Search This Blog

Monday, May 31, 2010

ಮೀನಿನ ಟಾನಿಕ್


ಬೇಕಾಗುವ ಪದಾರ್ಥಗಳು :
ಹಸಿ ಮೀನು ಒಂದು ಕೆಜಿ ಮತ್ತು ಹುಳಿ ಬೆಲ್ಲ ಅಥವ ಕರಿಬೆಲ್ಲ ಒಂದು ಕೆಜಿ. ಪ್ಲಾಸ್ಟಿಕ್ ಪಾತ್ರೆ. ಅಥವಾ ಬಾಟಲ್
ತಯಾರಿಸುವ ವಿಧಾನ :
ಹಸಿ ಮೀನನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ ಅದಕ್ಕೆ ಪುಡಿ ಮಾಡಿದ ಬೆಲ್ಲವನ್ನು ಮಿಶ್ರ ಮಾಡಿ ಒಂದು ಬಾಟಲಿನಲ್ಲಿ ಶೇಕರಿಸಿಡಬೇಕು. ಬಾಟಲಿನ ಮುಚ್ಚಳವನ್ನು ಬಿಗಿಯಾಗಿ ಗಾಳಿ ಒಳಗೂ ಹೊರಗೂ ಹೋಗದ ಹಾಗೆ ಮುಚ್ಚಬೇಕು ಪ್ರತಿ ದಿನ ಬೆಳಿಗ್ಗೆ ಅಥವಾ ಸಂಜೆ, ಯಾವುದಾದರು ಒಂದು ಸಮಯದಲ್ಲಿ ಹಲವು ಸೆಕೆಂಡ್ಗಳ ಕಾಲ ಬಾಟಲಿ ಮುಚ್ಚಳ ತೆಗೆದು ಹಾಗೇ ಮುಚ್ಚಬೇಕು. ಒಂದು ವಾರದ ನಂತರ ಜೇನು ತುಪ್ಪವನ್ನು ಹೋಲುವ ರೀತಿಯಲ್ಲಿ ಟಾನಿಕ್ ತಯಾರಾಗುತ್ತದೆ.
ಬಳಸುವ ವಿಧಾನ :
ಒಂದು ಲೀಟರ್ ನೀರಿಗೆ ಒಂದು ಚಮಚ ಮೀನಿನ ಟಾನಿಕ್ ಸೇರಿಸಿ ಹೂವಿನ ಗಿಡಗಳು ಮತ್ತು ತರಕಾರಿ ಬೆಳೆಗಳಿಗೆ ಸಿಂಪಡಿಸುವುದು. ತರಕಾರಿ ಬೆಳೆಯಲ್ಲಿ ಒಳ್ಳೆಯ ಪರಿಣಾಮ ಕಾಣಬಹುದು. ಎಲ್ಲಾ ತರಹದ ಬೆಳೆಗಳು ಬಳಸಬಹುದು, ಟಾನಿಕನ್ನು ಹೂ ಬಿಡುವ ಸಮಯದಲ್ಲಿ ಬೆಳೆಗಳಿಗೆ ಸಿಂಪರಣೆ ಮಾಡಿದರೆ ಒಳ್ಳೆಯದು. ಇದು ಉತ್ತಮ ಪ್ರಚೋದಕ, ಬೆಳೆ ಅಥವಾ ಗಿಡ-ಮರಗಳು ಸದೃಡವಾಗಿ ಬೆಳೆಯುತ್ತೆವೆ.

ಹಾಲು ಉತ್ಪಾದನೆಯಲ್ಲಿ ಅಜೋಲ ಪಾತ್ರ

ಅಜೋಲ ನೀರಿನ ಮೇಲೆ ಬೆಳೆಯುವ ಕೆಳವರ್ಗದ ಸಸ್ಯ, ಹೆಚ್ಚಾಗಿ ನೀರಾವರಿ ಕಾಲುವೆ, ಕೆರೆ ಅಂಗಲ, ಮತ್ತು ಭತ್ತದ ಗದ್ದೆಗಳಲ್ಲಿ ಕಂಡುಬರುವ ಸಾಮಾನ್ಯ ಸಸ್ಯ. ಇದರ ಸಸ್ಯ ವೈಜ್ಗಾನಿಕ ಹೆಸರು ಅಜೋಲ ಪಿನ್ನತ (Azola pinnata) ಮತ್ತು ಇದು ಅಜೋಲೆಸಿ (Azolaceae) ಕುಟುಂಬಕ್ಕೆ ಸೇರಿದ ಕೆಳ ವರ್ಗದ ಸಸ್ಯ. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಹೇರಳವಾಗಿ ಕಂಡುಬರುವ, ಮಲೆನಾಡಿನ ಸೆರಗಿನಲ್ಲಿ ಮನೆಯ ಮೇಲೆ, ದಾರಿ ಪಕ್ಕದಲ್ಲಿ ಕಲ್ಲಿನ ಮೇಲೆ ಮಳೆಗಾಲದಲ್ಲಿ ಕಂಡು ಬರುತ್ತದೆ. ಈ ಕೆಳ ವರ್ಗದ ಸಸ್ಯದಲ್ಲಿ ಸಸಾರಜನಕ ಮತ್ತು ಪ್ರೋಟಿನ ಅಂಶ ಅಧಿಕವಾಗಿದ್ದು, ಸ್ವಲ್ಪವೆ ಸ್ವಲ್ಪ ಪಶು ಆಹಾರದ ಜೋತೆಗೆ ಮಿಶ್ರಣಮಾಡಿ ಕೊಡಬಹುದು. ಅಜೋಲ ದನ-ಕರುಗಳಿಗೆ ಒಂದು ಉತ್ತಮ ಆಹಾರ, ಮಲೆ ಅಂಗಲದಲ್ಲಿಯೂ ಸಹ ಬೆಳೆಯಬಹುದು. ಕನಕಪುರ ತಾಲ್ಲುಕು ಮರಳವಾಡಿ ಗ್ರಾಮದ ಪಕ್ಕದಲ್ಲಿ ಗ್ರೀನ್ ಪ್ರತಿಷ್ಠಾನ ವತಿಯಿಂದ ಸುಮಾರು ರೈತ ವರ್ಗ ತಮ್ಮ ತಮ್ಮ ಜಾಗದಲ್ಲಿ ಅಜೋಲವನ್ನು ಹೆಮ್ಮೆಯಿಂದ ಬೆಳೆಯುತ್ತಿದ್ದಾರೆ.

ಬೆಳೆಯುವ ವಿಧಾನ:
ಸುಮಾರು ಮೂರು ಅಡಿ ಅಗಲ, ಒಂದು ಅಡಿ ಆಳ, ಮತ್ತು ಉದ್ದ ನಮಗೆ ಅನುಕೂಲ ತಕ್ಕಂತೆ (ಬೆಳೆಯುವ ಪ್ರಮಾಣ ನೋಡಿಕೊಂಡು) ಗುಂಡಿಯನ್ನು ತೆಗೆಯಬೇಕು ಅಥವಾ ಸಿಮೆಂಟ್ ತೊಟ್ಟಿಯನ್ನು ಕಟ್ಟಿಕೊಳ್ಳಬಹುದು. ತೆಗೆದ ಗುಂಡಿ ಅಥವಾ ತೊಟ್ಟಿಗೆ ಪ್ಲಾಸ್ಟಿಕ್ ಹಾಳೆಯನ್ನು ಹಾಸಬೇಕು, ನೀರು ಕೆಳಗೆ ಹೋಗದೆ ಹಾಗೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪ್ಲಾಸ್ಟಿಕ್ ಹಾಳೆಯುನ್ನು ಸುತ್ತಲೂ ಮಣ್ಣು ಮತ್ತು

ಕಲ್ಲಿನಿಂದ ಬಿಗಿಗೊಳಿಸಬೇಕು. ಗುಂಡಿ ಅಥವಾ ತೊಟ್ಟಿಯ ಮೇಲೆ ಚಪ್ಪರವನ್ನು ಹಾಕಬೇಕು, ಇದರಿಂದ ಮಳೆ ನೀರು ಮತ್ತು ಬಿಸಿಲಿನಿಂದ ಅಜೋಲವನ್ನು ರಕ್ಷಿಸಬಹುದು. ಪ್ಲಾಸ್ಟಿಕ್ ಹಾಳೆಯನ್ನು ಹಾಕಿದ ತೊಟ್ಟಿ ಅಥವಾ ಗುಂಡಿಯ ಮೇಲೆ ಪೂರ್ತಿಯಾಗಿ ನೀರು ತುಂಬಬೇಕು ಅದರ ಜೋತೆಗೆ ಸ್ವಲ್ಪ ಸಗಣಿ (೧ ಕಿ.ಲೊ/ ೨ ಕಿ.ಲೊ) ಮತ್ತು ತಿಳಿ ಮಣ್ಣನ್ನು ನೀರಿನಲ್ಲಿ ಹಾಕಿ ಕದಡಬೇಕು ಅಥವಾ ಮಿಶ್ರಣ ಮಾಡಬೇಕು, ನಂತರ ಅಜೋಲವನ್ನು ನೀರು ಹಾಕಿದ ತೊಟ್ಟಿ ಅಥವಾ ಗುಂಡಿಯಲ್ಲಿ ಬಿಡಬೇಕು. ನೀರು ಕಡಿಮೆಯಾದಂತೆ ಮತ್ತೆ ಮತ್ತೆ ನೀರನ್ನು ಹಾಕುತ್ತಿರಬೇಕು, ನೀರು ಸತತವಾಗಿ ತೊಟ್ಟಿ ಅಥವಾ ಗುಂಡಿಯಲ್ಲಿ ಇರಬೇಕು, ಇಲ್ಲದಿದ್ದರೆ ಅಜೋಲ ಬೆಳೆಯುದಿಲ್ಲ. ಅಜೋಲ ಬಿಟ್ಟು ೨೧ ರಿಂದ ೩೦ ದಿನಗಳ ನಂತರ ಅಜೋಲವನ್ನು ತೆಗೆದು ಜಾನುವಾರುಗಳಿಗೆ ಕೊಡಬಹುದು.


ಮುನ್ನಚ್ಚರಿಕೆ ಕ್ರಮಗಳು:
೧. ಯಾವಗಲೂ ನೀರು ನಿಲ್ಲುವದರಿಂದ ಸೊಳ್ಳೆಗಳು ಸಂತತಿ ಅಭಿವೃದ್ಧಿ ಯಾಗಬಹುದು, ಸೂಕ್ತ ಕ್ರಮದೊಂದಿಗೆ ಸೊಳ್ಳೆಗಳನ್ನು ನಾಶಪಡಿಸಬೇಕು
೨. ಅಜೋಲವನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವರ್ಗಾಯಿಸುವಾಗ ನೀರಿನಲ್ಲೆ ಸಾಗಿಸಬೇಕು
೩. ಹತ್ತು ಅಡಿ ಉದ್ದ, ಮೂರು ಅಡಿ ಅಗಲ ಇರುವ ತೊಟ್ಟಿ/ಗುಂಡಿಯಿಂದ, ಪೂರ್ತಿಯಾಗಿ ಬೆಳೆದ ನಂತರ, ದಿನಲೂ ಒಂದು ಚದುರ ಅಡಿ ಜಾಗದಲ್ಲಿರುವ ಅಜೋಲವನ್ನು ತೆಗೆದು ಜಾನುವಾರುಗಳಿಗೆ ತಿನ್ನಿಸಬೇಕು.
೪. ಅತಿ ಹೆಚ್ಚಿಗೆ ಅಜೋಲವನ್ನು ತಿನ್ನಿಸಬಾರದು, ಒಂದು ಸಾಮನ್ಯ ಹಸುವಿಗೆ ಎರಡು ಬೊಗಸೆಯಷ್ಟು ಅಜೋಲವನ್ನು ಪಶು ಆಹಾರದ ಜೋತೆಗೆ ತಿನ್ನಿಸಬೇಕು

ಅನೇಕ ರೈತರು ತಮಗೆ ಆದ ಲಾಭವನ್ನು ಮುಕ್ತ ಕಂಠದಿಂದ ವ್ಯಕ್ತಪಡುಸುತ್ತಿದ್ದಾರೆ ಅದರಲ್ಲಿ, ಮರಳವಾಡಿಯ ಗ್ರಾಮ ಪಕ್ಕದಲ್ಲಿ ನಾರಾಯಣ ಸ್ವಾಮಿ ಎಂಬ ರೈತ ಈ ಅಜೋಲವನ್ನ ಬೆಳೆಸುತ್ತಿದ್ದಾನೆ. ಈ ರೈತ ಹೇಳುವ ಪ್ರಕಾರ ಅಜೋಲವನ್ನ ತನ್ನ ಹಸುವಿಗೆ ಕೊಡುವ ಮೊದಲು ಎರಡು ಲೀಟರ್ ಹಾಲು ಕೊಡುತ್ತಿತ್ತು ಆದರೆ, ಅಜೋಲವನ್ನು ಕೊಟ್ಟು ಒಂದು ತಿಂಗಳ ನಂತರ ಮೂರು ಲೀಟರ್ ಹಾಲು ಕೊಡಲು ಪ್ರಾರಂಭಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾನೆ ಮತ್ತು ಅಜೋಲವನ್ನ ಬೆಳೆಯುವದಕ್ಕೆ ಖರ್ಚು ಸಹ ಕಡಿಮೆ

ಭತ್ತದ ಪೀಡೆಗಳಿಗೆ ಸಾವಯವ ಪರಿಹಾರ

“ರಾಸಾಯನಿಕ ಗೊಬ್ಬರ, ಕೀಟನಾಶಕ ಎಲ್ಲಿತನಕ - ಸಾಲ ಮಾಡಿ ಸೋತು ಸತ್ತು ಹೊಗೋ ತನಕ -ಸಾವಯವ ಗೊಬ್ಬರ ಎಲ್ಲಿ ತನಕ - ಎಲ್ಲರಿಗೂ ಶುದ್ಧ ಅನ್ನ ನೀಡೋ ತನಕ, ಅದೇ ಕೊನೆ ತನಕ”. ದುರಂತವೆಂದರೆ, ಭೂಮಿಯನ್ನು ಆಳವಾಗಿ ಉಳುಮೆ ಮಾಡಿದ್ದೆವೆ. ಭೂಮಿ ತಾಯಿಗೆ ಹಂತ-ಹಂತವಾಗಿ ವಿಷ ಕೊಡುವುದರ ಮೂಲಕ ಮಲೀನ ಮಾಡುತ್ತದ್ದೇವೆ. ಹೊಲದಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕವನ್ನು ಸಿಂಪಡಿಸಿದ್ದರಿಂದ ನಮ್ಮ ಕೋಟಾನು ಕೋಟಿ ಅಣುಜೀವಿಗಳು ಸತ್ತಿವೆ. ಭತ್ತ ಕರ್ನಾಟಕದ ಪ್ರಮುಖ ಬೆಳೆ. ನೀರಾವರಿ ಅಚ್ಚು-ಕಟ್ಟು ಪ್ರದೇಶದಲ್ಲಿ ಅತಿಯಾಗಿ ಬೆಳೆಯುತ್ತಾರೆ. ಭತ್ತಕ್ಕೆ ಕೀಟನಾಶಕದ ಬಳಕೆ ಅಧಿಕವಾಗುತ್ತಿದೆ. ಹತ್ತಿಯನ್ನು ಹೊರತು ಪಡಿಸಿದರೆ ಭತ್ತಕ್ಕೆ ಕೀಟನಾಶಕವನ್ನು ಅಧಿಕವಾಗಿ ಬಳಸುತ್ತಾರೆ. ಕೀಟನಾಶಕ ಬಳಸದೆ ಬೆಳೆಗಳಿಗೆ ಬರುವ ಪೀಡೆಗಳನ್ನು ನಿಯಂತ್ರಿಸಬಹುದು. ಕೆಲವು ಸೂತ್ರಗಳನ್ನು ರೈತರಿಂದ ಕಲಿತಿದ್ದೇನೆ. ಈ ಕೆಳಗಿನ ಸೂತ್ರಗಳು ಅನೇಕ ವರ್ಷಗಳಿಂದ ಅನ್ನದಾತರು ನೆಡಿಸಿಕೊಂಡು ಬಂದಿರುವ ಸೂತ್ರಗಳು.
ಗೊಣ್ಣೆಹುಳುವಿನ ತೊಂದರೆ ಸಾಮನ್ಯವಾಗಿ ಎಲ್ಲಾ ಭಾಗದ ರ್ಯತರು ಎದುರುಸುತ್ತಿದ್ದಾರೆ. ಮರಿ ಹುಳುಗಳು ‘ಛಿ’ ಆಕಾರದಲ್ಲಿದ್ದು. ಬೇರಿನ ಭಾಗವನ್ನು ಕಡಿದು ತಿನ್ನುವುದರಿಂದ ಪೈರುಗಳು ಒಣಗುತ್ತದೆ. ನೇರವಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ಹತೋಟಿಗೆ ನಾನಾ ತರಹದ ವಿಷವನ್ನು ಬಳಸುವುದುಟ್ಟು ಇವುಗಳ ಹತೋಟಿಗಾಗಿ ಎಕರೆಗೆ ೨೫೦-೩೦೦ ಕೆ.ಜಿ ಬೇವಿನ ಹಿಂಡಿಯನ್ನು ಮಣ್ಣಿನಲ್ಲಿ ಬೆರಸಬೇಕು. ಭೂಮಿ ಹದ ಮಾಡುವಾಗ ಹಿಂಡಿಯನ್ನು ಮಣ್ಣಿಗೆ ಸೇರಿಸಬೇಕು. ಗೊಣ್ಣೆಹುಳುವಿನ ಹತೋಟಿ ಜೋತೆಗೆ ಮಣ್ಣಿಗೆ ಸಾವಯವ ಅಂಶವನ್ನು ಸೇರಿಸದಂತಾಗುತ್ತದೆ.

ಕಾಂಡ ಕೊರೆಯುವ ಹುಳ - ಮರಿ ಹುಳು ಭತ್ತದ ಕಾಂಡ ಕೊರೆದು ತಿನ್ನುವುದರಿಂದ ಸುಳಿ ಒಣಗುವುದು. ಕೈಯಿಂದ ಒಣ ಸುಳಿಯನ್ನು ಎಳೆದರೆ ಕಿತ್ತು ಬರುತ್ತದೆ. ತೆನೆ ಬಂದ ಸಮಯದಲ್ಲಿ ಹುಳುಗಳು ತೆನೆ ಬುಡದಲ್ಲಿ ಕೊರೆದಾಗ ಕಾಳುಗಳು ಜೊಳ್ಳಾಗುತ್ತದೆ. ಹೊಲದಲ್ಲಿ ಬಿಳಿ ತೆನೆ ಕಂಡು ಬರುತ್ತದೆ. ಬಾದೆಗೊಳಗಾದ ಗಿಡಗಳೂ ಕಡಿಮೆ ಸಂಖ್ಯೆಯಲ್ಲಿರುವಾಗಲೇ ಬೇರು ಸಮೇತವಾಗಿ ಕಿತ್ತು ನಾಶಪಡಿಸಬೇಕು. ಇದರ ಸ್ವಾಭಾವಿಕ ಶತ್ರುಗಳಾದ ಜೇಡ ಮತ್ತು ಗುಲಗಂಜಿ ಹುಳುಗಳನ್ನು ರಕ್ಷಿಸಬೇಕು. ಹೆಚ್ಚಿನ ತೊಂದರೆ ಕಂಡುಬಂದರೆ ‘ಪೂಚಿಮರಂದು’ ಕಷಾಯವನ್ನು ಸಿಂಪಡಿಸಿ ಹತೋಟಿ ಮಾಡಬಹುದು.

ಗರಿ ಸುತ್ತುವ ಹುಳು - ಮರಿ ಹುಳುಗಳು ಎರಡು/ಮೂರು ಗರಿಗಳನ್ನು ಸುತ್ತಿ ಒಳಗಡೆ ಜೀವಿಸುತ್ತೇವೆ. ಒಳಗಡೆ ಇದ್ದುಕೊಂಡೆ ಗಿಡದ ಪತ್ರ ಹರಿತ್ತನ್ನು ಕೆರೆದು ತಿನ್ನುತ್ತೇವೆ. ಅಂತಹ ಗರಿಗಳು ಬೆಳ್ಳಗಾಗುತ್ತವೆ. ಗಿಡಗಳ ಬೆಳವಣಿಗೆ ಕುಂಠಿತವಾಗಿತ್ತವೆ. ಇವುಗಳ ಹತೋಟಿಗಾಗಿ ಶೇ. ೪ರ ಬೇವಿನ ಕಷಾಯ ಮಾಡಬೇಕು.

ಸಸ್ಯಹೇನು - ಸಸಿ ಹಂತದಲ್ಲಿರುವಾಗ ಗರಿ ತುದಿ ಸುತ್ತಿಕೊಳ್ಳುವುದು ಮತ್ತು ತುದಿಯ ಕಡೆಯಿಂದ ಗರಿ ಒಣಗುವುದು. ಇವುಗಳ ಹತೋಟಿಗಾಗಿ ‘ಶೇ ೪ರ ಬೇವಿನ ಬೀಜದ ಕಷಾಯ’ ಸಿಂಪರಣೆ ಮಾಡುವುದುದರಿಂದ ಇವುಗಳ ಹತೋಟಿ ಮಾಡಬಹುದು.

ಎಲೆ ಸುರುಳಿ ಹುಳುವಿನ ಹತೋಟಿ - ಮಜ್ಜಿಗೆಯಿಂದ ಎಲೆ ಸುರುಳಿ (ಟeಚಿಜಿ ಡಿoಟಟeಡಿ) ಹುಳುವಿನ ತೊಂದರೆ ಕಾಣಿಸಿದಾಗ ಮಜ್ಜಿಗೆಯನ್ನು ಗದ್ದೆಗೆ ನೀರು ಹೋಗುವ ಕಾಲುವೆಯಲ್ಲಿ ಪ್ರತಿ ಎಕರೆಗೆ ಒಂದು ಚೆಂಬಿನಂತೆ ಬೆಳಗಿನ ವೇಳೆ ಸಣ್ಣಗೆ ಬಿಡಬೇಕು. ಪೈರಿಗೆ ಬೀಳುವ ಎಲ್ಲಾ ತರಹದ ಕೀಟಗಳನ್ನು ನಿವಾರಿಸುತ್ತದೆ. ಇದಕ್ಕೆ ಪರಿಹಾರ ಸಿಗದಿದ್ದರೆ ಮುಂದಿನ ಪ್ರಯೋಗ ಮಾಡಿ. ಒಂದು ಕೆ.ಜಿ. ಕತ್ತಾಳೆಯನ್ನು ಹಿತ್ತಾಳೆ ಪಾತ್ರೆಯಲ್ಲಿ ಹತ್ತು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ನಂತರ ಬಟ್ಟೆಯಲ್ಲಿ ಸೋಸಿ. ಸೋಸಿದ ದ್ರಾವಣಕ್ಕೆ ನೂರು ಗ್ರಾಂ ಬೇವಿನ ಪುಡಿ ಹಾಕಿ ಕಲಸಿ ಸಿದ್ಧ ಮಾಡಿ. ನಂತರ ದ್ರಾವಣಕ್ಕೆ ನೀರನ್ನು ಮಿಶ್ರಣ ಮಾಡಿ ಭತ್ತಕ್ಕೆ ಸಿಂಪಡಿಸಬೇಕು. ಈ ಪೀಡೆ ನಿರ್ವಹಣೆಗೆ ಮತ್ತೋಂದು ಪರಿಹಾರವಿದೆ. ಕುದಿಯುವ ನೀರಿಗೆ ಒಂದು ಕೆ.ಜಿ. ಕತ್ತಾಳೆ ಗಿಡದ ಎಲೆಗಳನ್ನು ಹಾಕಿ ಒಂದು ದಿನ ಹಾಗೆ ಬಿಟ್ಟು ಬಿಡಿ. ಮರುದಿನ ಸೋಸಿ ಬರುವ ಮೂಲ ದ್ರಾವಣಕ್ಕೆ ಒಂದು ಅಳತೆಗೆ ಹತ್ತು ಅಳತೆಯಂತೆ ನೀರನ್ನು ಬೆರಸಿ ಸಿಂಪಡಿಸಿ.

ಕಂದು ಜಿಗಿ ಹುಳುಗಳ ಹತೋಟಿಗೆ (brown plant hopper) - ಕಣಗಲೆ (nerium indicum) ಗಿಡದ ಬೀಜಗಳನ್ನು ಒಂದು ರಾತ್ರಿ ನೀರಿನಲ್ಲಿ ನೆನಸಿ. ಮರುದಿನ ಸೋಸಿ ಸಮ ಪ್ರಮಾಣದಲ್ಲಿ ನೀರನ್ನು ಬೆರೆಸಿ ಸಿಂಪಡಿಸಬೇಕು. ಮತ್ತೋಂದು ಪದ್ಧತಿಯಂದರೆ, ಲೋಳೆಸರ ಲೋಳಿಯನ್ನು ದನದ ಗಂಜಲದೊಂದಿಗೆ ಬೆರಸಿ ಸಿಂಪಡಿಸಬೇಕು. ನಿಯಂತ್ರಿಸಿವುದಕ್ಕೆ ಈ ವಿಧಾನವನ್ನು ಬಳಸುವುದುಟ್ಟು. ಎಕ್ಕದ ಎಲೆಯನ್ನು ಭತ್ತದ ಗದ್ದೆಯಲ್ಲಿ ಅಲ್ಲಲ್ಲಿ ಹರಡುವುದು. ಕಹಿ ವಾಸನೆಯಿಂದ ಜಿಗಿ ಹುಳು ಹತ್ತೀರ ಬರುವುದಿಲ್ಲ.

ಬೆಂಕಿರೋಗ - ರೈತನ ಕನಸನ್ನು ಸುಟ್ಟು ಬಿಡುವ ಈ ರೋಗ ಶಿಲೀಂದ್ರದಿಂದ ಬರುತ್ತದೆ. ರೋಗ ಬಂದ ಮೇಲೆ ನಿಯಂತ್ರಿಸಿವುದು ಅಸಾಧ್ಯ. ಮುಂಜಾಗ್ರತೆವಾಗಿ ಹತೋಟಿಗೆ ಕ್ರಮ ತೆಗೆದುಕೊಳ್ಳಬೇಕು. ಕವರು ( ಕಾಲು, ಗೌಜ್ಜಲು, ಕುಂಭ ) ಛಿಚಿveಥಿಚಿ ಚಿಡಿboಡಿeಚಿ ಮರದ ಎರಡು ಕೆ.ಜಿ ಚಕ್ಕೆಯನ್ನು ಆಯ್ದು ಕೊಳ್ಳಿ. ಚಕ್ಕೆಯನ್ನು ಗದ್ದೆಯ ಹಾಳೆಗೆ ನೀರು ಹೋಗುವ ಜಾಗದಲ್ಲಿ ಹಾಕಬೇಕು. ಚಕ್ಕೆಯ ಔಷದ ಗುಣ ನೀರಿನ ಮೂಲಕ ಗದ್ದೆಯ ತುಂಬ ವಿಸ್ತರಿಸುವುದು. ಬೆಂಕಿರೋಗ ಸುಲಭವಾಗಿ ನಿಯಂತ್ರಿಸಬಹುದು.

ಕಾಂಡ ಕೊರೆಯುವ ಹುಳು - ಹುಳು ನೇರವಾಗಿ ಬೆಳೆಯ ಕಾಂಡವನ್ನು ಕೊರೆಯುತ್ತದೆ. ಕಾಂಡವನ್ನು ತುಂಡರಿಸಿ ನೆಲಕ್ಕೆ ಬೀಳುಸುತ್ತದೆ. ಆಡುಸೋಗೆಯನ್ನು ಭತ್ತದ ಕಾಂಡಕೊರೆತ ನಿಯಂತ್ರಣಕ್ಕೆ ಉಪಯೋಗಿಸುತ್ತಾರೆ. ಈ ಗಿಡದ ಗೆಲ್ಲುಗಳನ್ನು ಮುಂಗಾರು ಭತ್ತದ ಗದ್ದೆಗಳಲ್ಲಿ ಎಳೆದಾಡುವುದರಿಂದ ಶೇ. ೭೦%ರಷ್ಟು ನಿಯಂತ್ರಣ ಮಾಡಬಹುದು. ಈ ವಿಧಾನದಿಂದ ಹತೋಟಿಯಾಗದಿಂದಲ್ಲಿ ಸೆಣಬಿನ ಬೀಜವನ್ನು ಅಯ್ದು ಕೊಳ್ಳಿ. ಐದು ಕೆ.ಜಿ ಬೀಜಗಳನ್ನು ಹತ್ತು ಲೀಟರ್ ನೀರು ಇರುವ ಬಕೇಟ್ನಲ್ಲಿ ನೆನೆ ಹಾಕಿ. ಒಂದು ರಾತ್ರಿ ನೆನಸಬೇಕು. ದ್ರಾವಣವನ್ನು ಸೊಸಿ ಸಿಂಪರಣೆಗೆ ಬಳಸಬಹುದು. ದ್ರಾವಣದೊಂದಿಗೆ ನೀರನ್ನು ಸಮಪ್ರಮಾಣದಲ್ಲಿ ಬೆರಸಿ ಬೆಳೆಗಳ ಮೇಲೆ ಸಿಂಪಡಿಸಿ.

Thursday, May 20, 2010

Building resort on the cost of long billed vulture death!


Ramanagara is also known as Closepet, It is also the headquarters of Ramanagara district. It is approximately 50 km southwest of Bangalore. It has an average elevation of 747 meters (2450 feet). The Anna-Thama rock formation on the left and Handi-Gundi betta on the right side of Ramanagara. It is also famous for the huge rocky outcrops. As per the 2001 census, Ramanagara had a population of 79,365. Males constitute 52% of the population and females 48%. Ramanagara has an average literacy rate of 63%, higher than the national average of 59.5%: male literacy is 67%, and female literacy is 58%. In Ramanagara, 13% of the population is under 6 years of age. Ramanagara is famous for its silk market, one of the biggest in India, giving it the other name of Silk town.

Back ground...

Ramadevara betta has been a home to critically endangered vulture species for a long time. Recently, 15 long billed Vultures were observed (by the Iruliga community) on the ledges of the steep and high rocky cliffs in Ramadevarabetta State Forest. These Vultures, according to the Bombay Natural History Society, appear to be the only known and last surviving population of the species in inland southern India. The survival of this small population of vultures gives hope that its entire population may not have been lost in this part of the country. It is quite possible that this isolated population has been able to resist the effects of agents that have almost decimated the species elsewhere or may not have been exposed to the same.

Long billed Vulture (Gyps indicus), showed a shocking decline over the last one and half decades, vulture populations have dropped by over 90 per cent with population losses of more than 98 per cent reported in many areas. These vultures (three species of Gyps vultures namely, the Oriental White-backed G. bengalensis, Long-billed vulture G. indicus, and Slender-billed G. tenuirostris) are now listed as critically endangered species. This catastrophic decline has been linked to kidney failure, resulting from the use of the anti-inflammatory drug “diclofenac” on domestic livestock. However, the cause of such a colossal loss of vulture population is still being debated.

Threat to vulture...

Big business magnet groups are building resort just close to long billed vulture nesting area. They are taken six acres land to construct resort. District authority of Ramanagara given green signal to build resort with out considering the long billed vulture birds’ life. Vultures are known as scavengers in the ecosystem. Critically endangered long billed vulture leaving happily only on Ramanagara hills in southern India as per the source of Bombay Natural History Society. If they build resort in Ramadevarabetta state forest, we will loose long billed vulture.


Nesting area...

Ramadevarabetta State Forest, spread over 33 Square kilo meter, comprises of three hill complexes, the largest being the Ramadevarabetta complex, with six peaks of varying heights (highest 934 m). This is an important Hindu pilgrimage centre, with a temple on top of the hill and is frequented by devotees from surrounding villages and towns and even distant cities.

Our demands...

Stop constructing resort on the site of long billed vulture habitat even resort is not giving any support or livelihoods to local communities. Ramadevara betta given status of critical habitat for long billed vulture birds

Declare Ramadevara State Forest in to long billed vulture wild life sanctuary, Make separate management plan for long billed vulture conservation.

Make forest rights committee including localities to protect long billed vulture under Forest Rights Act

Stop all illegal activities including de-forestation, poaching, and mining in the Ramadevara state forest, forest department should involve local Iruliga community in the conservation of entire state forest.