುಗಟ್ಟಿಸುವ ಗುಣವನ್ನು ಹೊಂದಿದೆ. ಆದ ಕಾರಣ, ರಕ್ತವನ್ನು ತೆಳುವಾಗಿಸುವ ಚಿಕಿತ್ಸೆ ಪಡೆಯುತ್ತಿರುವವರು, ಗೋಧಿಯ ಅಲರ್ಜಿ ಇರುವವರು ವೈದ್ಯರ ಮೇಲುಸ್ತುವಾರಿ ಇಲ್ಲದೇ ಗೋಧಿ ಹುಲ್ಲಿನ ಸೇವನೆ ಮಾಡಕೂಡದು.
Written by Dr G V Ganeshayya and Published by Kanaja

ಡಿಡಿಟಿಯ ಪುನರಾಗಮನ!?


ಕಳೆದ ಐದು ವರ್ಷಗಳ ಹಿಂದೆ ಇಡೀ ಭೂಖಂಡದಿಂದಲೇ ಉಚ್ಛಾಟನೆಗೊಂಡಿದ್ದ ಡಿಡಿಟಿ ಎನ್ನುವ ಭಯಂಕರ ಕೀಟನಾಶಕ ಇಂದು ಮನೆಯೊಳಗೇ ನುಗ್ಗಲು ತಯಾರಾಗಿದೆ.  ಕಾರಣ ಮಲೇರಿಯಾ!!!
ಮೊದಲು ಸ್ವಲ್ಪ ಡಿಡಿಟಿಯ ಇತಿಹಾಸ ನೋಡೋಣ.
ಇಸವಿ ೧೯೩೯ ಡೈಕ್ಲೋರೋ ಡೈಫಿನೈಲ್ ಟ್ರೈಕ್ಲೋರೋ ಈಥೇನ್ (DDT)ಯನ್ನು ಸ್ವಿಸ್ ರಾಸಾಯನಶಾಸ್ತ್ರಜ್ಞ ಪಾಲ್ ಮುಲ್ಲರ್ ಕಂಡುಹಿಡಿದನು.  ಇಸವಿ ೧೯೪೨-೪೩ರಲ್ಲಿ ಇದನ್ನು ಬೆಳೆಗಳಿಗೆ ಬಳಸಲಾಯಿತು.  ಎರಡನೇ ವಿಶ್ವಯುದ್ಧದಲ್ಲಿ ಹೇನುನಾಶಕವಾಗಿಯೂ ಬಳಸಲಾಯಿತು.  ಧಾನ್ಯಗಳನ್ನು ನಾಶ ಮಾಡುವ ಕೀಟಗಳು ಹಾಗೂ ಕಾಯಿಲೆಗಳಿಗೆ ಕಾರಣವಾಗುವ ಕೀಟಗಳಿಗೆಲ್ಲಾ ಇದೊಂದು ಪರಿಣಾಮಕಾರಿ ನಾಶಕ ಎಂದು ವಿಶ್ವದಾದ್ಯಂತ ಪ್ರಚಾರ ಪಡೆಯಿತು.  ಇಸವಿ ೧೯೪೮ರಲ್ಲಿ ಮುಲ್ಲರ್‌ಗೆ ನೋಬಲ್ ಬಹುಮಾನ ಬಂತು.
ಅತ್ಯಂತ ವಿಷಯುಕ್ತವಾದ ಡಿಡಿಟಿಯಿಂದ ಕೃಷಿಕೀಟ, ಕಾಡಿನ ಕೀಟಗಳೊಂದೇ ಅಲ್ಲ, ಸೊಳ್ಳೆಗಳ ನಿಯಂತ್ರಣವೂ ಸಾಧ್ಯ ಎನ್ನುವುದನ್ನು ಮೊದಲು ಯುರೋಪ್, ಆಮೇಲೆ ಅಮೇರಿಕಾ ಕಂಡುಕೊಂಡಿತು.
ಇದರ ಹಿಂದೆ ಕ್ಲೋರ್‌ಡೆನ್, ಎಂಡ್ರಿನ್, ಆಲ್ಪ್ರಿನ್… ಹೀಗೆ ಅನೇಕ ಕೀಟನಾಶಕಗಳು…ಅಲ್ಲ…ವಿಷಗಳು ಬಂದವು.  ಈ ರೀತಿಯ ರಾಸಾಯನಿಕಗಳ ಉತ್ಪಾದನೆ ವಿಶ್ವದಲ್ಲಿ ೭ ಮಿಲಿಯನ್ ಟನ್‌ಗಳು ಎಂಬುದು ಒಂದು ಕನಿಷ್ಠ ಅಂದಾಜು ಮಾತ್ರ.
ಇಸವಿ ೧೯೪೬ರಲ್ಲಿಯೇ ಡಿಡಿಟಿಗೆ ವಿರೋಧವೂ ಬಂತು.  ಇದರಲ್ಲಿರುವ ವಿಷ ಶತ್ರುಕೀಟಗಳಿಗೆ ಮಾತ್ರವಲ್ಲ, ಇಡೀ ಪರಿಸರಕ್ಕೆ ಅಪಾಯಕಾರಿ ಎನ್ನುವ ವಿಚಾರ ವಿರೋಧಿಗಳದು.  ಆದರೆ ಡಿಡಿಟಿಯ ಜನಪ್ರಿಯತೆಯ ಮುಂದೆ ವಿರೋಧಿಗಳ ಕೂಗು ಕ್ಷೀಣವಾಗಿತ್ತು.
೧೯೫೦ರ ಹೊತ್ತಿಗೆ ಸಂಶೋಧನಾ ಕಾರ್ಯ ಹೆಚ್ಚಿತು.  ಸುಮಾರು ೧೨ ವರ್ಷಗಳ ನಂತರ ಮರದ ತೊಗಟೆಗಳಲ್ಲಿ ಡಿಡಿಟಿ ಮಿತಿಮೀರಿದ ಪ್ರಮಾಣದಲ್ಲಿರುವುದು ಪತ್ತೆಯಾಯಿತು. ಅದೇ ಸಮಯದಲ್ಲಿ ಫ್ಲೋರಿಡಾದ ಎವರ್‌ಗ್ಲೇಡ್‌ನಲ್ಲಿನ ಮೊಸಳೆಗಳು ಅಂಗವಿಕಲವಾಗಿ ಜನಿಸತೊಡಗಿದವು.  ವಿಶಾಲ ಹುಲ್ಲುಗಾವಲಿನ ಪಕ್ಕದ ಸರೋವರದ ನೀರು ಪೂರ್ತಿ ವಿಷ ರಾಸಾಯನಿಕಗಳ ಸರೋವರವಾಗಿತ್ತು.  ಉತ್ತರ ಅಮೇರಿಕಾ ಹಾಗೂ ಭಾರತದಲ್ಲಿ ಹದ್ದುಗಳ ವಂಶ ನಾಶವಾಗತೊಡಗಿತು.  ಹದ್ದುಗಳು ಸಸ್ಯಾಹಾರಿಗಳಲ್ಲ.  ಆದರೆ ಈ ಕೀಟನಾಶಕದೊಂದಿಗೆ ಜೀವಿಸಿದ್ದ ಕಪ್ಪೆ, ಕೀಟ, ಕೋಳಿಗಳನ್ನು, ಸತ್ತಪ್ರಾಣಿಗಳನ್ನು ತಿನ್ನುತ್ತಿದ್ದವು.  ಇವುಗಳೊಳಗಿದ್ದ ಡಿಡಿಟಿಯು ಹದ್ದಿನ ಮೊಟ್ಟೆಗಳ ಕವಚಗಳನ್ನು ಶಿಥಿಲಗೊಳಿಸುತ್ತಿತ್ತು.  ಅಂದರೆ ಡಿಡಿಟಿ ಮೂರು ತಡೆಗಳನ್ನು ದಾಟಿಯೂ ಉಳಿಯುವಷ್ಟು ತೀವ್ರತೆ ಹೊಂದಿತ್ತು.  ಅದೇ ರೀತಿ ಎದೆಹಾಲು ಕುಡಿಯುತ್ತಿರುವ ಮಗುವಿನಲ್ಲೂ ಡಿಡಿಟಿಯ ಅಂಶ ಪತ್ತೆಯಾಯಿತು.
ಇದೇ ಸಮಯದಲ್ಲಿ ಗ್ರೇಟ್ ಬ್ರಿಟನ್ ಹಾಗು ಜಪಾನ್‌ಗಳಲ್ಲಿ ರಾಸಾಯನಿಕ ಕೀಟನಾಶಕಗಳ ವಿರುದ್ಧ ದೊಡ್ಡ ಆಂದೋಲನ ನಡೆಯಿತು.  ಜಪಾನ್‌ನ ಮೀನಮಾಟದಲ್ಲಿ ಹುಟ್ಟುವಾಗಿನ ಅಂಗವೈಕಲ್ಯದಿಂದ ಹಿಡಿದು ಯಾವುದೇ ವಯಸ್ಸಿನಲ್ಲೂ ಇದ್ದಕ್ಕಿದ್ದಂತೆ ನರದೌರ್ಬಲ್ಯ ಉಂಟಾಗುವಿಕೆ ದಾಖಲಾಯಿತು.
ಡಿಡಿಟಿ ಹಾಗೂ ಇತರ ರಾಸಾಯನಿಕ ವಿಷಗಳನ್ನು ಮನೆಯಲ್ಲಿಟ್ಟುಕೊಂಡರೂ ಸಾಕು, ಆತ್ಮಹತ್ಯಾ ಭಾವನೆಗಳು ಹೆಚ್ಚುತ್ತದೆ ಎಂಬುದೂ ಸಹ ಸಾಬೀತಾಯಿತು.  ಜೊತೆಗೆ ನಿರಂತರ ಸಹಚರ್ಯೆಯಿಂದ ಲ್ಯುಕೇಮಿಯಾ, ಮೈಲೋಮಾ, ಲಿಂಫೋಮಾ ಕ್ಯಾನ್ಸರ್ ಪ್ರಕರಣ ರಾಶಿ ರಾಶಿ ಹೊರಹೊಮ್ಮಿದವು.  ಹೃದಯಾಘಾತ ಹೆಚ್ಚಿತು.
ದೊಡ್ಡ ಜೀವಿಗಳು ಬಲಿಯಾಗುವುದು ಹೆಚ್ಚಿದಷ್ಟೂ ಕೀಟಗಳು ಪ್ರತಿರೋಧ ಬೆಳೆಸಿಕೊಳ್ಳತೊಡಗಿದವು.  ೧,೦೦೦ ರೀತಿಯ ಕೀಟಗಳು ಡಿಡಿಟಿಯನ್ನು ಇಂದು ಸುಲಭವಾಗಿ ಜೀರ್ಣಿಸಿಕೊಳ್ಳುತ್ತವೆ.  ಅವುಗಳ ವಂಶವಾಹಿಯಲ್ಲೇ ಪ್ರತಿರೋಧ ಬೆಳೆದಿದೆ ಎನ್ನುತ್ತಾರೆ ವಂಶವಾಹಿ ತಂತ್ರಜ್ಞರು.
ಮಲೇರಿಯಾ V/s ಡಿಡಿಟಿ
ಪರ-ವಿರೋಧಗಳ ಗದ್ದಲ ನಡೆಯುತ್ತಿರುವಾಗಲೇ ಜೀನಸ್ ಅನಾಫಿಲಿಸ್ ಕುಟುಂಬಕ್ಕೆ ಸೇರಿದ ೬೦ ಜಾತಿಯ ಸೊಳ್ಳೆಗಳು ಡಿಡಿಟಿಯಿಂದ ನಿರ್ವಂಶವಾಗತೊಡಗಿದವು.  ಎರಡನೇ ಮಹಾಯುದ್ಧದ ನಂತರ ವಿಶ್ವವನ್ನೇ ಆತಂಕದಿಂದ ಗಡಗಡ ನಡುಗಿಸಿದ್ದ ಮಲೇರಿಯಾವು ಡಿಡಿಟಿಯಿಂದ ನಿಯಂತ್ರಣಕ್ಕೆ ಬಂದಿದ್ದು ಎಲ್ಲರಿಗೂ ಸೋಜಿಗವನ್ನುಂಟುಮಾಡಿತ್ತು.
ವಿಷಯದ ಆಳಕ್ಕಿಳಿದಾಗ ಮಲೇರಿಯಾಕ್ಕೆ ಕಾರಣವಾಗುವ ಪ್ಲಾಸ್ಮೋಡಿಯಂ ಎನ್ನುವ ಭಯಂಕರ ಪರಾವಲಂಬಿ ಜೀವಿ ಎದುರಿಗೆ ಬಂದಿತು.  ಇದು ಕೊಳಚೆ ನೀರಿನಲ್ಲಿರುವ ಸೂಕ್ಷ್ಮಜೀವಿ.  ಏನೆಲ್ಲಾ ರಾಸಾಯನಿಕ ವಿಷಗಳಿಗೆ ಪ್ರತಿರೋಧ ಹೊಂದಿರುವ ಕ್ರಿಮಿ.  ಆದರೆ ಇದು ಮಾನವನ ದೇಹದೊಳಗೆ ತಾನಾಗಿಯೇ ಪ್ರವೇಶ ಮಾಡಲು ಸಾಧ್ಯವಿಲ್ಲ.  ಮಾಧ್ಯಮವಾಗಿ ಅನಾಫಿಲಿಸ್ ಕುಟುಂಬದ ಸೊಳ್ಳೆಗಳೇ ಬೇಕು ಹಾಗೂ ಅದೊಂದೇ ಮಾರ್ಗ ಕೂಡ.
ಕೊಳಚೆಯಲ್ಲೇ ಹುಟ್ಟುವ ಅನಾಫಿಲಿಸ್ ಸೊಳ್ಳೆಗಳೊಳಗೆ ಫ್ಲಾಸ್ಮೋಡಿಯಂ ಸೇರಿಕೊಂಡು ತನ್ನ ಜೀವನಚಕ್ರ ನಡೆಸುತ್ತದೆ.  ಅನಾಫಿಲಿಸ್ ತನ್ನ ಜೀವನಚಕ್ರ ಪೂರೈಸಲು ಮನುಷ್ಯನ (ಪ್ರಾಣಿಗಳ) ರಕ್ತಕ್ಕೋಸ್ಕರ ಕಚ್ಚಿದಾಗ ಫ್ಲಾಸ್ಮೋಡಿಯಂ ಮನುಷ್ಯನ ದೇಹದೊಳಗೆ ತೂರಿಕೊಳ್ಳುತ್ತದೆ.  ಹಾಗಂತ ಫ್ಲಾಸ್ಮೋಡಿಯಂ ಅನಾಫಿಲಿಸ್‌ಗೆ ಅಪಾಯಕಾರಿಯಲ್ಲ.
ಪ್ರತಿವರ್ಷ ವಿಶ್ವದಲ್ಲಿ ೫೦ ಕೋಟಿ ಜನರು ಮಲೇರಿಯಾಕ್ಕೆ ತುತ್ತಾದರೆ ೧೦ ಲಕ್ಷ ಜನ ಮಲೇರಿಯಾದಿಂದ ಸಾಯುತ್ತಾರೆ. ಅಷ್ಟೇ ಅಲ್ಲ, ಪ್ರತಿಸಾರಿಯೂ ಮಲೇರಿಯಾಕ್ಕೆ ಹೊಸ ರಾಸಾಯನಿಕ ಸಂಯುಕ್ತಗಳೇ ನಿಯಂತ್ರಿಸಲು ಬೇಕು.  ಮಲೇರಿಯಾವನ್ನು ಇಂದಿಗೂ ಮೊದಲ ಹಂತದಲ್ಲಿದ್ದಾಗ ಮಾತ್ರ ನಿಯಂತ್ರಿಸಬಹುದಾಗಿದೆ.
ಆಫ್ರಿಕಾ, ಬಾರತ, ದಕ್ಷಿಣಾ ಅಮೇರಿಕಾ ಮುಂತಾದ ಉಷ್ಣವಲಯವಿರುವ ಪ್ರದೇಶಗಳಲ್ಲಿ ಮಲೇರಿಯಾಕ್ಕೆ ಹಸುಮಕ್ಕಳೂ ಬಲಿಯಾಗುತ್ತಾರೆ.
ಇಸವಿ ೧೯೫೫ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು [WHO], ಮಲೇರಿಯಾವು ಡಿಡಿಟಿಗಿಂತಲೂ ೧,೦೦೦ ಪಟ್ಟು ಹೆಚ್ಚು ಭೀಕರ. ಅದಕ್ಕಾಗಿ ಡಿಡಿಟಿಯು ವಿಷವಾದರೂ ಅತ್ತ್ಯುತ್ತಮ ಸೊಳ್ಳೆನಿಯಂತ್ರಕ. ಈ ಮೂಲಕ ಮಲೇರಿಯಾ ನಿಯಂತ್ರಕವಾಗಿದೆ ಎಂದು ಹೇಳಿಕೆ ನೀಡಿತು. ಅದಕ್ಕಾಗಿ ಮಲೇರಿಯಾ ನಿಯಂತ್ರಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಡಿಡಿಟಿಯನ್ನು ಬಳಸಬಹುದು ಎಂದಿತು. ಆದರೆ ಡಿಡಿಟಿಯನ್ನು ೮೫ ದೇಶಗಳು ಆಗಲೇ ಹೊರಹಾಕಿದ್ದವು.  ಅದನ್ನು ಕೊಂಚ ಕೂಡ ಒಳಸೇರಿಸಲು ಅವು ಒಪ್ಪಲಿಲ್ಲ. ಆದರೆ ಬಡದೇಶಗಳಲ್ಲಿ ಸುಲಭ ಬೆಲೆ, ಸುಲಭ ಮಾರ್ಗದಲ್ಲಿ ಸೊಳ್ಳೆನಾಶಕ್ಕೆ ಡಿಡಿಟಿಯೊಂದೇ ಮೂಲವಸ್ತುವಾಗಿತ್ತು.
ಇಸವಿ ೧೯೯೩ರಲ್ಲಿ WHO ಮತ್ತೆ ತನ್ನ ನೀತಿಯನ್ನು ಮರು ಪರಿಶೀಲಿಸಿತು.  ಕೇವಲ ಒಳಾಂಗಣಕ್ಕೆ ಮಾತ್ರ ಡಿಡಿಟಿ ಬಳಸಿ ಎಂದು ತಿಳಿಸಿತು.  ಇಸವಿ ೧೯೯೮ರಲ್ಲಿ ಮಲೇರಿಯಾವನ್ನು ಹಿಮ್ಮೆಟ್ಟಿಸಿ ಎಂದು ನಡೆದ ಅಭಿಯಾನದಲ್ಲೂ ಅತ್ಯಂತ ನಿಯಂತ್ರಿತ ರೀತಿಯಲ್ಲಿ ಡಿಡಿಟಿ ಬಳಸಬಹುದೆಂದೇ ಹೇಳಲಾಗಿತ್ತು.  ಆದರೆ ಅದರೊಂದಿಗೆ ಇನ್ನಿತರ ಉಪಾಯಗಳನ್ನು ಸಂಶೋಧನೆ ಮಾಡಲಾಗಿತ್ತು.
ಇಸವಿ ೨೦೦೧ರಲ್ಲಿ ಸ್ಟಾಕ್‌ಹೋಂನಲ್ಲಿ ನಡೆದ ವಿಶ್ವ ಪರಿಸರ ಸಮಾವೇಶದಲ್ಲಿ ಡಿಡಿಟಿಯೊಂದಿಗೆ ಇತರ ೧೨ ರಾಸಾಯನಿಕ ವಿಷಗಳನ್ನು ಉತ್ಪಾದನೆ ಮಾಡಲೇಬಾರದು ಎನ್ನುವ ನಿರ್ಣಯ ಮಾಡಲಾಯಿತು.
ವರ್ತಮಾನದ ಪರಿಸ್ಥಿತಿ
ಇಸವಿ ೨೦೦೬ರ ಮೇ ೨ರಂದು ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಎನ್ನುವ ಅಂತಾರಾಷ್ಟ್ರೀಯ ಅಭಿವೃದ್ಧಿನಿರತ ಸಂಸ್ಥೆಯೊಂದರ ಸಲಹೆಯಂತೆ WHO ಮತ್ತೆ ಡಿಡಿಟಿಯನ್ನು ನಿಯಂತ್ರಿತ ಪ್ರಮಾಣದಲ್ಲಿ ಮನೆಯೊಳಗೆ ಬಳಸಿ ಮಲೇರಿಯಾ ತಡೆಯಿರಿ ಎಂದು ಅನುಮತಿ ನೀಡಿದೆ.
ಇದಕ್ಕೆ ಪುರಾವೆಗಳನ್ನೂ ನೀಡಿದೆ. ಇಸವಿ ೧೯೪೯ರಲ್ಲಿ ಯುನೈಟೆಡ್ ಸ್ಟೇಟ್ಸ್ ಮಲೇರಿಯಾದಿಂದ ಮುಕ್ತವಾಗಲು ಕಾರಣ ಡಿಡಿಟಿ.  ಅನಂತರ ಇಸವಿ ೧೯೬೯ರವರೆಗೆ ಯುರೋಪ್, ಭಾರತ, ದಕ್ಷಿಣ ಅಮೇರಿಕಾ, ಆಫ್ರಿಕಾ ಮುಂತಾದ ದೇಶಗಳು ಮಲೇರಿಯಾದಿಂದ ಭಾಗಶಃ ಮುಕ್ತರಾಗಲು ಕಾರಣ ಡಿಡಿಟಿ.  ಇದರೊಂಡಿಗೆ WHO ತಾನೇ ಕ್ಷೇತ್ರಕ್ಕಿಳಿದು ಪರೀಕ್ಷೆ ನಡೆಸಿತು.  ದಕ್ಷಿಣಪೂರ್ವ ದೇಶಗಳಾದ ಯೆಮನ್, ಸೂಡಾನ್ ಮುಂತಾದ ದೇಶಗಳಲ್ಲಿ ಆರ್ಗ್ಯಾನೋ ಕ್ಲೋರಿನ್, ಫೈರಿಥ್ರಾಯಿಡ್ಸ್, ಆರ್ಗ್ಯಾನೋ ಪಾಸ್ಫೇಟ್ ಹಾಗೂ ಕಾರ್ಬಮೇಟ್ಸ್ ಮುಂತಾದ ರಾಸಾಯನಿಕ ಸಂಯುಕ್ತಗಳಿರುವ ಕೀಟನಾಶಕಗಳನ್ನು ಬಳಸಲಾಯಿತು.  ಆದರೆ ಇದೆಲ್ಲದಕ್ಕಿಂತಲೂ ಡಿಡಿಟಿಯೇ ಅತ್ಯಂತ ಕಡಿಮೆ ವಿಷರಾಸಾಯನಿಕ ಎನ್ನುವ ಅಭಿಪ್ರಾಯ WHO ವಿಶ್ವ ಮಲೇರಿಯಾ ಕಾರ್ಯಕ್ರಮ ನಿರ್ದೇಶಕ ಆರಾಟಕೊಚಿಯವರದು.
ಕೃಷಿಗೆ ಮಿತಿಮೀರಿ ಬಳಸಿದ ಪರಿಣಾಮ ಏನೆಲ್ಲಾ ಅನಾಹುತಗಳಿಗೆ ಕಾರಣವಾಯಿತೇ ವಿನಃ ನಿಯಂತ್ರಿತ ಪ್ರಮಾಣದ ಬಳಕೆಯಿಂದಲ್ಲ ಎನ್ನುವ ವಾದವೂ ಕೊಚಿಯವರದು.
ವರ್ಷದಲ್ಲಿ ಅನೇಕ ಸಾರಿ ಬೆಳೆ ರಕ್ಷಣೆಗೋಸ್ಕರ ಹೆಲಿಕಾಪ್ಟರ್ ವಿಮಾನ ಬಳಸಿ ವ್ಯಾಪಕವಾಗಿ ಸಿಂಪಡಿಸಿದ ಪರಿಣಾಮ ಭೀಕರವಾಗಿದೆ.  ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ಲಿವರ್ ಕ್ಯಾನ್ಸರ್, ಎದೆ ಕ್ಯಾನ್ಸರ್, ನರದೌರ್ಬಲ್ಯ, ತಾಯಿಹಾಲಿನಲ್ಲಿ ಹಾಗೂ ರಕ್ತದಲ್ಲಿರುವ ಡಿಡಿಟಿ ಅಂಶ, ಅವಧಿಗೆ ಮುನ್ನವೇ ಜನನ, ಎದೆಹಾಲಿಲ್ಲದಿರುವುದು ಹೀಗೆ ಏನೆಲ್ಲಾ ಕಾರಣಗಳಿಗೆ ಡಿಡಿಟಿಯೇ ಮೂಲ ಎಂದು ಫಲಿತಾಂಶ ಬಂದಿತ್ತು. ಆದರೆ WHO ಅದನ್ನು ನಿರಾಕರಿಸಿತು.  ಕಾರಣ ಅಲ್ಲೂ ಸಹ ಇಸವಿ ೧೯೯೫ರವರೆಗೆ ಕೃಷಿಗಾಗಿ ವಿಷ ಸಿಂಪಡಣೆ ಟನ್ ಲೆಕ್ಕದಲ್ಲಿತ್ತು.  ಅದಕ್ಕಾಗಿ ಈ ಫಲಿತಾಂಶ ಬಂದಿದೆ ಎನ್ನುವ ವಿವರಣೆ WHOದು.
ಡಿಡಿಟಿಯನ್ನು ಸೊಳ್ಳೆಗಳು ಕುಳಿತುಕೊಳ್ಳುವ ಗೋಡೆಗಳ ಮೇಲೆ ಒಂದು ಚದರಕ್ಕೆ ಎರಡು ಗ್ರಾಂನಷ್ಟು ಮಾತ್ರ ಸಿಂಪಡಿಸಿದರೂ ಸಾಕು.   ಮಲೇರಿಯಾವನ್ನು ಮನೆಯಿಂದ ಹೊರಗಟ್ಟಬಹುದು.  ಅದೇ ರೀತಿ ಚರಂಡಿ, ಕೊಳಚೆ ಪ್ರದೇಶಗಳಿಗೂ ಅತ್ಯಂತ ಕಡಿಮೆ ಸಿಂಪಡಿಸಿ ಸೊಳ್ಳೆಗಳನ್ನು ನಿಯಂತ್ರಿಸಬಹುದು ಎನ್ನುವ ಸಮರ್ಥನೆ WHOದ ಮಲೇರಿಯಾ ನಿಯಂತ್ರಣ ವಿಭಾಗದ ಸದಸ್ಯರದು.
ಆದರೆ ಡಿಡಿಟಿಯ ವಿರುದ್ಧ ಅತ್ಯಂತ ಹೆಚ್ಚು ವಿರೋಧದ ದನಿ ಮಾಡಿದ್ದು ದಕ್ಷಿಣ ಆಫ್ರಿಕಾದ ಅಂತಾರಾಷ್ಟ್ರೀಯ ಅಂಟುರೋಗ ನಿವಾರಣೆ ಅಧ್ಯಯನ ಸಂಸ್ಥೆ.  ಸಂಸ್ಥೆಯ ಮುಖ್ಯಸ್ಥರಾದ ಮೌರಿನ್ ಕೋಜಿಯವರ ಪ್ರಕಾರ ಇಂಟೆಗ್ರೇಟೆಡ್ ವೆಕ್ಟಾರ್ ಮ್ಯಾನೇಜ್‌ಮೆಂಟ್ ವಿಧಾನ [IVM] ಮಾತ್ರ ಹೆಚ್ಚು ಪರಿಣಾಮಕಾರಿ ಎನ್ನುತ್ತಾರೆ.
ಮಲೇರಿಯಾ ಕೇವಲ ಡಿಡಿಟಿಯಿಂದ ಮಾತ್ರ ಹೋಗುತ್ತದೆ ಎಂದು ಭಾವಿಸದೇ ಬೇರೆ ಬೇರೆ ರೀತಿಯಲ್ಲಿ ರೋಗನಿವಾರಣೆಗೆ ಪ್ರಯತ್ನಿಸುವಿಕೆಯೇ ಐವಿಎಮ್ ವಿಧಾನ.  ಇದೊಂದು ಶಿಕ್ಷಣ ಪದ್ಧತಿ.  ಮನೆಯ ಸುತ್ತಮುತ್ತಲಿನ ಸೊಳ್ಳೆಗಳ ನಿವಾರಣೆ ಮಾಡುವ ರೀತಿಗಳನ್ನು ಕಲಿಯುವಿಕೆಯೇ ಆಗಿದೆ.
ನೀರು ನಿಲ್ಲದಂತೆ ಮಾಡುವುದು, ಶೌಚಾಲಯ ಸ್ಥಳಗಳನ್ನು ಮುಚ್ಚುವುದು, ಜಾಲರಿ ಪರದೆ ಬಳಸುವುದು, ಸ್ಥಳೀಯ ಸೊಳ್ಳೆನಾಶಕ ಸಸ್ಯಗಳ ಹೊಗೆ ಹಾಕುವುದು, ಸೊಳ್ಳೆಭಕ್ಷಕ ಕೀಟಗಳ ಪ್ರಯೋಗ, ಸೊಳ್ಳೆಭಕ್ಷಕ ಹಕ್ಕಿ ಗುಬ್ಬಿಗಳ ಉಪಯೋಗ ಪಡೆಯುವಿಕೆ, ಮೀನುಗಳ ಬಳಕೆ, ಕೊಟ್ಟಕೊನೆಯದಾಗಿ ಕೀಟನಾಶಕಗಳ ಬಳಕೆ.
ಆಫ್ರಿಕಾದಲ್ಲಿ ಕ್ಲೋರಿನ್‌ಗಳ ಬದಲು ಪೈರಿಥ್ರಿನ್‌ಗಳನ್ನು ಬಳಸಿ ಶೆಕಡಾ ೩೦ರಷ್ಟು ರೋಗ ನಿರ್ಮೂಲನೆ ಮಾಡಲಾಗಿತ್ತು.  ಆದರೆ ಈಗ ಸೊಳ್ಳೆಗಳು ಅವಕ್ಕೂ ಪ್ರತಿರೋಧ ಬೆಳೆಸಿಕೊಂಡವು.  ಹಾಗಾಗಿ ಸಸ್ಯಜನ್ಯ ಕೀಟನಾಶಕಗಳನ್ನೇ ಅವಲಂಬಿಸಲಾಗುತ್ತಿದೆ.
ವಿಶ್ವದಲ್ಲಿ ಮಲೇರಿಯಾ ಇರುವ ಭೂಪ್ರದೇಶವು ವ್ಯಾಪಕವಾಗಿರುವ ಕಾರಣ ವಿಭಿನ್ನ ಪರಿಸರವಿದೆ.  ಒಂದು ಕಡೆ ಮಾಡಿದ ಪ್ರಯೋಗ ಮತ್ತೊಂದೆಡೆ ಪರಿಣಾಮಕಾರಿಯಾಗುವ ಸಾಧ್ಯತೆ ಅತಿ ಕಡಿಮೆ.  ಅಷ್ಟೇ ಅಲ್ಲ, ಇದು ಕೇವಲ ಭೌಗೋಳಿಕ, ಪಾರಿಸರಿಕ ವ್ಯಾಪ್ತಿಗಷ್ಟೇ ಸೀಮಿತವಾಗಿಲ್ಲ.  ಸಾಮಾಜಿಕವಾಗಿಯೂ ವಿಪರೀತ ಬೆಂಬಲ ಬೇಕು.  ಜೊತೆಗೆ ರಾಜಕೀಯ ಬೆಂಬಲ ಇರಲೇಬೇಕು.  ಇವೆಲ್ಲಾ ಸೇರಿದಾಗ ಮಾತ್ರ ಎವಿಎಮ್ ಯಶಸ್ವಿಯಾಗುತ್ತದೆ.
ಹುನ್ನಾರ
ಡಿಡಿಟಿಯ ಬಳಕೆಯ ಬಗ್ಗೆ WHO ಸಹಮತ ನೀಡಿರುವುದು ಅಮೇರಿಕಾದ ಹುನ್ನಾರ ಎಂದು ಆಫ್ರಿಕಾ ಈಗಾಗಲೇ ಹೇಳಿಕೆ ನೀಡಿದೆ.  ಅವರಲ್ಲಿ ಖರ್ಚಾಗದೇ ಉಳಿದ ಡಿಡಿಟಿಯನ್ನು ತುಂಬಲು ನಮ್ಮ ಹಿಂದುಳಿದ ದೇಶಗಳು ಕಸದ ತೊಟ್ಟಿಯಾಗಬೇಕೆ ಎನ್ನುವ ಪ್ರಶ್ನೆಯೂ ಅವರದು.  ಅದಕ್ಕೆ ಪೂರಕವೆಂಬಂತೆ ವಿಶ್ವಬ್ಯಾಂಕಿನ ಮನವೊಲಿಸುತ್ತಿದೆ.  ಒಟ್ಟಾರೆ ಡಿಡಿಟಿಯ ಬೆಲೆ ದಿನೇ ದಿನೇ ಏರುತ್ತಿರುವುದು ನೋಡಿದರೆ ಇದರ ಲಾಬಿ ಪತ್ರಿಕೆಗಳಲ್ಲಿ ಬರುವ ದಿನ ದೂರವಿಲ್ಲ.
ಶುಕ್ರವಾರ ೨೮-೯-೨೦೦೬ರ ಪ್ರಜಾವಾಣಿಯಲ್ಲಿ ದೇವದುರ್ಗ ತಾಲ್ಲೂಕಿನಲ್ಲಿ ೮೦ ಜನರಿಗೆ ಮಲೇರಿಯಾ ಆಗಿದ್ದು ೧೦ ಜನ ತೀರಿಕೊಂಡಿರುವುದು ಅಧಿಕೃತ ವರದಿಯಾಗಿದೆ.  ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಯಾವುದೇ ಔಷಧಗಳೇ ಇಲ್ಲದೇ ಇರುವ ಕಾರಣ ಇನ್ನಷ್ಟು ಸಾವನ್ನು ನಿರೀಕ್ಷಿಸಲಾಗಿದೆ.
ಇದೇ ಮಲೇರಿಯಾದ ವಿಪರ್ಯಾಸ. ಮಲೇರಿಯಾ ಪತ್ತೆಯಾಗಿ ನೂರಾರು ವರ್ಷಗಳೂ ಕಳೆದರೂ ಮಲೇರಿಯಾ ವಿರುದ್ಧ ಲಸಿಕೆ ಸಿದ್ಧವಾಗಿಲ್ಲ.  ಫ್ಲಾಸ್ಮೋಡಿಯಂ ಇಂದಿಗೂ ನಿಗೂಢ ಕ್ರಿಮಿ.  ಇದರ ಜೀವನಶೈಲಿ, ವಂಶವಾಹಿಗುಣ, ಆಕ್ರಮಣದ ರೀತಿ ಒಂದೂ ಪತ್ತೆಯಾಗಿಲ್ಲ.  ಅದಿರಲಿ ನಮಗೆ ಸೊಳ್ಳೆಗಳ ಬಗ್ಗೆಯೇ ಗೊತ್ತಿಲ್ಲ.  ಸೊಳ್ಳೆಗಳ ಸಂತಾನಭಿವೃದ್ಧಿ, ಕೀಟಸಂಖ್ಯಾ ನೀತಿ, ಆಹಾರಮೂಲಗಳು ಬೆಳವಣಿಗೆಯ ಹಂತಗಳು, ಪ್ಲಾಸ್ಮೋಡಿಯಂ ಸೊಳ್ಳೆಗಳೊಳಗೆ ಸೇರುವ ಸಮಯ, ವಿಧಾನ, ಸೇರಿದ ಮೇಲಿನ ಸ್ಥಿತಿ, ಸೊಳ್ಳೆಗಳಿಗಿರುವ ಮಾನವನ ಆಕರ್ಷಣೆ ಏನೆಲ್ಲಾ ವಿಷಯಗಳ ಬಗ್ಗೆ ನಮಗೆ ತಿಳಿದಿರುವುದು ಬಹಳ ಕಡಿಮೆ.  ಇದೇ ಮಲೇರಿಯಾಕ್ಕೆ, ಡಿಡಿಟಿಗೆ ಇನ್ನಷ್ಟು ಬೆಳೆಯಲು ಸಹಕಾರಿಯಾಗಿದೆ. ಹಾರ್ವರ್ಡ್‌ನ ಜೀವಶಾಸ್ತ್ರಜ್ಞ ಎಲ್ಲಿಸ್ ಮೆಕೆಂಜಿಯವರು ಅನಾಫಿಲಿಸ್ ಗಾಂಬೀಯೇ ಬಗ್ಗೆ ಸಂಶೋಧನೆ ಮಾಡುತ್ತಾ ಅದರ ವಿವರಗಳನ್ನೆಲ್ಲಾ ದಾಖಲಿಸಿದರೆ ಒಂದು ವಿಶ್ವಕೋಶವಾಗುತ್ತದೆ ಎಂದಿದ್ದರು.
ಬಿಲ್‌ಗೇಟ್ಸ್ ಹಾಗೂ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನವು ಮೂರು ವರ್ಷಗಳ ಹಿಂದೆ ಮಲೇರಿಯಾ ಲಸಿಕೆಯ ಸಂಶೋಧನೆಗೆ ೫೦ ಮಿಲಿಯ ಡಾಲರ್‍ಸ್‌ಗಳನ್ನು ತೊಡಗಿಸಿದೆ. ಆದರೂ ಮಲೇರಿಯಾ ನಿವಾರಣೆಗೆ ಬೇರೇನೂ ಪ್ರಯತ್ನಗಳನ್ನು ಮಾಡದೇ WHO ಡಿಡಿಟಿಗೆ ಸಹಮತ ನೀಡುತ್ತಿರುವುದು ಖಂಡನೀಯ ಹಾಗೂ ಅನುಮಾನಾಸ್ಪದವಾಗಿದೆ. ಇನ್ನೂ ನಾವೆಷ್ಟು ವಿಷಮಯವಾಗಬೇಕು?  ತೀರ್ಮಾನ ಜನರದ್ದು.
Written by Poornaprajana Belur and Published by Kanaja

Thursday, January 5, 2012

French farmers will have to pay to use their own seeds


In the world of French farming, unrestricted and royalty-free use of seeds may soon be no more than a happy memory. For several decades seeds have been brought under the protection of plant variety certificates, which enshrine plant breeders' rights.
Resowing such seed was theoretically prohibited, but in practice it was largely tolerated in France. In future it will be strictly controlled, the ruling conservative UMP party having passed a bill to this effect in parliament last November. "Of the 5,000 or so cultivated plant varieties on sale, about 1,600 are protected by a certificate [in France]. The latter category account for 99% of the varieties grown by farmers," says Delphine Guey, of France's Inter-Professional Association for Seeds and Plants.
But until now half of all cereals were obtained from farm-saved seed, according to the National Co-ordination for the Defence of Farm-Saved Seed. In other words, illegally. The authorities seem determined to stop turning a blind eye. Agriculture minister Bruno Le Maire is categorical that such seed "can no longer be royalty-free, as is currently the case".
The recent bill transposes into French law a previously ignored 1994 European regulation on protection of plant varieties. As a result farm-saved seed, which was tolerated until now, is now legal, only provided "a fee is paid to certificate holders [seed companies] to sustain funding of research and efforts to improve genetic resources". Small farmers producing less than 92 tonnes of cereal are exempted.
Soft wheat is the onlytype on which duty has been levied in France since 2001. This "compulsory voluntary contribution" is paid to the federation of seed manufacturers. Farmers must pay €0.50 (66 cents) a tonne when they deliver their crop. This system will be extended to 21 species, the list still not finally settled, said Xavier Beulin, the head of France's main farmers' union (FNSEA).
So "for half the crop species – soy, fruit and vegetables – it is forbidden to use your own seeds, and the other half – cereals and fodder – you have to pay to sow", said Guy Kastler, the head of the Semences Paysannes network and a member of the Peasant Confederation.
Several groups of ecologists and small farmers have expressed concerns at seed manufacturers' increasing control over access to seed, due to property rights being extended to crops and the resulting seed. With the new tax, "even farmers who make no use of commercial seed will have to pay for what they use", said Kastler. He is afraid that the share of farm-saved seed will decline as it becomes more expensive and consequently less attractive to farmers.
With the tax and the ban on sowing their own seed, there is a growing incentive for farmers to buy, rather than produce, seed. This worsens concern about increasing dependence on seed manufacturers.
Beulin, on the other hand, maintains that there is good reason for everyone to contribute to research into crop species, because even farm-saved seed is generally derived from company-bred varieties in the first place. Drawing a parallel with legislation to protect the digital rights of creators of music and film, he suggested that "it is only right for [users of farm-saved seed] to pay their share of funding the creation of new varieties, from which they benefit". A further source of concern is the impact of the new rules on farming diversity. Certainly sowing the same variety – almost always the result of research – does not improve biodiversity, particularly as "for all the main crops, none of the varieties in use were handed down by our ancestors; they were all obtained by selection of new varieties", Beulin said.
Kastler said that replanting your own seeds could lead to variations in a species, thus favouring biodiversity. "New characteristics appear so the plant is better suited to the soil, climate and local conditions. This means there is less need for fertilisers and pesticides. Conversely seed companies adapt plants to suit fertilisers and pesticides, which are the same everywhere," he said. France's plant variety certificates are an alternative to patents on living things, as enforced by the United States. This intellectual property right is held by companies that have developed cultivated species through research, and consequently enjoy a monopoly over sales of the corresponding seed, until such time as it comes into the public domain. Some in the industry, including Kastler, are afraid of gradual slippage towards this patent-based regime, by limiting the right of farmers to use protected seed freely.
However, unlike plant variety certificates, patents place an absolute ban on the use of farm-saved seed, with or without the payment of fees, Guey points out. Plant variety certificates also allow plant breeders unrestricted use of a protected variety to exploit its genetic resources and select new ones. But though they may work on a gene belonging to a particular species they cannot patent it or wholly appropriate it. According to Guey this distinction has helped maintain a degree of diversity among French seed companies, and by extension gives farmers a larger choice of species. However, although France has not agreed to patents on living things, patenting of plant genes is increasingly frequent.


Published in Guardian paper

Wednesday, January 4, 2012

Globally Important Agricultural Heritage Systems (GIAHS)


FAO has officially recognized the Traditional Agricultural System of Koraput  as a Globally Important Agricultural Heritage System (GIAHS) site. This was officially declared on 3rd January 2012 at the Indian Science Congress organized by KIIT University in Bhubaneswar. This is an important recognition of our Tribal System of Agriculture and its conservation will only strengthen our fight against serious environmental challenges like climate change. 

 The official release added "The recognition of the Koraput Traditional Agricultural System as a GIAHS site will guarantee local and international efforts for the conservation of biodiversitysustainable use of its genetic resources, and the recognition of tribal peoples' contribution to biodiversity and knowledge systems, whilst increasing attention to their natural and cultural heritage."

What is Globally Important Agricultural Heritage Systems (GIAHS)



Worldwide, specific agricultural systems and landscapes have been created, shaped and maintained by generations of farmers and herders based on diverse natural resources, using locally adapted management practices. Building on local knowledge and experience, these ingenious agri-cultural systems reflect the evolution of humankind, the diversity of its knowledge, and its profound relationship with nature. These systems have resulted not only in outstanding landscapes, maintenance and adaptation of globally significant agricultural biodiversity, indigenous knowledge systems and resilient ecosystems, but, above all, in the sustained provision of multiple goods and services, food and livelihood security and quality of life.

In order to safeguard and support world's agri-cultural heritage systems in 2002 FAO started an initiative for the conservation and adaptive management of Globally Important Agricultural Heritage systems (GIAHS). The initiative aims to establish the basis for international recognition, dynamic conservation and adaptive management of Globally Important Agricultural Heritage Systems (GIAHS) and their agricultural biodiversity, knowledge systems, food and livelihood security and cultures throughout the world. (Source: FAO  Official Website: http://www.fao.org/nr/giahs/giahs-home/home-more/en/)

The Official Release of FAO on Koraput Region



"The Koraput region in the state of Orissa, India, has a rich assembly of unique floral and faunal diversity. The genetic repository of the region is of great significance in the global context. About 79 plant angiosperm species and one gymnosperm are endemic to the region. In addition, people, who belong to different tribal groups, have conserved and preserved a large number of land races of rice, millets, pulses and medicinal plants, using diverse traditional cultivation practices, which have been developed as an answer to the topographical and ecological diversity of the region. Koraput has been identified as an important centre of origin of rice. The changes in the traditional practices coupled with both, natural and anthropogenic pressures require immediate attention for conservation of these unique species and genotypes for perpetuity."