Search This Blog

Wednesday, September 2, 2009

ಜಲ ಮಾಹಿತಿಗೆ ಜಲ ಪೋರ್ಟಲ್...



ನೀರಿನ ಸಂರಕ್ಷಣೆ, ಸದ್ಬಳಕೆ ಮತ್ತು ಸಂಬಂಧಿಸಿದ ಹಲವಾರು ವಿಷಯಗಳ ಚರ್ಚೆ, ಹೋರಾಟಗಳು, ಸಂವಾದ, ಕಾರ್ಯಗಾರ ಅಲ್ಲಲ್ಲಿ ನಡೆಯುತ್ತಿವೆ. ಲೋಕಲ್, ರಾಷ್ಟ್ರಿಯ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ನೆಡೆಯುವ ಜಲ ವಿಚಾರ ತಿಳಿದುಕೊಳ್ಳಲು ತವಕವಿದೆಯೆ? ಬೇಸರ ಬೇಡ, ಅದಕ್ಕೆಂದೆ ಬೆಂಗಳೂರು ಮೂಲದ ಆರ್ಘ್ಯಂ ಸಂಸ್ಥೆ ವಿನೂತನ ಪ್ರಯತ್ನ ಮಾಡಿದೆ. “ಜಲ ಪೋರ್ಟಲ್” ಎಂಬ ವ್ಯವಸ್ಥೆ ಅಂತರಜಾಲದಲ್ಲಿ ನೋಡಲು ಸಿಗುತ್ತದೆ. ನೀರಿನ ಬಗ್ಗೆ ನಿಮ್ಮಲ್ಲಿ ಪ್ರಶ್ನೆ ಇದೆಯೇ? ನಿಮ್ಮ ಪ್ರಶ್ನೆಯನ್ನು ಹಾಕಿ, ‘ಪ್ರಶ್ನೆ ಕೇಳಿ’ ಎಂಬ ಬಟನ್ ಒತ್ತುವ ಮೂಲಕ ನಿಮಗೆ ಉತ್ತರ ಸಿಗುತ್ತದೆ. ನಿಮ್ಮದೆಯಾದ ‘ವಾಟರ್ ಬ್ಲಾಗ್’ನ್ನು ರೂಪಿಸಿಕೊಳ್ಳಬಹುದು. ಬ್ಲಾಗ್ ಮುಖಾಂತರ ಜಲ ಸಂರಕ್ಷರನ್ನ ಫ್ರೆಂಡ್ ಮಾಡಿಕೊಳ್ಳಬಹುದು. ನೀರಿನ ಸಂಬಂಧಿಸಿದ ಫಜಲ್(ಆಟ)/ಕ್ವಿಜ್ ಆಡಬಹುದು. ಕಾವೇರಿ, ಕೃಷ್ಣ ನದಿ ಕಣಿವೆಗಳ ಮಾಹಿತಿ ನಿಮಗೆ ಬೇಕೆ, ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಸರಳ ಪರಿಕರಗಳ ಬಗ್ಗೆ ಮಾಹಿತಿ ಬೇಕೆ. ಜಲ ಸಂರಕ್ಷಣೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳ ವಿವರ ಬೇಕೆ. ಇಂತಹ ನೀರಿನ ಹಲವಾರು ವಿಷಯಗಳ ಬಗ್ಗೆ ನಿರಂತರವಾಗಿ ತಿಳಿದುಕೊಳ್ಳಬಹುದು. ಆಸಕ್ತರು www.indiawaterportal.org ವೈಬ್‌ಸೈಟ್‌ಗೆ ಸಂಪರ್ಕಿಸಿ.

ಸೋಪ್ ಪರಿಮಳ ಪಜೀತಿ !


ಬ್ಯೂಟಿ ಕಾಪಾಡಲು ಯುವಜನತೆ ಸಾಕಷ್ಟು ಹಣ ಮತ್ತು ಸಮಯವನ್ನು ತೆಗೆದಿಡುತ್ತಾರೆ. ಮಾರ್ಕೆಟ್ನಲ್ಲಿ ಸಿಗುವ ಎಲ್ಲಾ ತರಹದ ಬ್ಯೂಟಿ ಕ್ರೀಮ್‌ಗಳು, ಪೌಡರ್, ಸೋಪ್, ಹೇರ್‌ಆಯಿಲ್ ಇತ್ಯಾದಿ ಖರೀದಿ ಮಾಡುವುದರಲ್ಲಿ ನಮ್ಮ ಯುವಜನತೆ ಯಾವಗಲೂ ಮುಂದೆ. ಪೋಷಕರು ಕೊಟ್ಟ ಸ್ವಲ್ಪ ಕಾಸಲ್ಲೆ ಬ್ಯೂಟಿ ಪಾರ್ಲರ್‌ಗೆ ಹೋಗಿ ಮತ್ತಷ್ಟು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳುತ್ತಾರೆ. ಬ್ಯೂಟಿಗೆ ಬಳಸುವ ಸಾಮಗ್ರಿಗಳಲ್ಲಿ ಯಾವ ಅಂಶವಿದೆ, ಯಾವ ಅಂಶವನ್ನು ನೋಡಿ ಖರೀದಿಸಬೇಕು ಎಂಬುವ ಮಾಹಿತಿ ಮಾತ್ರ ಇಲ್ಲ. ಅಂತಹ ಬ್ಯೂಟಿಗೆ ಬಳಸುವ ಸಾಮಗ್ರಿಗಳಲ್ಲಿ ಸಾಬೂನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. ಸೋಪ ಖರೀದಿಸುವಾಗ ಅದರ ಪರಿಮಳ, ಸುವಾಸನೆ ಮುಖ್ಯವಲ್ಲ, ಅದರಂತೆ ಮಾರ್ಕೆಟ್ ಮತ್ತು ಜಾಹಿರಾತಿನಲ್ಲಿ ಸುವಾಸನೆಗೆ ಹೆಚ್ಚಿನ ಮಹತ್ವ ಕೊಟ್ಟಿರುವದರಿಂದ ಎಲ್ಲರೂ ಅದನ್ನೆ ಮಾನದಂಡವಾಗಿ ಉಪಯೋಗಿಸುತ್ತಾರೆ. ಯಾವದೆ ಶಾಪ್‌ಗೆ ಹೋದರೂ ಬಗೆ-ಬಗೆಯ ಪರಿಮಳಯುಕ್ತ ಸಾಬೂನ್ ಲಭ್ಯ. ಸಾಬೂನಿಗೆ ಸುವಾಸನೆ ಮುಖ್ಯವಲ್ಲ ಬದಲಾಗಿ ಸೋಪ್‌ನಲ್ಲಿರುವ ಖಿಈಒ (ಟೋಟಲ್ ಪ್ಯಾಟಿ ಮ್ಯಾಟರ್) ಬಹು ಮುಖ್ಯ. ನಮ್ಮ ಚರ್ಮವನ್ನು ಶುಷ್ಕವಾಗದಂತೆ, ಬಿರಿಯದಂತೆ, ಅಪಾಯಕಾರಿ ಅಂಶವನ್ನು ತಡೆಯುವುದೆ ಈ ಖಿಈಒ, ಬದಲಾಗಿ ಸೋಪ್‌ನ ಪರಿಮಳವಲ್ಲ. ಃIS (ಬ್ಯೋರೊ ಆಫ್ ಇಂಡಿಯನ್ ಸ್ಟಾಂಡರ್ಡ) ಪ್ರಕಾರ ಯಾವದೇ ಬಾತೀಗ್ ಸೋಪ್‌ಲ್ಲಿ ಶೇ ೭೬% ಇರಲೇಬೇಕು. ಖಿಈಒ ಕಡಿಮೆ ಇದ್ದ ಪಕ್ಷದಲ್ಲಿ ಸೋಪ್‌ನ್ನು ಖರೀದಿಸಬೇಡಿ.

ಬಿದಿರು.... ಬಳಕೆ...



ಬಿದಿರಿನ ಬಾಸ್ಕಟ್... ಬಿದಿರಿನ ಸೈಕಲ್.... ಬಿದಿರಿನ ಮನೆ....

ಹಾಡು... ಹಾಡು...


ಓ ರೈತ ನೀ ಎಚ್ಚರವಾಗು, ನೀ ಎಚ್ಚರವಾಗು
ನೀ ಕೈಕಟ್ಟಿ ಕೂರಬೇಡ, ನೀ ಎದ್ದೇಳು
ಭೂ ತಾಯಿಗೆ ದ್ರೋಹ ಮಾಡಬೇಡ
ಭೂ ತಾಯಿಗೆ ವಿಷವನ್ನು ಹಾಕಬೇಡ

ಮರಗಿಡಗಳನ್ನು ನೆಟ್ಟು ಪರಿಸರ ಕಾಪಾಡು
ಪ್ರಕೃತಿಗೆ ನೀವೇನು ಕೊಡುವೆ
ಭೂ ತಾಯಿಗೆ ನೀವೇನು ಬಸಿಯುವೆ

ಭೂ ತಾಯಿ ನಿನ್ನ ಸಾಕುವಳು
ಭೂ ತಾಯ ಪ್ರಾಣ ನೀನು ತೆಗೆಯುವೆ
ಭೂ ತಾಯಿಯ ಜೀವ ಸತ್ವ ಉಳಿಸು

ರಾಸಾಯನಿಕ ಗೊಬ್ಬರ ಬಳಸಬೇಡ
ರೋಗಕ್ಕೆ ಕೀಟನಾಶಕ ಬಳಸಬೇಡ
ಗೋಮೂತ್ರ ಔಷದ ಸಿಂಪಡಿಸು

ನಾಟಿ ಬೀಜಗಳನ್ನು ಉಳಿಸು
ಹೈಬ್ರಿಡ್ ತಳಿಗಳನ್ನು ಹೋಡಿಸು
ರೈತನ ಮಗನಾಗಿ ಪೇಟೆಗೆ ಹೋಗಬೇಡ

ಸುಸ್ಥಿರ ಕೃಷಿಯನ್ನು ಮಾಡು
ವಿಷದ ಬೆಳೆ ಬೆಳೆದು ಅಫರಾದಿಯಾಗಬೇಡ
ನೀಹುಟ್ಟಿರುವುದು ಭೂಮಿಗಾಗಿ
ಭೂಮಿತಾಯಿಯನ್ನು ಕಾಪಾಡು