Search This Blog

Friday, February 24, 2012

China drafts legal proposal to completely shut down GE rice


We're ecstatic to announce a new legal initiative in China that's set to keep GE away from the country's staple food.
"This is actually a world-first initiative that deals with GE food legislation at state law level," said Fang Lifeng, the Food and Agriculture campaigner of Greenpeace.
The State Council has released the draft proposal of a grain law that establishes legislation restricting research, field trials, production, sale, import and export of genetically engineered grain seeds. The draft stipulates that no organization or person can employ GE technology in any major food product in China.
"There are currently too many loopholes and weak control over GE food and technology in China. This law needs to clarify what 'relevant laws and regulations' can be applied to regulate GE crops. We urge legislators to accelerate the legislation of Genetically Engineered Organisms Bio-safety Law, and also to enhance the supervision of GE food and other products. Otherwise, this law will only be lip service," Fang said.
"No" to GE riceAccording to a Greenpeace investigation, over the last 20 years investment on GE technology has been 30 times that on ecological agriculture. "This is a big obstacle for the development of modern sustainable agriculture in China", Fang continued, "China's money must be spent on supporting food that is safe for human consumption and the production of which has taken into account environmental impacts. And GE technology has clearly failed to do either."
"No country should go down the path of GE crop commercialization. Instead every country should reduce the financial support on GE technology and put more investment on agricultural technology that has proved to be safe and effective. This includes ecological agriculture, green technology to control pests and disease, molecular marker-assisted selection, etc."

Thursday, February 23, 2012

Oppose GM food


The Biotechnology Regulatory Authority of India (BRAI) bill is the ultimate threat to the safety of our food. The bill will create a body that will allow genetic modification of our food. It is due to be tabled in the upcoming session of Parliament. Right now, state governments can reject any open release or field experiments of genetically modified(GM) crops in their respective states. With the BRAI in place, state governments will lose this power.
Public opposition has kept the Central government from tabling the bill in Parliament so far. We must ensure that the bill is not tabled in the upcoming session as well. This can happen if State governments also oppose the introduction of this controversial bill. Write to your Chief Minister and ask her/him to oppose the BRAI bill because it threatens our food safety.


Earlier, opposition from people and various state governments, helped get a moratorium on the genetically modified Bt brinjal.[1] People across the country have been expressing their displeasure with this bill,[2] that can bring Bt brinjal back. If the States join in, then the Central government will find it difficult to introduce this bill in Parliament. The BRAI bill will ease the entry of dangerous GM food into our country.[3] The body created, will become the autocratic approver of GM crops. BRAI can even override the Right to Information act and deny us information on the safety of GM food. Write to your CM and ask her/him to save your food from genetic modification.

Support to make India GM FREE

Saturday, February 18, 2012

ರೈತರ ವಲಸೆ: ಕೃಷಿ ಬೆಳವಣಿಗೆಗೆ ಮಾರಕ



ಬೆಳೆಯುತ್ತಿರುವ ನಗರ, ಪಟ್ಟಣಗಳ ಸುತ್ತಲಿನ ಕೃಷಿ ಭೂಮಿಗಳು ಕಣ್ಮರೆಯಾಗುತ್ತಿವೆ. ಅವು ರಸ್ತೆ, ಲೇ ಔಟ್, ಅಪಾರ್ಟ್‌ಮೆಂಟ್ ಕೈಗಾರಿಕಾ ಕಾಲನಿಗಳಾಗಿ ಮಾರ್ಪಾಡಾಗುತ್ತಿವೆ. ನಗರಗಳ ಬಡವರು ಮತ್ತು ಗ್ರಾಮೀಣ ಯುವಕರು ಕೂಲಿಗಾಗಿ ನಗರಗಳನ್ನು ಅವಲಂಬಿಸುತ್ತಿದ್ದಾರೆ. ಗ್ರಾಮೀಣ ಯುವ ಜನರಂತೂ ಸದಾ ನಗರಗಳ ಕಡೆಗೇ ನೋಡುತ್ತಿದ್ದಾರೆ. ಇದು ಈ ಹೊತ್ತಿನ ವಾಸ್ತವ.

ಕೆಲಸ ಹುಡುಕಿಕೊಂಡು ದೇಶದ ಉದ್ದಗಲದಲ್ಲಿ ಲಕ್ಷಾಂತರ ಮಂದಿ ರೈತರು,ರೈತ ಕಾರ್ಮಿಕರು ಪಟ್ಟಣಗಳತ್ತ ವಲಸೆ ಹೋಗಿದ್ದಾರೆ. ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ 2015ರ ವೇಳೆಗೆ ಭಾರತದಲ್ಲಿ ಸುಮಾರು 40 ಕೋಟಿ ಜನರು ಬೇಸಾಯದಿಂದ  ವಿಮುಖರಾಗುತ್ತಾರೆ. ಅವರೆಲ್ಲ ನಗರಗಳಲ್ಲಿ ಯಾವುದಾದರೂ ಕೆಲಸ ಹುಡುಕಿಕೊಂಡು ಅಲ್ಲೇ ಉಳಿಯುತ್ತಾರೆ ಎಂದು ವರದಿ ಹೇಳಿದೆ. ಇದಕ್ಕೆ ಪೂರಕವಾಗಿ ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ದೇಶದಲ್ಲಿ ಶೇ 40ರಷ್ಟು ರೈತರು ಈಗಾಗಲೇ ಬೇಸಾಯದಿಂದ ರೋಸಿ ಹೋಗಿದ್ದಾರೆ. ಬೇಸಾಯ ಬಿಟ್ಟು ಬೇರೇನಾದರೂ ಕೆಲಸ ಹುಡುಕುವ ಇಂಗಿತ ಅವರದು. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಬೇಸಾಯದಿಂದ ವಿಮುಖರಾದರೆ ಆಹಾರ ಭದ್ರತೆಯ ಗತಿ ಏನು?

ಇನ್ನು ಕೆಲ ಅಧ್ಯಯನಗಳ ಪ್ರಕಾರ ತಮಿಳುನಾಡಿನ ಶೇ 70ರಷ್ಟು, ಪಂಜಾಬಿನ 65ರಷ್ಟು, ಉತ್ತರ ಪ್ರದೇಶದ 55ರಷ್ಟು ರೈತರು ಬೇಸಾಯದ ಬವಣೆಗಳಿಗೆ ಪರಿಹಾರ ಕಾಣದೆ ಪಟ್ಟಣಗಳತ್ತ ಗುಳೇ ಹೋಗುವ ಸನ್ನಾಹದಲ್ಲಿದ್ದಾರೆ. ಹೀಗಾದರೆ  `ಕೃಷಿ ನಿರಾಶ್ರಿತ`ರು ಎಂಬ ಹೊಸದೊಂದು ವರ್ಗವೇ ದೇಶದಲ್ಲಿ ಸೃಷ್ಟಿಯಾಗಲಿದೆ. 

 ಆಹಾರ ಭದ್ರತೆ, ಪೌಷ್ಟಿಕಾಂಶಗಳ ಕೊರತೆ, ಹೆಚ್ಚುತ್ತಿರುವ ಶಿಶು ಮರಣ, ಪರಿಸರ ಮಾಲಿನ್ಯ, ಕೋಮು ಗಲಭೆ ಇತ್ಯಾದಿ ಸಮಸ್ಯೆಗಳು ದೇಶದಲ್ಲಿ ಉಲ್ಬಣಗೊಂಡಿವೆ. ಇವಕ್ಕೆಲ್ಲ ಮೂಲ ಕಾರಣ ಬೇಸಾಯ ಕ್ಷೇತ್ರದ ಬಗ್ಗೆ ಸರ್ಕಾರ ತೋರಿಸುತ್ತಿರುವ ನಿರಾಸಕ್ತಿ. ಬೇಸಾಯ ಈಗ ಲಾಭದಾಯಕ ಅಲ್ಲ. ದೇಶದಲ್ಲಿ ಶೇ. 65ರಷ್ಟು ಕುಟುಂಬಗಳು ಬೇಸಾಯವನ್ನು ಅವಲಂಬಿಸಿ ಜೀವನ ನಡೆಸುತ್ತಿವೆ. ಆದರೆ ಅಂಥವರ ಜೀವನ ಮಟ್ಟ ಕುಸಿಯುತ್ತಿದೆ. ಬೇಸಾಯ ತ್ಯಜಿಸಿ ಬೇರೆ ವೃತ್ತಿ ಅವಲಂಬಿಸಿರುವವರು ಮತ್ತೆ ಬೇಸಾಯದತ್ತ ಬರುವ ಸಾಧ್ಯತೆ ಕಡಿಮೆ. ಅಳಿದುಳಿದ ರೈತರು ತಮ್ಮ  ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೆ.



ಬೇಸಾಯ ಇಂದು ಯಾರಿಗೂ ಬೇಡದ ವೃತ್ತಿ. ಹೀಗಾಗಿ ಸಮೃದ್ಧವಾಗಿರಬೇಕಿದ್ದ ಹಳ್ಳಿಗಳು ಬೆಂಗಾಡಾಗಿವೆ. ಮಾರ್ಗದರ್ಶನದ ಕೊರತೆಯಿಂದಾಗಿ ಬೇಸತ್ತ ರೈತರ ಮನವೊಲಿಸಿ ಮತ್ತೆ ಹಳ್ಳಿಗಳನ್ನು ಸಮೃದ್ಧವಾಗಿ ನಿರ್ಮಿಸಬೇಕಿದೆ. ಸ್ವಾವಲಂಬಿ ಜೀವನದ ಕೇಂದ್ರಗಳಾಗಿದ್ದ ಹಳ್ಳಿಗಳು ರಾಜಕೀಯ ಪಕ್ಷಗಳು ಕೊಡುವ ಸಣ್ಣಪುಟ್ಟ ಆಮಿಷಗಳಿಗೆ ಕಾದು ಕುಳಿತಿವೆ. ದುಡಿಯುವ ಶಕ್ತಿ ಇರುವ ಯುವಕರು ಪಟ್ಟಣಗಳ ಕಡೆಗೆ ಗುಳೆ ಹೋಗುತ್ತಿರುವುದರಿಂದ ಬೇಸಾಯದ ಪ್ರಗತಿಗೆ ಮಾರಕವಾಗಿದೆ. ಉತ್ಪಾದನೆಯೂ ಕಡಿಮೆಯಾಗಿದೆ. 



ಏನು ಮಾಡಬೇಕು?: ಕೃಷಿ ವಿಶ್ವವಿದ್ಯಾಲಯಗಳು ಯುವಜನರಿಗಾಗಿ ಪ್ರತ್ಯೇಕ ತರಬೇತಿ ಹಾಗೂ ತಾಂತ್ರಿಕ ನೆರವು ಒದಗಿಸಬೇಕು.  ಕೃಷಿ ವಿಶ್ವವಿದ್ಯಾಲಯಗಳು ಯುವ ರೈತರ ಅಗತ್ಯಗಳನ್ನು ಮರೆತಿವೆ. ಕೃಷಿಯಲ್ಲಿ ತೊಡಗಿರುವ ಯುವಕರಿಗೆ  ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಮಾಡಬೇಕಿದೆ.
 
ಕೃಷಿ ವಿಜ್ಞಾನಿಗಳು ರೈತರ ಕ್ರಿಯಾಶೀಲತೆ ಹಾಗೂ ಅನುಭವಗಳನ್ನು ಗುರುತಿಸಿ ಮಾರ್ಗದರ್ಶನ ಮಾಡಬೇಕು. ಕೃಷಿ ವಿಜ್ಞಾನಿಗಳು ರೈತರ ಜಮೀನಿನಲ್ಲಿ ತಮ್ಮ ಬಹು ಸಮಯವನ್ನು ಕಳೆಯಬೇಕು ಹಾಗೂ ಹಳ್ಳಿಗಳಲ್ಲಿ ವಾಸ ಮಾಡಬೇಕು
 ರೈತರಿಗೆ ಸಮಾಜದಲ್ಲಿ ಸರಿಯಾದ ಸ್ಥಾನಮಾನವಿಲ್ಲ. 
 


ಸಮಾಜವೂ ರೈತರನ್ನು ಅಸಡ್ಡೆಯಿಂದ ಕಾಣುವುದನ್ನು ನಿಲ್ಲಿಸಬೇಕು. ಬೇಸಾಯಗಾರರ ಕುಟುಂಬಗಳಿಗೆ  ಹೆಣ್ಣು ಕೊಡಲು ಹಿಂದೇಟು ಹಾಕುವ ಪರಿಸ್ಥಿತಿ ಬದಲಾಗಬೇಕು. ಯುವ ರೈತರು ನಗರಗಳಿಗೆ ಹೋಗದಂತೆ ತಡೆಯಬೇಕು. ಹೊಸದಾಗಿ ಬೇಸಾಯ ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ.

ಸಾವಯವ ಕೃಷಿಗೆ ಒತ್ತುಕೊಟ್ಟು ಮುಖ್ಯ ಆಹಾರ ಧಾನ್ಯಗಳ ಬೆಳೆಗಳನ್ನು ಬೆಳೆಯಬೇಕಿದೆ. ರಾಸಾಯನಿಕ ಕೃಷಿಗೆ ತಿಲಾಂಜಲಿ ಹೇಳಬೇಕು. ಸ್ವಾವಲಂಬಿ ಬೇಸಾಯದತ್ತ ಹೆಜ್ಜೆ ಹಾಕಬೇಕು.
 
ರೈತರು ಸಹಕಾರ ಸಂಘಗಳನ್ನು ಆರಂಭಿಸಿ ಕೃಷಿ ಉತ್ಪನ್ನಗಳನ್ನು ಖರೀದಿ ಹಾಗೂ ಮಾರಾಟ ಮಾಡುವಂತಾಗಬೇಕು. ಈ ಕುರಿತು ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯಗಳು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು. ಕೃಷಿಯಲ್ಲಿ ಹೊಸ ಅವಿಷ್ಕಾರಗಳನ್ನು ನಡೆಸಲು ಬೆಂಬಲ ನೀಡಬೇಕು.

ಶಿಕ್ಷಣ ಪದ್ಧತಿಯಲ್ಲಿ ಕೃಷಿ ಆಧಾರಿತ ಕೋರ್ಸುಗಳನ್ನು ರೂಪಿಸಬೇಕು, ಕೃಷಿ ಬದುಕು ಕಟ್ಟಿಕೊಳ್ಳುವುದಕ್ಕೆ ಅನುಕೂಲವಾಗುವಂತೆ ಶಿಕ್ಷಣ ನೀತಿಗಳನ್ನು ಸರ್ಕಾರ ಕಾರ್ಯಗೊಳಿಸಬೇಕು.
 
ಕೈಗಾರಿಕೆ ಅಥವಾ ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳಬಾರದು. ಕೃಷಿ ಭೂಮಿಯನ್ನು ಕೃಷಿಯೇತರ ಕೆಲಸಕ್ಕಾಗಿ ಪರಿವರ್ತನೆ ಮಾಡಕೂಡದು. ಕೃಷಿ ಆಧಾರಿತ ಆರ್ಥಿಕ ಅಭಿವೃದ್ಧಿಗೆ 

Wednesday, February 15, 2012

400 shades of lipstick found to contain lead, FDA says


A recent federal analysis showing that 400 shades of popular lipstick contained trace amounts of lead has exacerbated an ongoing dispute between regulators and consumer activists over how much lead is safe in cosmetics. Five lipsticks made by L’Oreal and Maybelline, owned by L’Oreal USA, ranked among the top 10 most contaminated of the cosmetics, according to testing by the Food and Drug Administration. Two Cover Girl and two NARS lipsticks also landed in the top 10, as did one made by Stargazer.
For years, the Campaign for Safe Cosmeticshas been pushing the government to set limits for lead levels in lipstick. The FDA has resisted, insisting that the amounts detected in various rounds of testing do not pose safety risks. But in a letter to the agency this month, the consumer group said that federal regulators have no scientific basis for this conclusion and it pressed the government to take action. Reports of lead in lipstick date to the 1990s, and have resurfaced periodically since then. In 2007, the Campaign for Safe Cosmetics tested 33 red lipsticks and found that two-thirds of them contained lead — and that one-third exceeded the FDA’s limit for lead in candy. The FDA followed up in 2008 with its own tests on 20 lipsticks and expanded its analysis to include 400 lipstick shades in the most recent study.
But the agency, which posted its latest findings on its Web site in December, said that comparing lipstick to candy is unfair. “It is not scientifically valid to equate the risk to consumers presented by lead levels in candy, a product intended for ingestion, with that associated with lead levels in lipstick, a product intended for topical use and ingested in much smaller quantities than candy,” the FDA said in its online comments.
The Personal Care Products Council, a trade group that represents the cosmetics industry, agreed with the FDA’s assessment. Halyna Breslawec, the council’s chief scientist, said her group has petitioned the agency to limit the amount of lead allowed in cosmetics. The consensus on what that limit should be — 10 parts per million, Breslawec said — is higher than the levels detected by the two rounds of FDA testing and is in line with proposals in Canada and Germany.
The FDA is evaluating whether it should recommend an upper limit. Breslawec said that lead is not intentionally put in lipstick or any other cosmetic but that many color additives approved by the FDA are mineral-based and therefore contain trace levels of lead that is naturally found in soil, water and air. But determining the true safety level for lead in cosmetics remains the stumbling block. The FDA’s most recent analysis found the highest lead concentration — 7.19 parts per million — in Maybelline’s Color Sensational Pink Petal lipstick. But the average lead contamination in the 400 lipsticks it tested last year was 1.11 parts per million, very close to the average from the agency’s 2008 analysis. The FDA, which hired a private laboratory to do the testing, selected lipsticks based on the parent company’s market share, although it also included a few brands from niche markets.
“We do not consider the lead levels we found in the lipsticks to be a safety concern,” the FDA said in its online comments. “The lead levels we found are within the limits recommended by other public health authorities for lead in cosmetics.” The Campaign for Safe Cosmetics has a different take on the results. The lead content in Maybelline’s Pink Petal is more than twice as high as levels found in the previous FDA report and more than 275 times the level found in the least-contaminated product in the recent report, the group wrote in a letter to the agency this month. The least-contaminated product — Wet ’n’ Wild Mega Mixers Lip Balm — was also the least expensive, the group said in a separate statement, “demonstrating that price is not an indicator of good manufacturing practices.”
The group cited federal research that concluded that there’s no safe level of lead exposure for children, and experts stressed the need to shield children and pregnant women from exposure. “Lead builds in the body over time, and lead-containing lipstick applied several times a day, every day, can add up to significant exposure levels,” Mark Mitchell, co-chairman of the Environmental Health Task Force for the National Medical Association, said in the group’s statement. California, a trailblazer when it comes to lead regulation, has grappled with this issue.
In 2008, after reports on lead in lipsticks resurfaced, the state attorney general’s office examined whether cosmetics firms had run afoul of a California law that requires businesses to provide a reasonable warning if they knowingly expose consumers to chemicals that can cause cancer or reproductive harm. The state concluded, based on public data, that the concentration of lead in lipsticks was too low to trigger the law. The duty to warn consumers would not arise until the lead concentration reached five parts per million, the state said.
In the FDA’s study, the overwhelming majority of the lipsticks fell below that threshold. But two exceeded it — Maybelline’s Pink Petal and L’Oreal’s Colour Riche Volcanic. The California attorney general’s office has taken no further action.


taken from Online Business Magazine

GM food banned in Monsanto canteen

Monsanto, the biggest promoter of genetically modified food, was hoist with its own petar when it was disclosed that it has a staff canteen in which GM produce is banned.

The firm running the canteen at Monsanto's pharmaceuticals factory at High Wycombe, Buckinghamshire, serves only GM-free meals, Friends of the Earth said. In a notice in the canteen, Sutcliffe Catering, owned by the Granada Group, said it had taken the decision "to remove, as far as practicable, GM soya and maize from all food products served in our restaurant. We have taken the above steps to ensure that you, the customer, can feel confident in the food we serve."

Monsanto confirmed the position. "Yes, this is the case, and it is because we believe in choice," said the company's spokesman, Tony Coombes. But employees at Monsanto's agribusiness plant at Cambridge were happy to eat GM produce, he said. "The notice in the restaurant there says some products may contain GMOs [genetically modified organisms] - because our staff are happy to eat food sprayed with fewer chemicals."

Monsanto says crops engineered to be tolerant of its own weedkillers need less pesticide, but critics say that though the dosage may be less, the impact on the environment of these pesticides is much greater. Adrian Bebb, Friends of the Earth's food campaigner, said: "The public has made its concerns about GM ingredients very clear - now it appears that even Monsanto's own catering firm has no confidence in this new technology."

taken from The Independent Online Magazine

Saturday, January 7, 2012

ರಾಮನಗರದಲ್ಲಿ ಫಲಪುಷ್ಪ ಪ್ರದಶ೵ನ

ಇಂದಿನಿಂದ ( ಜನವರಿ 7 ರಿಂದ 9 ರವರಗೆ) ರಾಮನಗರದಲ್ಲಿ ಫಲಪೂಷ್ಪ ಪ್ರದಶ೵ನ ನಡೆಯಲಿದೆ. ತೋಟಗಾರಿಕೆ ಇಲಾಖೆ ಹಾಗು ರಾಮನಗರ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಈ ಮೇಳವನ್ನು ಆಯೋಜಿಸಲಾಗಿದೆ. ಆಸಕ್ತವರು ಸದರಿ ಮೇಳಕ್ಕೆ ಭೇಟಿಕೊಡಿ. ವಿವಿದ ರೀತಿಯ ದೇಶಿಯ ಹಾಗು ವಿದೇಶಿ ಪುಷ್ಪಗಳು ಕಣ್ಣಿಗೆ ರಾರಾಜಿಸುತ್ತವೆ. ಬಣ್ಣ-ಬಣ್ಣದ, ಚಿಕ್ಕ-ದೊಡ್ಡವು, ತೋಟದಲ್ಲಿ ಬೆಳೆಯುವಂತ ನಾನಾ ಬಗೆಯ ಹೂವುಗಳು ನೋಡಬಹುದು. ಮನಸ್ಸಿಗೆ ಮುದ ನೀಡುವ ಹೂವುಗಳನ್ನು ನೋಡಬನ್ನಿ. 




ಅಳಿದು ಉಳಿದು ಹೋಗುತ್ತಿರುವ ಕಾಲಘಟ್ಟದಲ್ಲಿ ಮನಸ್ಸಿಗೆ ಪುಳಕ ನೀಡುವ ಹೂವುಗಳನ್ನು ನೋಡಿ ಖುಷಿಪಡಿ. ನಿಮ್ಮ ಗೆಳೆಯ/ತಿ ರ ಜೊತೆ ಬನ್ನಿ ಸಂತೋಷವನ್ನು ಇಮ್ಮಡಿಗೊಳಿಸಿ.

ಮೇಳವನ್ನು ಕೆಂಗೆಲ್ ಆಂಜನೇಯ ಸ್ವಾಮಿ ದೇವಸ್ಥಾನದ ಎದರುಗಡೆ ಇರುವ ತೋಟಗಾರಿಕಾ ಇಲಾಖೆಯ ತೋಟದಲ್ಲಿ ಆಯೋಜಿಸಲಾಗಿದೆ. 

ಗೋಧಿ ಎಂಬ ಅದ್ಭುತ ಹುಲ್ಲು (Miracle Wheat Grass!)


ಒಂದೇ ಔಷಧದಿಂದ ಹಲವಾರು ಕಾಯಿಲೆಗಳು ಗುಣವಾಗುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತದಲ್ಲವೇ? ಅಂತಹ ಔಷಧವೊಂದಿದೆ. ಆದರೆ ಅದು ಯಾವುದೇ ಔಷಧದ ಅಂಗಡಿಯಲ್ಲಿ ದೊರೆಯುವುದಿಲ್ಲ. ನೀವೇ ಅದನ್ನು ತಯಾರಿಸಿಕೊಳ್ಳಬೇಕು. ಈ ಔಷಧದ ತಯಾರಿಕೆಗೆ ಏನೆಲ್ಲಾ ಪದಾರ್ಥಗಳು ಬೇಕೋ, ಏನೆಲ್ಲಾ ಪರಿಕರಗಳು ಬೇಕೋ ಎಂಬ ಕುತೂಹಲ ನಿಮಗಿರಬಹುದು.ಯಾವುದಾ ಔಷಧ?ಹೇಳಿದರೆ ಖಂಡಿತಾ ಅಚ್ಚರಿಯಾದೀತು. ಆ ದಿವ್ಯ ಔಷಧ ಇನ್ನಾವುದೂ ಅಲ್ಲ; ಗೋಧಿ ಗಿಡದ ರಸ !
ಅಮೇರಿಕದ ಮಹಿಳಾ ವೈದ್ಯೆ ಡಾ.ಎನ್. ಬಿರಾಮೋರ್ ಎಂಬುವರು ಅಸಾಧ್ಯ ರೋಗಗಳಿಂದ ನರಳುತ್ತಿದ್ದವರ ಮೇಲೆಲ್ಲಾ ಗೋಧಿ ಗಿಡದ ರಸದ ಪ್ರಯೋಗ ನಡೆಸಿ ನೂರಕ್ಕೆ ನೂರು ಸಾಫಲ್ಯ ಪಡೆದುದಾಗಿ ಹೇಳುತ್ತಾರೆ. ಈ ವೈದ್ಯೆಯ ಪ್ರಕಾರ ಜಗತ್ತಿನಲ್ಲಿರುವ ಯಾವುದೇ ರೋಗ ಗೋಧಿ ಗಿಡದ ರಸದ ಕ್ರಮಬದ್ಧ ಸೇವನೆಯಿಂದ ಗುಣವಾಗದಿರುವುದಿಲ್ಲ. ದೊಡ್ಡ- ದೊಡ್ಡ ವೈದ್ಯರು ಗುಣಪಡಿಸಲು ಅಸಾಧ್ಯವೆಂದು ಕೈಚೆಲ್ಲಿದ, ಮರಣಶಯ್ಯೆಯಲ್ಲಿದ್ದ ಕ್ಯಾನ್ಸರ್ ರೋಗಿಗಳನ್ನು ಸಹ ಗೋಧಿ ಗಿಡದ ರಸದಿಂದಲೇ ಗುಣಪಡಿಸಿದ್ದಾರಂತೆ.
ಭಗಂಧರ, ಮೂಲವ್ಯಾಧಿ, ಮಧುಮೇಹ, ಗಂಟಲುಬೇನೆ, ಸಂಧಿವಾತ, ಕಾಮಾಲೆ, ಜ್ವರ, ಅಸ್ತಮಾ, ಕೆಮ್ಮು ಇತ್ಯಾದಿ ರೋಗಗಳಿಂದ ಅನೇಕ ವರ್ಷಗಳಿಂದ ಬಳಲುತ್ತಿದ್ದವರನ್ನು ಸಹ ಈ ಸಾಧಾರಣ ಗಿಡದ ರಸದಿಂದಲೇ ಗುಣಪಡಿಸಲಾಗಿದೆಯಂತೆ. ಹೆಚ್ಚೇಕೆ ಆಧುನಿಕ ವೈದ್ಯ ವಿಜ್ಞಾನವು ಗುಣಪಡಿಸಲು ಅಸಾಧ್ಯವೆಂದು ಘೋಷಿಸಿರುವ ಸುಮಾರು 350 ಕಾಯಿಲೆಗಳನ್ನು ಈ ಗಿಡದ ರಸದಿಂದ ಗುಣಪಡಿಸಲಾಗಿದೆ. ಗೋಧಿ ಗಿಡದಲ್ಲಿರುವ ಅದ್ಭುತ ಶಕ್ತಿಯು ಪ್ರಯೋಗಗಳಿಂದ ದೃಢಪಟ್ಟಿದೆ. ಅಮೇರಿಕದ ಅನೇಕ ಪ್ರಸಿದ್ಧ ವೈದ್ಯರು ಈ ಗಿಡದ ರಸದಲ್ಲಿರುವ ಔಷಧೀಯ ಗುಣಗಳನ್ನು ಸಮರ್ಥಿಸಿದ್ದಾರೆ. ಭಾರತದ ಗುಜರಾತ್, ಮುಂಬಯಿ ಪ್ರಾಂತ್ಯಗಳ ಅನೇಕ ವೈದ್ಯರು ಸಹಾ ಈ ಬಗ್ಗೆ ಪ್ರಯೋಗನಿರತರಾಗಿದ್ದಾರೆ.
ಹಸಿರು ರಕ್ತ: ಈ ಎಲ್ಲಾ ಕಾರಣಗಳಿಂದಾಗಿ ಗೋಧಿ ಗಿಡದ ರಸವನ್ನು “ಹಸಿರು ರಕ್ತ” ಎಂದು ಕರೆಯಲಾಗಿದೆ. ಇದು ಶೇ. 40ರಷ್ಟು ಮಾನವ ರಕ್ತವನ್ನು ಹೋಲುತ್ತದೆ. “ದೈವದತ್ತವಾದ ಈ ಅಮೃತದೆದುರು ವೈದ್ಯರು ನೀಡುವ ಇತರ ಅಂಶಗಳು ಏನೇನೂ ಅಲ್ಲ. ಜಗತ್ತಿನ ಪ್ರತಿಯೊಬ್ಬನೂ ಈ ರಸವನ್ನು ಸೇವಿಸಿ ಲಾಭ ಪಡೆಯಬಹುದು” – ಹೀಗೆಂದು ಡಾ. ಬಿರಾಮೋರ್ ಹೇಳುತ್ತಾರೆ.ನೀವು ಮನೆಯಲ್ಲೇ ಈ ಔಷಧವನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. ಹೇಗೆ? ಮುಂದೆ ಓದಿ.
ಮನೆಯಲ್ಲೇ ಮಾಡಿಕೊಳ್ಳಿ ನಿಮ್ಮ ಅನುಕೂಲಕ್ಕೆ ತಕ್ಕಂತೆ 10-12 ಇಲ್ಲವೇ 20 ಮರದ ಇಲ್ಲವೇ ಮಣ್ಣಿನ ಕುಂಡಗಳನ್ನು ತಂದುಕೊಳ್ಳಿ. ಸೂರ್ಯ ಕಿರಣಗಳು ಬೀಳದ ಜಾಗದಲ್ಲಿ ಅವುಗಳನ್ನು ಇಟ್ಟು ಮಣ್ಣು ತುಂಬಿಸಬೇಕು. ರಾಸಾಯನಿಕ ಗೊಬ್ಬರ ಹಾಕಬಾರದು. ನಂತರ ಒಂದೊಂದು ಕುಂಡದಲ್ಲಿ ಸುಮಾರು 60-70 ಉತ್ತಮವಾದ ಗೋಧಿಯ ಕಾಳುಗಳನ್ನು ಬಿತ್ತಬೇಕು. ದಿನವೂ ನೀರು ಹಾಕಲು ಮರೆಯಬೇಡಿ. 3-4 ದಿನಗಳಲ್ಲಿ ಬಿತ್ತಿದ್ದ ಗೋಧಿಯು ಮೊಳಕೆ ಬರುವುದು. ನಂತರ 8-10 ದಿನಗಳಲ್ಲಿ ಅದು 5-6 ಅಂಗುಲ ಎತ್ತರದ ಗಿಡವಾಗುತ್ತದೆ.
ಆಗ ಅದರಲ್ಲಿ 30-40 ಗಿಡಗಳನ್ನು ಬೇರು ಸಹಿತ ಕಿತ್ತು ಬೇರನ್ನು ಚೆನ್ನಾಗಿ ತೊಳೆಯಬೇಕು. ನಂತರ ಚೆನ್ನಾಗಿ ಅರೆಯಬೇಕು. ಗ್ರೈಂಡರ್/ಮಿಕ್ಸರ್ ಗಳನ್ನು ಈ ಕೆಲಸಕ್ಕೆ ಉಪಯೋಗಿಸಬಹುದು. 6 ಅಂಗುಲಕ್ಕಿಂತ ಎತ್ತರದ ಗಿಡ ರಸ ತೆಗೆಯಲು ಅನರ್ಹ. ಹೀಗೆ ಅರೆದ ನಂತರ ಶುದ್ಧವಾದ ಬಟ್ಟೆಯ ಸಹಾಯದಿಂದ ಹಿಂಡಿ ರಸ ತೆಗೆದುಕೊಳ್ಳಬೇಕು. ಈ ರಸವನ್ನು ಕೂಡಲೇ ರೋಗಿಗಳಿಗೆ ಕುಡಿಸಬೇಕು. ಏಕೆಂದರೆ ರಸ ತೆಗೆದ ಅರ್ಧ ಗಂಟೆಯ ನಂತರ ರಸ ಸತ್ವಹೀನವಾಗಿಬಿಡುತ್ತದೆ. ರೋಗಿಯು ಈ ರಸವನ್ನು ಸಾವಕಾಶವಾಗಿ ಸೇವಿಸಬೇಕು. ಬೆಳಿಗ್ಗೆ ಮತ್ತು ಸಾಯಂಕಾಲ ಒಂದು ಸಾರಿಗೆ 30 ಎಂ.ಎಲ್ ನಂತೆ ರೋಗಿಗಳಿಗೆ ಈ ರಸ ಕೊಡಬೇಕು. ಈ ರಸದ ಸೇವನೆಯ ನಂತರ ಒಂದು ಲೋಟ ನೀರು ಕುಡಿಯಬೇಕು.
ಹಳೆಯ ರೋಗದಿಂದ ನರಳುತ್ತಿರುವವರಿಗೆ ದಿನಕ್ಕೆ ನಾಲ್ಕು ಬಾರಿ ಈ ರಸ ಕೊಡಬೇಕು. ಇಂತಹವರು ಪ್ರಾರಂಭದಲ್ಲಿ 8-10 ದಿನ ದೈನಂದಿನ ಆಹಾರ ಸೇವನೆಯನ್ನು ನಿಲ್ಲಿಸಿ ಆಗಾಗ ಎಳನೀರು(ಸೀಯಾಳ, ಬೊಂಡ) ಸೇವಿಸುತ್ತಿರಬೇಕು. ಮೊದಲ ಕೆಲವು ದಿನ ನೀವು 30 ಎಂ.ಎಲ್ ರಸ ಸೇವಿಸಿರಿ. ನಿಮ್ಮ ಶರೀರಕ್ಕೆ ಅದು ಒಗ್ಗುತ್ತದೆ, ಏನೂ ತೊಂದರೆಯಿಲ್ಲ ಎನಿಸಿದ ನಂತರ ಬೆಳಿಗ್ಗೆ ಮತ್ತು ಸಾಯಂಕಾಲ ಹೊತ್ತಿಗೆ 30 ಎಂ.ಎಲ್ ನಂತೆ ಒಟ್ಟು 60 ಎಂ.ಎಲ್ ಸೇವಿಸಬೇಕು. ಒಂದಿಷ್ಟು ಕಾಲ ಭೇದಿಯಾಗುವ ಪರಿಸ್ಥಿತಿ ಬಂದರೆ, ಹೊಟ್ಟೆ ತೊಳೆಸಿದಂತಾದರೆ ಒಂದೆರಡು ವಾರ ಈ ರಸದ ಸೇವನೆಯನ್ನು ನಿಲ್ಲಿಸಿ. ನಂತರ ಅಲ್ಪ ಪ್ರಮಾಣದಿಂದ ಪ್ರಾರಂಭಿಸಿ.
ಈ ರೀತಿ ಗೋಧಿ ಗಿಡದ ರಸವನ್ನು ಸೇವಿಸಿದರೆ 8-10 ದಿನಗಳಲ್ಲೇ ರೋಗಗಳೆಲ್ಲಾ ನಿವಾರಣೆಯಾಗತೊಡಗುತ್ತವೆ. 15-20 ದಿನಗಳಲ್ಲಿ ರೋಗಗಳು ಪೂರ್ಣ ಗುಣವಾಗುವುವು. ಉಲ್ಬಣಾವಸ್ಥೆಯಲ್ಲಿರುವ ಕಾಯಿಲೆಗಳಿಗೆ ಇನ್ನೂ ಕೆಲವು ದಿನ ರಸದ ಪ್ರಯೋಗ ಅಗತ್ಯ. ಮರಣಾವಸ್ಥೆಯಲ್ಲಿರುವ ರೋಗಿಯು ಕೂಡ 2-3 ತಿಂಗಳಲ್ಲೇ ಗುಣಮುಖನಾಗುವನು. ರಸ ತೆಗೆಯುವ ತಾಪತ್ರಯವೇ ಬೇಡವೆನಿಸಿದರೆ ಗಿಡಗಳನ್ನು ಸಣ್ಣ- ಸಣ್ಣ ಚೂರುಗಳಾಗಿ ಕತ್ತರಿಸಿ ಸಲಾಡ್(salad) ನಂತೆ ಸೇವಿಸಬಹುದು. ಬೇಕಿದ್ದರೆ ತರಕಾರಿಗಳನ್ನು ಸೇರಿಸಬಹುದು. ಬೇಕಿದ್ದರೆ ಗಿಡಗಳನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿದೂ ರಸವನ್ನು ಸೇವಿಸಬಹುದು. ಇದರಿಂದ ಹಲ್ಲು ಮತ್ತು ವಸಡುಗಳು ಗಟ್ಟಿಯಾಗುತ್ತವಲ್ಲದೆ ಬಾಯಿಯ ದುರ್ವಾಸನೆಯೂ ದೂರವಾಗುತ್ತದೆ.
ದಿನದ ಯಾವ ಸಮಯದಲ್ಲಿ ಬೇಕಾದರೂ ಈ ರಸ ಸೇವಿಸಲು ಅಡ್ಡಿಯಿಲ್ಲ. ಆದರೆ, ಇದನ್ನು ಸೇವಿಸಿದ ನಂತರ ಒಂದು ಅಥವಾ ಕನಿಷ್ಟ ಅರ್ಧ ಗಂಟೆಯವರೆಗೆ ಯಾವುದೇ ಘನ ಅಥವಾ ದ್ರವ ಅಹಾರಗಳನ್ನು ಸೇವಿಸಬಾರದು. ಪ್ರಾರಂಭದಲ್ಲಿ ಈ ರಸದ ಸೇವನೆಯಿಂದ ಹಲವರಿಗೆ ವಮನವಾದೀತು. ಆಮಶಂಕೆ, ಶೀತಾದಿಗಳಿಂದ ನರಳಬೇಕಾಗಬಹುದು. ಆದರೆ ಭಯ ಬೇಡ. ವಾಂತಿಯಾಗುವುದನ್ನು ನಿವಾರಿಸಲು ಗಿಡಗಳನ್ನು ಅರೆಯುವಾಗ ಬೆಳ್ಳುಳ್ಳಿ ಅಥವಾ ವೀಳೆಯದೆಲೆಯನ್ನು ಸೇರಿಸಿಕೊಳ್ಳಬಹುದು. ಆದರೆ ಲಿಂಬೆಯ ರಸ ಅಥವಾ ಉಪ್ಪನ್ನು ಉಪಯೋಗಿಸಲೇಬಾರದು.
ಈ ಗೋಧಿ ಗಿಡದ ರಸವು ಹಾಲು, ಮೊಸರು, ಮಾಂಸಾದಿಗಳಿಗಿಂತ ಅತ್ಯಧಿಕ ಸತ್ವಯುತವಾದುದು. ಆದ್ದರಿಂದ ರೋಗಿಯಿರಲಿ, ನಿರೋಗಿಯಿರಲಿ, ಮಗುವಿರಲಿ, ಮುದುಕನಿರಲಿ ಇದರ ಸೇವನೆಯಿಂದ ಬಹಳ ಲಾಭವುಂಟು. ಹೊಸದಾಗಿ ಹುಟ್ಟಿದ ಮಗುವಿಗೂ ಸಹ ಈ ರಸದ 5-6 ಹನಿಗಳನ್ನು ಕುಡಿಸಬಹುದು.
ವರ್ಷವಿಡೀ ಗಿಡದ ಪೂರೈಕೆಗೋಧಿ ಗಿಡದ ರಸವನ್ನು ನಾವು ವರ್ಷವಿಡೀ ಪಡೆಯುವುದು ಹೇಗೆ? ಈಗಾಗಲೇ ತಿಳಿಸಿರುವಂತೆ 10ರಿಂದ 20 ಕುಂಡಗಳು ನಿಮ್ಮ ಹತ್ತಿರ ಇವೆಯಲ್ಲವೇ? ಒಂದೊಂದು ದಿನ ಒಂದೊಂದು ಕುಂಡದಲ್ಲಿ ಗೋಧಿಯ ಕಾಳುಗಳನ್ನು ಬಿತ್ತುತ್ತಿದ್ದೀರಿ. ನೀವು 8 ಅಥವಾ 10ನೇ ಕುಂಡದಲ್ಲಿ ಗೋಧಿ ಕಾಳುಗಳನ್ನು ಬಿತ್ತುವ ದಿನ 1ನೇ ಕುಂಡದಲ್ಲಿನ ಗಿಡವು ಕೊಯ್ಲಿಗೆ ಬಂದಿರುತ್ತದೆ. ಆ ಕುಂಡದ ಗಿಡಗಳನ್ನು ಕಿತ್ತುಕೊಳ್ಳಿ. ಅದೇಕ್ಷಣದಲ್ಲಿ ಆ ಕುಂಡಕ್ಕೆ ಪುನಃ ಗೋಧಿಯ ಕಾಳುಗಳನ್ನು ಬಿತ್ತಿ. 2ನೇ ದಿನ 2ನೇ ಕುಂಡದ ಗಿಡಗಳನ್ನು ಕಿತ್ತ ನಂತರ ಆ ಕುಂಡದಲ್ಲಿ ಗೋಧಿಯ ಕಾಳುಗಳನ್ನು ಬಿತ್ತಿರಿ. ಹೀಗೆ ಯಾವ ಕುಂಡದಲ್ಲಿ ಗೋಧಿ ಗಿಡಗಳನ್ನು ಕೀಳುತ್ತೀರೋ ಆಯಾ ಕುಂಡದಲ್ಲಿ ಗೋಧಿ ಕಾಳುಗಳನ್ನು ಬಿತ್ತುತ್ತಾ ಬಂದರೆ 5-6 ಅಂಗುಲ ಎತ್ತರದ ಗೋಧಿ ಗಿಡಗಳು ವರ್ಷಪೂರ್ತಿ ನಿಮಗೆ ದೊರೆಯುತ್ತವೆ.
ಬಹು ಹಿಂದೆಯೇ ಗೊತ್ತಿತ್ತು: 1931ರಷ್ಟು ಹಿಂದೆಯೇ ಚಾರ್ಲ್ಸ್ ಸ್ಚನಾಬೆಲ್ ಎಂಬ ಆಹಾರ ವಿಜ್ಞಾನಿ ಗೋಧಿ ಹುಲ್ಲಿನ ಸಾಮರ್ಥ್ಯವನ್ನು ಕಂಡುಕೊಂಡಿದ್ದನು. ಗೋಧಿಯ ಹಾಗೂ ಇತರ ಧಾನ್ಯಗಳ ಹುಲ್ಲುಗಳನ್ನು (ಉದಾ: ಬಾರ್ಲಿ ಹುಲ್ಲು ಇತ್ಯಾದಿ) ಪೂರಕ ಆಹಾರವಾಗಿ ವ್ಯಾಪಕವಾಗಿ ಬಳಸಲಾಗುತಿತ್ತು. ಯಾವಾಗ ಔಷಧೋತ್ಪನ್ನ ಕೈಗಾರಿಕೆಗಳು ಹುಟ್ಟಿಕೊಂಡು ರಾಸಾಯನಿಕ ಅನ್ನಾಂಗಗಳ ತಯಾರಿಕೆ ಪ್ರಾರಂಭವಾಯಿತೋ ಆಗ ಜನರ ಗಮನ ಆ ಕಡೆ ಹರಿದು ಗೋಧಿ ಹುಲ್ಲಿನ ಬಳಕೆ ಹಿಂದೆ ಬಿತ್ತು. ಆದರೆ, ಈ ರಾಸಾಯನಿಕ ಅನ್ನಾಂಗಗಳು ಗೋಧಿ ಹುಲ್ಲಿನಿಂದ ದೊರೆಯುವ ತಾಜಾ ಅನ್ನಾಂಗಗಳಿಗೆ ಸಮವಲ್ಲ.
1960ರಲ್ಲಿ ಅನ್ ವಿಗ್ಮೋರ್ ಎಂಬ ವೈದ್ಯೆ ಚಿಕಿತ್ಸೆಗೆ ಬಗ್ಗದ ತನ್ನ ದೊಡ್ಡ ಕರುಳಿನ ಊತವನ್ನು ಗೋಧಿ ಹುಲ್ಲಿನ ಚಿಕಿತ್ಸೆಯಿಂದ ಗುಣಪಡಿಸುವಲ್ಲಿ ಯಶಸ್ವಿಯಾದರು. ನಂತರ ಈಕೆಯು ಕಾಯಿಲೆಗಳಿಂದ ನರಳುತ್ತಿದ್ದ ನೆರೆಹೊರೆಯ ಅನೇಕರಿಗೆ ಈ ಹುಲ್ಲಿನ ಚಿಕಿತ್ಸೆ ನೀಡಿದಾಗ ಅವರೆಲ್ಲರೂ ಗುಣಮುಖರಾಗಿ ನವಚೈತನ್ಯ ಪಡೆದರು. ಇದರಿಂದ ಉತ್ತೇಜಿತರಾದ ವಿಗ್ಮೋರ್ “ಹಿಪ್ಪೋಕ್ರೇಟ್ಸ್ ಹೆಲ್ತ್ ಇನ್ಸ್ಟಿಟ್ಯೂಟ್” – ಎಂಬ ತನ್ನದೇ ಚಿಕಿತ್ಸಾಲಯದಲ್ಲಿ ಗಂಭೀರವಾದ ಕಾಯಿಲೆಗಳಿಂದ ನರಳುತ್ತಿದ್ದ ಅನೇಕ ರೋಗಿಗಳನ್ನು ಗೋಧಿ ಹುಲ್ಲಿನ ಚಿಕಿತ್ಸೆಯಿಂದ ಯಶಸ್ವಿಯಾಗಿ ಗುಣಪಡಿಸಿದರು.
ಈ ಹುಲ್ಲಿನಲ್ಲಿ ಏನೇನಿವೆ? ಒಂದು ಟೀ ಚಮಚದಷ್ಟು ಗೋಧಿ ಹುಲ್ಲಿನ ರಸದಲ್ಲಿ 10ರಿಂದ 15 ಕ್ಯಾಲೊರಿಗಳು ಮಾತ್ರ ಇವೆ. ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲ. ಹತ್ತಿರ ಹತ್ತಿರ 1 ಗ್ರಾಂ.ನಷ್ಟು ಪ್ರೊಟೀನ್ ಇದೆ. ಉಪಯುಕ್ತ ಅಮೀನೋ ಆಮ್ಲಗಳಲ್ಲಿ ಎಲ್ಲ ಎಂಟು ಬಗೆ ಈ ರಸಗಳಲ್ಲಿವೆ. ಗೋಧಿ ಹುಲ್ಲಿನ ರಸದಲ್ಲಿ ಅನ್ನಾಂಗಗಳಾದ  ಎ, ಬಿ1, ಬಿ2, ಬಿ3, ಬಿ4, ಬಿ6, ಬಿ8 ಮತ್ತು ಬಿ12, ಸಿ ಇ ಮತ್ತು ಕೆ ಗಳಿವೆ. ಹಾಗೆಯೇ 1 ಟೀ ಚಮಚ ಗೋಧಿ ಹುಲ್ಲಿನ ರಸದಲ್ಲಿ 15 ಎಂ.ಜಿ ಕ್ಯಾಲ್ಸಿಯಂ, 8 ಎಂಸಿಜಿ ಅಯೋಡಿನ್, 3.5 ಎಂಸಿಜಿ ಸೆಲೆನಿಯಂ, 870 ಎಂಸಿಜಿ ಕಬ್ಬಿಣ, 62 ಎಂಸಿಜಿ ಸತುವುಗಳಲ್ಲದೆ ಅನೇಕ ಇತರ ಖನಿಜಾಂಶಗಳಿವೆ.ಗೋಧಿ ಹುಲ್ಲಿನ ರಸವನ್ನು ಉಪಯುಕ್ತವಾಗುವಂತೆ ಮಾಡುವ  ಇನ್ನೂ ಇತರ ನಾಲ್ಕು ಘಟಕಗಳಿವೆ.
ಯಾವುವು ಆ ಘಟಕಗಳು? ಆ ಘಟಕಗಳಾವುವೆಂದರೆ,
ಅ) ಸೂಪರ್ ಆಕ್ಸೈಡ್ ಡಿಸ್ಮ್ಯೂಟೇಸ್(super oxide dismutase)
ಆ) ಪಿ4 ಡಿ1
ಇ) ಮ್ಯೂಕೋ ಪಾಲಿಸ್ಯಾಕ್ಚೆರೈಡ್ಸ್(Muco-palisaccharides) ಹಾಗೂ
ಈ) ಕ್ಲೋರೋಫಿಲ್( chlorophyll-ಪತ್ರಹರಿತ್ತು)
ಮೊದಲನೆಯದಾದ ಸೂಪರ್ ಆಕ್ಸೈಡ್ ಡಿಸ್ಮ್ಯೂಟೇಸ್ ಎಂಬ ಘಟಕವು ಕ್ಯಾನ್ಸರ್ ನಿರೋಧಕವೆಂದು ಕಂಡುಬಂದಿದೆ. ಇದು ಹೇಗೆಂದರೆ, ಕ್ಯಾನ್ಸರ ಪೀಡಿತ ಜೀವಕೋಶದಲ್ಲಿ ಈ ಘಟಕದ ಕೊರತೆ ಇರುತ್ತದಂತೆ. ಆ ಕೊರತೆಯನ್ನು ಗೋಧಿ ಹುಲ್ಲಿನ ಸೇವನೆಯಿಂದ ತುಂಬಿಬಿಟ್ಟರೆ ಆ ಜೀವಕೋಶದಲ್ಲಿ ಕ್ಯಾನ್ಸರ್ ಇರುವುದಿಲ್ಲ. ಇನ್ನು ಎರಡನೆಯ ಘಟಕ ಪಿ4ಡಿ1 ಎಂಬುದರ ವಿಚಾರ: ಇದು ಗೋಧಿ ಹುಲ್ಲಿನಲ್ಲಿರುವ “ಗ್ಲೂಕೋ-ಪ್ರೊಟೀನ್”. ಇದರಲ್ಲಿ ಮುಖ್ಯವಾಗಿ ಮೂರು ಭಾಗಗಳಿವೆ. ಮೊದಲನೆಯದಾಗಿ ಇದು ಆಂಟಿಆಕ್ಸಿಡಂಟ್ ಆಗಿ ಕೆಲಸ ಮಾಡುತ್ತದೆ. ಅಲ್ಲದೆ ಇದು ಆರ್ ಎನ್ ಎ ಮತ್ತು ಡಿ ಎನ್ ಎ ಗಳನ್ನು ಪುನರುಜ್ಜೀವನಗೊಳಿಸುವುದು. ಆರ್ ಎನ್ ಎ ಮತ್ತು ಡಿ ಎನ್ ಎ ಗಳು ಶರೀರ ನಿರ್ಮಾಣ ವಸ್ತುಗಳು. ಪಿ4 ಡಿ1 ಘಟಕವು ಜೀವಕೋಶಗಳು ಕ್ಷೀಣೀಸುವಿಕೆ ಅಥವಾ ಬದಲಾವಣೆಯನ್ನು ನಿಧಾನಗೊಳಿಸುತ್ತದೆ ಅಥವಾ ಇಲ್ಲವಾಗಿಸುತ್ತದೆ.
ಎರಡನೆಯದಾಗಿ ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಕೀಲು ನೋವಿನಂತಹ ಉರಿಯೂತ ಪರಿಸ್ಥಿತಿಯಲ್ಲಿ ಗೋಧಿ ಹುಲ್ಲಿನ ಪ್ರಯೋಗದಿಂದ ಆಶ್ಚರ್ಯಕರ ಪರಿಣಾಮವುಂಟಾಗುತ್ತದೆಂಬುದು ಕಂಡುಬಂದಿದೆ. ಪಿ4ಡಿ1 ನ 3ನೆಯ ಅಂಶವೆಂದರೆ, ಕ್ಯಾನ್ಸರ್ ಕೋಶಗಳನ್ನು ಆಕ್ರಮಿಸಿ ಅವುಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆಂದು ನಂಬಲಾಗಿದೆ. ಮೂರನೆಯ ಘಟಕ ಮೂಕೊಪಾಲಿಸ್ಯಾಕ್ಚರೈಡ್ಸ್. ಇದು ಶರೀರದ ದುರಸ್ತಿ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ. ಅಲ್ಲದೇ ಇದು ಹಾನಿಗೊಂಡ ಹೃದಯ ಹಾಗೂ ಆರ್ಟರಿ ಟಿಶ್ಯೂವನ್ನು ದುರಸ್ತಿಗೊಳಿಸಲು ಸಹಾಯಕ ಕೂಡ.
4ನೆಯ ಘಟಕ ಪತ್ರಹರಿತ್ತು. ರಾಸಾಯನಿಕವಾಗಿ ಇದು ಹಿಮೊಗ್ಲೋಬಿನ್ ಗೆ ಸರಿಸಮಾನ. ಪತ್ರಹರಿತ್ತಿನಲ್ಲಿ 3 ರೀತಿಯ ಲಾಭಗಳಿವೆ. ಇದು ಗಾಯಗಳ ಮೇಲೆ ಬ್ಯಾಕ್ಟೀರಿಯಾ ನಿರೋಧಕವಾಗಿ ಕೆಲಸ ಮಾಡುತ್ತದೆ. ಜೀರ್ಣಾಂಗಗಳಲ್ಲಿ ಯೀಸ್ಟ್ (yeast) ನಿರೋಧಕದಂತೆ ಕೆಲಸ ಮಾಡಿದರೆ, ಶರೀರದಲ್ಲಿರುವ ಅನೇಕ ವಿಷಕಾರಕ ವಸ್ತುಗಳನ್ನು ನಿವಾರಿಸುತ್ತದೆ. ಜೊತೆಗೆ ಇದು ಉರಿಯೂತ ನಿವಾರಕ ಗುಣವನ್ನು ಪಡೆದಿದೆ. ಹಾಗಾಗಿ ಇದನ್ನು ಕೀಲು ನೋವು, ಹೊಟ್ಟೆಯ ಅಲ್ಸರ್, ಗಂಟಲು ನೋವು, ದೊಡ್ಡ ಕರುಳಿನ ಊತ ಹಾಗೂ ಇತರ ಉರಿಯೂತಗಳಲ್ಲಿ ಈ ಹಿಂದೆಯೇ ಹೇಳಿದ ಹಾಗೆ ಗೋಧಿ ಗಿಡದ ಪತ್ರಹರಿತ್ತು ಉಪಯುಕ್ತ.
ಸಂಪೂರ್ಣ ಆಹಾರ: ಗೋಧಿಯ ಹುಲ್ಲನ್ನು ಒಂದು ಸಂಪೂರ್ಣ ಆಹಾರ ಎಂದು ತೀರ್ಮಾನಿಸಲಾಗಿದೆ. ಏಕೆಂದರೆ ಅದರಲ್ಲಿ ಮಾನವನ ಶರೀರ ಪೋಷಣೆಗೆ ಬೇಕಾಗುವ ಎಲ್ಲ ಅಮೀನೋ ಆಮ್ಲ, ಆನ್ನಾಂಗ ಹಾಗೂ ಖನಿಜಗಳು ಇವೆ.
1 ಔನ್ಸ್ ಗೋಧಿ ಹುಲ್ಲಿನ ರಸವು 2.5 ಪೌಂಡ್ ತರಕಾರಿಗಳಲ್ಲಿರುವಷ್ಟು ಪೌಷ್ಟಿಕಾಂಶಕ್ಕೆ ಸಮ. 1 ಔನ್ಸ್ ಗೋಧಿ ಹುಲ್ಲಿನ ರಸದಲ್ಲಿ 1 ಔನ್ಸ್ ಕಿತ್ತಲೆ ಹಣ್ಣಿನ ರಸದಲ್ಲಿರುವುದಕ್ಕಿಂತಲೂ ಹೆಚ್ಚು ಪ್ರಮಾಣದ ‘ಸಿ’ ಅನ್ನಾಂಗವಿರುತ್ತದೆ. 1 ಔನ್ಸ್ ಕ್ಯಾರೆಟ್ ರಸದಲ್ಲಿರುವುದರ ಎರಡು ಪಟ್ಟು ‘ಎ’ ಅನ್ನಾಂಗವು ಅಷ್ಟೇ ಪ್ರಮಾಣದ ಗೋಧಿ ಹುಲ್ಲಿನ ರಸದಲ್ಲಿರುತ್ತದೆ. 25 ಎಂಎಲ್ ಗೋಧಿ ಹುಲ್ಲಿನ ರಸದಲ್ಲಿ 1 ಕೆಜಿ ತರಕಾರಿಯಲ್ಲಿರುವಷ್ಟೇ ಅನ್ನಾಂಗಗಳು, ಖನಿಜಾಂಶಗಳು ಹಾಗೂ ಅಮೀನೋ ಆಮ್ಲಗಳು ಇರುತ್ತವೆಂದು ತಿಳಿದು ಬಂದಿದೆ.
ಒಂದು ಎಚ್ಚರಿಕೆ: ಗೋಧಿ ಹುಲ್ಲಿನ ರಸದಲ್ಲಿ ‘ಕೆ’ ಅನ್ನಾಂಗವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ರಕ್ತವನ್ನು ಹೆಪ್ಪುಗಟ್ಟಿಸುವ ಗುಣವನ್ನು ಹೊಂದಿದೆ. ಆದ ಕಾರಣ, ರಕ್ತವನ್ನು ತೆಳುವಾಗಿಸುವ ಚಿಕಿತ್ಸೆ ಪಡೆಯುತ್ತಿರುವವರು, ಗೋಧಿಯ ಅಲರ್ಜಿ ಇರುವವರು ವೈದ್ಯರ ಮೇಲುಸ್ತುವಾರಿ ಇಲ್ಲದೇ ಗೋಧಿ ಹುಲ್ಲಿನ ಸೇವನೆ ಮಾಡಕೂಡದು.
Written by Dr G V Ganeshayya and Published by Kanaja

ಡಿಡಿಟಿಯ ಪುನರಾಗಮನ!?


ಕಳೆದ ಐದು ವರ್ಷಗಳ ಹಿಂದೆ ಇಡೀ ಭೂಖಂಡದಿಂದಲೇ ಉಚ್ಛಾಟನೆಗೊಂಡಿದ್ದ ಡಿಡಿಟಿ ಎನ್ನುವ ಭಯಂಕರ ಕೀಟನಾಶಕ ಇಂದು ಮನೆಯೊಳಗೇ ನುಗ್ಗಲು ತಯಾರಾಗಿದೆ.  ಕಾರಣ ಮಲೇರಿಯಾ!!!
ಮೊದಲು ಸ್ವಲ್ಪ ಡಿಡಿಟಿಯ ಇತಿಹಾಸ ನೋಡೋಣ.
ಇಸವಿ ೧೯೩೯ ಡೈಕ್ಲೋರೋ ಡೈಫಿನೈಲ್ ಟ್ರೈಕ್ಲೋರೋ ಈಥೇನ್ (DDT)ಯನ್ನು ಸ್ವಿಸ್ ರಾಸಾಯನಶಾಸ್ತ್ರಜ್ಞ ಪಾಲ್ ಮುಲ್ಲರ್ ಕಂಡುಹಿಡಿದನು.  ಇಸವಿ ೧೯೪೨-೪೩ರಲ್ಲಿ ಇದನ್ನು ಬೆಳೆಗಳಿಗೆ ಬಳಸಲಾಯಿತು.  ಎರಡನೇ ವಿಶ್ವಯುದ್ಧದಲ್ಲಿ ಹೇನುನಾಶಕವಾಗಿಯೂ ಬಳಸಲಾಯಿತು.  ಧಾನ್ಯಗಳನ್ನು ನಾಶ ಮಾಡುವ ಕೀಟಗಳು ಹಾಗೂ ಕಾಯಿಲೆಗಳಿಗೆ ಕಾರಣವಾಗುವ ಕೀಟಗಳಿಗೆಲ್ಲಾ ಇದೊಂದು ಪರಿಣಾಮಕಾರಿ ನಾಶಕ ಎಂದು ವಿಶ್ವದಾದ್ಯಂತ ಪ್ರಚಾರ ಪಡೆಯಿತು.  ಇಸವಿ ೧೯೪೮ರಲ್ಲಿ ಮುಲ್ಲರ್‌ಗೆ ನೋಬಲ್ ಬಹುಮಾನ ಬಂತು.
ಅತ್ಯಂತ ವಿಷಯುಕ್ತವಾದ ಡಿಡಿಟಿಯಿಂದ ಕೃಷಿಕೀಟ, ಕಾಡಿನ ಕೀಟಗಳೊಂದೇ ಅಲ್ಲ, ಸೊಳ್ಳೆಗಳ ನಿಯಂತ್ರಣವೂ ಸಾಧ್ಯ ಎನ್ನುವುದನ್ನು ಮೊದಲು ಯುರೋಪ್, ಆಮೇಲೆ ಅಮೇರಿಕಾ ಕಂಡುಕೊಂಡಿತು.
ಇದರ ಹಿಂದೆ ಕ್ಲೋರ್‌ಡೆನ್, ಎಂಡ್ರಿನ್, ಆಲ್ಪ್ರಿನ್… ಹೀಗೆ ಅನೇಕ ಕೀಟನಾಶಕಗಳು…ಅಲ್ಲ…ವಿಷಗಳು ಬಂದವು.  ಈ ರೀತಿಯ ರಾಸಾಯನಿಕಗಳ ಉತ್ಪಾದನೆ ವಿಶ್ವದಲ್ಲಿ ೭ ಮಿಲಿಯನ್ ಟನ್‌ಗಳು ಎಂಬುದು ಒಂದು ಕನಿಷ್ಠ ಅಂದಾಜು ಮಾತ್ರ.
ಇಸವಿ ೧೯೪೬ರಲ್ಲಿಯೇ ಡಿಡಿಟಿಗೆ ವಿರೋಧವೂ ಬಂತು.  ಇದರಲ್ಲಿರುವ ವಿಷ ಶತ್ರುಕೀಟಗಳಿಗೆ ಮಾತ್ರವಲ್ಲ, ಇಡೀ ಪರಿಸರಕ್ಕೆ ಅಪಾಯಕಾರಿ ಎನ್ನುವ ವಿಚಾರ ವಿರೋಧಿಗಳದು.  ಆದರೆ ಡಿಡಿಟಿಯ ಜನಪ್ರಿಯತೆಯ ಮುಂದೆ ವಿರೋಧಿಗಳ ಕೂಗು ಕ್ಷೀಣವಾಗಿತ್ತು.
೧೯೫೦ರ ಹೊತ್ತಿಗೆ ಸಂಶೋಧನಾ ಕಾರ್ಯ ಹೆಚ್ಚಿತು.  ಸುಮಾರು ೧೨ ವರ್ಷಗಳ ನಂತರ ಮರದ ತೊಗಟೆಗಳಲ್ಲಿ ಡಿಡಿಟಿ ಮಿತಿಮೀರಿದ ಪ್ರಮಾಣದಲ್ಲಿರುವುದು ಪತ್ತೆಯಾಯಿತು. ಅದೇ ಸಮಯದಲ್ಲಿ ಫ್ಲೋರಿಡಾದ ಎವರ್‌ಗ್ಲೇಡ್‌ನಲ್ಲಿನ ಮೊಸಳೆಗಳು ಅಂಗವಿಕಲವಾಗಿ ಜನಿಸತೊಡಗಿದವು.  ವಿಶಾಲ ಹುಲ್ಲುಗಾವಲಿನ ಪಕ್ಕದ ಸರೋವರದ ನೀರು ಪೂರ್ತಿ ವಿಷ ರಾಸಾಯನಿಕಗಳ ಸರೋವರವಾಗಿತ್ತು.  ಉತ್ತರ ಅಮೇರಿಕಾ ಹಾಗೂ ಭಾರತದಲ್ಲಿ ಹದ್ದುಗಳ ವಂಶ ನಾಶವಾಗತೊಡಗಿತು.  ಹದ್ದುಗಳು ಸಸ್ಯಾಹಾರಿಗಳಲ್ಲ.  ಆದರೆ ಈ ಕೀಟನಾಶಕದೊಂದಿಗೆ ಜೀವಿಸಿದ್ದ ಕಪ್ಪೆ, ಕೀಟ, ಕೋಳಿಗಳನ್ನು, ಸತ್ತಪ್ರಾಣಿಗಳನ್ನು ತಿನ್ನುತ್ತಿದ್ದವು.  ಇವುಗಳೊಳಗಿದ್ದ ಡಿಡಿಟಿಯು ಹದ್ದಿನ ಮೊಟ್ಟೆಗಳ ಕವಚಗಳನ್ನು ಶಿಥಿಲಗೊಳಿಸುತ್ತಿತ್ತು.  ಅಂದರೆ ಡಿಡಿಟಿ ಮೂರು ತಡೆಗಳನ್ನು ದಾಟಿಯೂ ಉಳಿಯುವಷ್ಟು ತೀವ್ರತೆ ಹೊಂದಿತ್ತು.  ಅದೇ ರೀತಿ ಎದೆಹಾಲು ಕುಡಿಯುತ್ತಿರುವ ಮಗುವಿನಲ್ಲೂ ಡಿಡಿಟಿಯ ಅಂಶ ಪತ್ತೆಯಾಯಿತು.
ಇದೇ ಸಮಯದಲ್ಲಿ ಗ್ರೇಟ್ ಬ್ರಿಟನ್ ಹಾಗು ಜಪಾನ್‌ಗಳಲ್ಲಿ ರಾಸಾಯನಿಕ ಕೀಟನಾಶಕಗಳ ವಿರುದ್ಧ ದೊಡ್ಡ ಆಂದೋಲನ ನಡೆಯಿತು.  ಜಪಾನ್‌ನ ಮೀನಮಾಟದಲ್ಲಿ ಹುಟ್ಟುವಾಗಿನ ಅಂಗವೈಕಲ್ಯದಿಂದ ಹಿಡಿದು ಯಾವುದೇ ವಯಸ್ಸಿನಲ್ಲೂ ಇದ್ದಕ್ಕಿದ್ದಂತೆ ನರದೌರ್ಬಲ್ಯ ಉಂಟಾಗುವಿಕೆ ದಾಖಲಾಯಿತು.
ಡಿಡಿಟಿ ಹಾಗೂ ಇತರ ರಾಸಾಯನಿಕ ವಿಷಗಳನ್ನು ಮನೆಯಲ್ಲಿಟ್ಟುಕೊಂಡರೂ ಸಾಕು, ಆತ್ಮಹತ್ಯಾ ಭಾವನೆಗಳು ಹೆಚ್ಚುತ್ತದೆ ಎಂಬುದೂ ಸಹ ಸಾಬೀತಾಯಿತು.  ಜೊತೆಗೆ ನಿರಂತರ ಸಹಚರ್ಯೆಯಿಂದ ಲ್ಯುಕೇಮಿಯಾ, ಮೈಲೋಮಾ, ಲಿಂಫೋಮಾ ಕ್ಯಾನ್ಸರ್ ಪ್ರಕರಣ ರಾಶಿ ರಾಶಿ ಹೊರಹೊಮ್ಮಿದವು.  ಹೃದಯಾಘಾತ ಹೆಚ್ಚಿತು.
ದೊಡ್ಡ ಜೀವಿಗಳು ಬಲಿಯಾಗುವುದು ಹೆಚ್ಚಿದಷ್ಟೂ ಕೀಟಗಳು ಪ್ರತಿರೋಧ ಬೆಳೆಸಿಕೊಳ್ಳತೊಡಗಿದವು.  ೧,೦೦೦ ರೀತಿಯ ಕೀಟಗಳು ಡಿಡಿಟಿಯನ್ನು ಇಂದು ಸುಲಭವಾಗಿ ಜೀರ್ಣಿಸಿಕೊಳ್ಳುತ್ತವೆ.  ಅವುಗಳ ವಂಶವಾಹಿಯಲ್ಲೇ ಪ್ರತಿರೋಧ ಬೆಳೆದಿದೆ ಎನ್ನುತ್ತಾರೆ ವಂಶವಾಹಿ ತಂತ್ರಜ್ಞರು.
ಮಲೇರಿಯಾ V/s ಡಿಡಿಟಿ
ಪರ-ವಿರೋಧಗಳ ಗದ್ದಲ ನಡೆಯುತ್ತಿರುವಾಗಲೇ ಜೀನಸ್ ಅನಾಫಿಲಿಸ್ ಕುಟುಂಬಕ್ಕೆ ಸೇರಿದ ೬೦ ಜಾತಿಯ ಸೊಳ್ಳೆಗಳು ಡಿಡಿಟಿಯಿಂದ ನಿರ್ವಂಶವಾಗತೊಡಗಿದವು.  ಎರಡನೇ ಮಹಾಯುದ್ಧದ ನಂತರ ವಿಶ್ವವನ್ನೇ ಆತಂಕದಿಂದ ಗಡಗಡ ನಡುಗಿಸಿದ್ದ ಮಲೇರಿಯಾವು ಡಿಡಿಟಿಯಿಂದ ನಿಯಂತ್ರಣಕ್ಕೆ ಬಂದಿದ್ದು ಎಲ್ಲರಿಗೂ ಸೋಜಿಗವನ್ನುಂಟುಮಾಡಿತ್ತು.
ವಿಷಯದ ಆಳಕ್ಕಿಳಿದಾಗ ಮಲೇರಿಯಾಕ್ಕೆ ಕಾರಣವಾಗುವ ಪ್ಲಾಸ್ಮೋಡಿಯಂ ಎನ್ನುವ ಭಯಂಕರ ಪರಾವಲಂಬಿ ಜೀವಿ ಎದುರಿಗೆ ಬಂದಿತು.  ಇದು ಕೊಳಚೆ ನೀರಿನಲ್ಲಿರುವ ಸೂಕ್ಷ್ಮಜೀವಿ.  ಏನೆಲ್ಲಾ ರಾಸಾಯನಿಕ ವಿಷಗಳಿಗೆ ಪ್ರತಿರೋಧ ಹೊಂದಿರುವ ಕ್ರಿಮಿ.  ಆದರೆ ಇದು ಮಾನವನ ದೇಹದೊಳಗೆ ತಾನಾಗಿಯೇ ಪ್ರವೇಶ ಮಾಡಲು ಸಾಧ್ಯವಿಲ್ಲ.  ಮಾಧ್ಯಮವಾಗಿ ಅನಾಫಿಲಿಸ್ ಕುಟುಂಬದ ಸೊಳ್ಳೆಗಳೇ ಬೇಕು ಹಾಗೂ ಅದೊಂದೇ ಮಾರ್ಗ ಕೂಡ.
ಕೊಳಚೆಯಲ್ಲೇ ಹುಟ್ಟುವ ಅನಾಫಿಲಿಸ್ ಸೊಳ್ಳೆಗಳೊಳಗೆ ಫ್ಲಾಸ್ಮೋಡಿಯಂ ಸೇರಿಕೊಂಡು ತನ್ನ ಜೀವನಚಕ್ರ ನಡೆಸುತ್ತದೆ.  ಅನಾಫಿಲಿಸ್ ತನ್ನ ಜೀವನಚಕ್ರ ಪೂರೈಸಲು ಮನುಷ್ಯನ (ಪ್ರಾಣಿಗಳ) ರಕ್ತಕ್ಕೋಸ್ಕರ ಕಚ್ಚಿದಾಗ ಫ್ಲಾಸ್ಮೋಡಿಯಂ ಮನುಷ್ಯನ ದೇಹದೊಳಗೆ ತೂರಿಕೊಳ್ಳುತ್ತದೆ.  ಹಾಗಂತ ಫ್ಲಾಸ್ಮೋಡಿಯಂ ಅನಾಫಿಲಿಸ್‌ಗೆ ಅಪಾಯಕಾರಿಯಲ್ಲ.
ಪ್ರತಿವರ್ಷ ವಿಶ್ವದಲ್ಲಿ ೫೦ ಕೋಟಿ ಜನರು ಮಲೇರಿಯಾಕ್ಕೆ ತುತ್ತಾದರೆ ೧೦ ಲಕ್ಷ ಜನ ಮಲೇರಿಯಾದಿಂದ ಸಾಯುತ್ತಾರೆ. ಅಷ್ಟೇ ಅಲ್ಲ, ಪ್ರತಿಸಾರಿಯೂ ಮಲೇರಿಯಾಕ್ಕೆ ಹೊಸ ರಾಸಾಯನಿಕ ಸಂಯುಕ್ತಗಳೇ ನಿಯಂತ್ರಿಸಲು ಬೇಕು.  ಮಲೇರಿಯಾವನ್ನು ಇಂದಿಗೂ ಮೊದಲ ಹಂತದಲ್ಲಿದ್ದಾಗ ಮಾತ್ರ ನಿಯಂತ್ರಿಸಬಹುದಾಗಿದೆ.
ಆಫ್ರಿಕಾ, ಬಾರತ, ದಕ್ಷಿಣಾ ಅಮೇರಿಕಾ ಮುಂತಾದ ಉಷ್ಣವಲಯವಿರುವ ಪ್ರದೇಶಗಳಲ್ಲಿ ಮಲೇರಿಯಾಕ್ಕೆ ಹಸುಮಕ್ಕಳೂ ಬಲಿಯಾಗುತ್ತಾರೆ.
ಇಸವಿ ೧೯೫೫ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು [WHO], ಮಲೇರಿಯಾವು ಡಿಡಿಟಿಗಿಂತಲೂ ೧,೦೦೦ ಪಟ್ಟು ಹೆಚ್ಚು ಭೀಕರ. ಅದಕ್ಕಾಗಿ ಡಿಡಿಟಿಯು ವಿಷವಾದರೂ ಅತ್ತ್ಯುತ್ತಮ ಸೊಳ್ಳೆನಿಯಂತ್ರಕ. ಈ ಮೂಲಕ ಮಲೇರಿಯಾ ನಿಯಂತ್ರಕವಾಗಿದೆ ಎಂದು ಹೇಳಿಕೆ ನೀಡಿತು. ಅದಕ್ಕಾಗಿ ಮಲೇರಿಯಾ ನಿಯಂತ್ರಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಡಿಡಿಟಿಯನ್ನು ಬಳಸಬಹುದು ಎಂದಿತು. ಆದರೆ ಡಿಡಿಟಿಯನ್ನು ೮೫ ದೇಶಗಳು ಆಗಲೇ ಹೊರಹಾಕಿದ್ದವು.  ಅದನ್ನು ಕೊಂಚ ಕೂಡ ಒಳಸೇರಿಸಲು ಅವು ಒಪ್ಪಲಿಲ್ಲ. ಆದರೆ ಬಡದೇಶಗಳಲ್ಲಿ ಸುಲಭ ಬೆಲೆ, ಸುಲಭ ಮಾರ್ಗದಲ್ಲಿ ಸೊಳ್ಳೆನಾಶಕ್ಕೆ ಡಿಡಿಟಿಯೊಂದೇ ಮೂಲವಸ್ತುವಾಗಿತ್ತು.
ಇಸವಿ ೧೯೯೩ರಲ್ಲಿ WHO ಮತ್ತೆ ತನ್ನ ನೀತಿಯನ್ನು ಮರು ಪರಿಶೀಲಿಸಿತು.  ಕೇವಲ ಒಳಾಂಗಣಕ್ಕೆ ಮಾತ್ರ ಡಿಡಿಟಿ ಬಳಸಿ ಎಂದು ತಿಳಿಸಿತು.  ಇಸವಿ ೧೯೯೮ರಲ್ಲಿ ಮಲೇರಿಯಾವನ್ನು ಹಿಮ್ಮೆಟ್ಟಿಸಿ ಎಂದು ನಡೆದ ಅಭಿಯಾನದಲ್ಲೂ ಅತ್ಯಂತ ನಿಯಂತ್ರಿತ ರೀತಿಯಲ್ಲಿ ಡಿಡಿಟಿ ಬಳಸಬಹುದೆಂದೇ ಹೇಳಲಾಗಿತ್ತು.  ಆದರೆ ಅದರೊಂದಿಗೆ ಇನ್ನಿತರ ಉಪಾಯಗಳನ್ನು ಸಂಶೋಧನೆ ಮಾಡಲಾಗಿತ್ತು.
ಇಸವಿ ೨೦೦೧ರಲ್ಲಿ ಸ್ಟಾಕ್‌ಹೋಂನಲ್ಲಿ ನಡೆದ ವಿಶ್ವ ಪರಿಸರ ಸಮಾವೇಶದಲ್ಲಿ ಡಿಡಿಟಿಯೊಂದಿಗೆ ಇತರ ೧೨ ರಾಸಾಯನಿಕ ವಿಷಗಳನ್ನು ಉತ್ಪಾದನೆ ಮಾಡಲೇಬಾರದು ಎನ್ನುವ ನಿರ್ಣಯ ಮಾಡಲಾಯಿತು.
ವರ್ತಮಾನದ ಪರಿಸ್ಥಿತಿ
ಇಸವಿ ೨೦೦೬ರ ಮೇ ೨ರಂದು ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಎನ್ನುವ ಅಂತಾರಾಷ್ಟ್ರೀಯ ಅಭಿವೃದ್ಧಿನಿರತ ಸಂಸ್ಥೆಯೊಂದರ ಸಲಹೆಯಂತೆ WHO ಮತ್ತೆ ಡಿಡಿಟಿಯನ್ನು ನಿಯಂತ್ರಿತ ಪ್ರಮಾಣದಲ್ಲಿ ಮನೆಯೊಳಗೆ ಬಳಸಿ ಮಲೇರಿಯಾ ತಡೆಯಿರಿ ಎಂದು ಅನುಮತಿ ನೀಡಿದೆ.
ಇದಕ್ಕೆ ಪುರಾವೆಗಳನ್ನೂ ನೀಡಿದೆ. ಇಸವಿ ೧೯೪೯ರಲ್ಲಿ ಯುನೈಟೆಡ್ ಸ್ಟೇಟ್ಸ್ ಮಲೇರಿಯಾದಿಂದ ಮುಕ್ತವಾಗಲು ಕಾರಣ ಡಿಡಿಟಿ.  ಅನಂತರ ಇಸವಿ ೧೯೬೯ರವರೆಗೆ ಯುರೋಪ್, ಭಾರತ, ದಕ್ಷಿಣ ಅಮೇರಿಕಾ, ಆಫ್ರಿಕಾ ಮುಂತಾದ ದೇಶಗಳು ಮಲೇರಿಯಾದಿಂದ ಭಾಗಶಃ ಮುಕ್ತರಾಗಲು ಕಾರಣ ಡಿಡಿಟಿ.  ಇದರೊಂಡಿಗೆ WHO ತಾನೇ ಕ್ಷೇತ್ರಕ್ಕಿಳಿದು ಪರೀಕ್ಷೆ ನಡೆಸಿತು.  ದಕ್ಷಿಣಪೂರ್ವ ದೇಶಗಳಾದ ಯೆಮನ್, ಸೂಡಾನ್ ಮುಂತಾದ ದೇಶಗಳಲ್ಲಿ ಆರ್ಗ್ಯಾನೋ ಕ್ಲೋರಿನ್, ಫೈರಿಥ್ರಾಯಿಡ್ಸ್, ಆರ್ಗ್ಯಾನೋ ಪಾಸ್ಫೇಟ್ ಹಾಗೂ ಕಾರ್ಬಮೇಟ್ಸ್ ಮುಂತಾದ ರಾಸಾಯನಿಕ ಸಂಯುಕ್ತಗಳಿರುವ ಕೀಟನಾಶಕಗಳನ್ನು ಬಳಸಲಾಯಿತು.  ಆದರೆ ಇದೆಲ್ಲದಕ್ಕಿಂತಲೂ ಡಿಡಿಟಿಯೇ ಅತ್ಯಂತ ಕಡಿಮೆ ವಿಷರಾಸಾಯನಿಕ ಎನ್ನುವ ಅಭಿಪ್ರಾಯ WHO ವಿಶ್ವ ಮಲೇರಿಯಾ ಕಾರ್ಯಕ್ರಮ ನಿರ್ದೇಶಕ ಆರಾಟಕೊಚಿಯವರದು.
ಕೃಷಿಗೆ ಮಿತಿಮೀರಿ ಬಳಸಿದ ಪರಿಣಾಮ ಏನೆಲ್ಲಾ ಅನಾಹುತಗಳಿಗೆ ಕಾರಣವಾಯಿತೇ ವಿನಃ ನಿಯಂತ್ರಿತ ಪ್ರಮಾಣದ ಬಳಕೆಯಿಂದಲ್ಲ ಎನ್ನುವ ವಾದವೂ ಕೊಚಿಯವರದು.
ವರ್ಷದಲ್ಲಿ ಅನೇಕ ಸಾರಿ ಬೆಳೆ ರಕ್ಷಣೆಗೋಸ್ಕರ ಹೆಲಿಕಾಪ್ಟರ್ ವಿಮಾನ ಬಳಸಿ ವ್ಯಾಪಕವಾಗಿ ಸಿಂಪಡಿಸಿದ ಪರಿಣಾಮ ಭೀಕರವಾಗಿದೆ.  ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ಲಿವರ್ ಕ್ಯಾನ್ಸರ್, ಎದೆ ಕ್ಯಾನ್ಸರ್, ನರದೌರ್ಬಲ್ಯ, ತಾಯಿಹಾಲಿನಲ್ಲಿ ಹಾಗೂ ರಕ್ತದಲ್ಲಿರುವ ಡಿಡಿಟಿ ಅಂಶ, ಅವಧಿಗೆ ಮುನ್ನವೇ ಜನನ, ಎದೆಹಾಲಿಲ್ಲದಿರುವುದು ಹೀಗೆ ಏನೆಲ್ಲಾ ಕಾರಣಗಳಿಗೆ ಡಿಡಿಟಿಯೇ ಮೂಲ ಎಂದು ಫಲಿತಾಂಶ ಬಂದಿತ್ತು. ಆದರೆ WHO ಅದನ್ನು ನಿರಾಕರಿಸಿತು.  ಕಾರಣ ಅಲ್ಲೂ ಸಹ ಇಸವಿ ೧೯೯೫ರವರೆಗೆ ಕೃಷಿಗಾಗಿ ವಿಷ ಸಿಂಪಡಣೆ ಟನ್ ಲೆಕ್ಕದಲ್ಲಿತ್ತು.  ಅದಕ್ಕಾಗಿ ಈ ಫಲಿತಾಂಶ ಬಂದಿದೆ ಎನ್ನುವ ವಿವರಣೆ WHOದು.
ಡಿಡಿಟಿಯನ್ನು ಸೊಳ್ಳೆಗಳು ಕುಳಿತುಕೊಳ್ಳುವ ಗೋಡೆಗಳ ಮೇಲೆ ಒಂದು ಚದರಕ್ಕೆ ಎರಡು ಗ್ರಾಂನಷ್ಟು ಮಾತ್ರ ಸಿಂಪಡಿಸಿದರೂ ಸಾಕು.   ಮಲೇರಿಯಾವನ್ನು ಮನೆಯಿಂದ ಹೊರಗಟ್ಟಬಹುದು.  ಅದೇ ರೀತಿ ಚರಂಡಿ, ಕೊಳಚೆ ಪ್ರದೇಶಗಳಿಗೂ ಅತ್ಯಂತ ಕಡಿಮೆ ಸಿಂಪಡಿಸಿ ಸೊಳ್ಳೆಗಳನ್ನು ನಿಯಂತ್ರಿಸಬಹುದು ಎನ್ನುವ ಸಮರ್ಥನೆ WHOದ ಮಲೇರಿಯಾ ನಿಯಂತ್ರಣ ವಿಭಾಗದ ಸದಸ್ಯರದು.
ಆದರೆ ಡಿಡಿಟಿಯ ವಿರುದ್ಧ ಅತ್ಯಂತ ಹೆಚ್ಚು ವಿರೋಧದ ದನಿ ಮಾಡಿದ್ದು ದಕ್ಷಿಣ ಆಫ್ರಿಕಾದ ಅಂತಾರಾಷ್ಟ್ರೀಯ ಅಂಟುರೋಗ ನಿವಾರಣೆ ಅಧ್ಯಯನ ಸಂಸ್ಥೆ.  ಸಂಸ್ಥೆಯ ಮುಖ್ಯಸ್ಥರಾದ ಮೌರಿನ್ ಕೋಜಿಯವರ ಪ್ರಕಾರ ಇಂಟೆಗ್ರೇಟೆಡ್ ವೆಕ್ಟಾರ್ ಮ್ಯಾನೇಜ್‌ಮೆಂಟ್ ವಿಧಾನ [IVM] ಮಾತ್ರ ಹೆಚ್ಚು ಪರಿಣಾಮಕಾರಿ ಎನ್ನುತ್ತಾರೆ.
ಮಲೇರಿಯಾ ಕೇವಲ ಡಿಡಿಟಿಯಿಂದ ಮಾತ್ರ ಹೋಗುತ್ತದೆ ಎಂದು ಭಾವಿಸದೇ ಬೇರೆ ಬೇರೆ ರೀತಿಯಲ್ಲಿ ರೋಗನಿವಾರಣೆಗೆ ಪ್ರಯತ್ನಿಸುವಿಕೆಯೇ ಐವಿಎಮ್ ವಿಧಾನ.  ಇದೊಂದು ಶಿಕ್ಷಣ ಪದ್ಧತಿ.  ಮನೆಯ ಸುತ್ತಮುತ್ತಲಿನ ಸೊಳ್ಳೆಗಳ ನಿವಾರಣೆ ಮಾಡುವ ರೀತಿಗಳನ್ನು ಕಲಿಯುವಿಕೆಯೇ ಆಗಿದೆ.
ನೀರು ನಿಲ್ಲದಂತೆ ಮಾಡುವುದು, ಶೌಚಾಲಯ ಸ್ಥಳಗಳನ್ನು ಮುಚ್ಚುವುದು, ಜಾಲರಿ ಪರದೆ ಬಳಸುವುದು, ಸ್ಥಳೀಯ ಸೊಳ್ಳೆನಾಶಕ ಸಸ್ಯಗಳ ಹೊಗೆ ಹಾಕುವುದು, ಸೊಳ್ಳೆಭಕ್ಷಕ ಕೀಟಗಳ ಪ್ರಯೋಗ, ಸೊಳ್ಳೆಭಕ್ಷಕ ಹಕ್ಕಿ ಗುಬ್ಬಿಗಳ ಉಪಯೋಗ ಪಡೆಯುವಿಕೆ, ಮೀನುಗಳ ಬಳಕೆ, ಕೊಟ್ಟಕೊನೆಯದಾಗಿ ಕೀಟನಾಶಕಗಳ ಬಳಕೆ.
ಆಫ್ರಿಕಾದಲ್ಲಿ ಕ್ಲೋರಿನ್‌ಗಳ ಬದಲು ಪೈರಿಥ್ರಿನ್‌ಗಳನ್ನು ಬಳಸಿ ಶೆಕಡಾ ೩೦ರಷ್ಟು ರೋಗ ನಿರ್ಮೂಲನೆ ಮಾಡಲಾಗಿತ್ತು.  ಆದರೆ ಈಗ ಸೊಳ್ಳೆಗಳು ಅವಕ್ಕೂ ಪ್ರತಿರೋಧ ಬೆಳೆಸಿಕೊಂಡವು.  ಹಾಗಾಗಿ ಸಸ್ಯಜನ್ಯ ಕೀಟನಾಶಕಗಳನ್ನೇ ಅವಲಂಬಿಸಲಾಗುತ್ತಿದೆ.
ವಿಶ್ವದಲ್ಲಿ ಮಲೇರಿಯಾ ಇರುವ ಭೂಪ್ರದೇಶವು ವ್ಯಾಪಕವಾಗಿರುವ ಕಾರಣ ವಿಭಿನ್ನ ಪರಿಸರವಿದೆ.  ಒಂದು ಕಡೆ ಮಾಡಿದ ಪ್ರಯೋಗ ಮತ್ತೊಂದೆಡೆ ಪರಿಣಾಮಕಾರಿಯಾಗುವ ಸಾಧ್ಯತೆ ಅತಿ ಕಡಿಮೆ.  ಅಷ್ಟೇ ಅಲ್ಲ, ಇದು ಕೇವಲ ಭೌಗೋಳಿಕ, ಪಾರಿಸರಿಕ ವ್ಯಾಪ್ತಿಗಷ್ಟೇ ಸೀಮಿತವಾಗಿಲ್ಲ.  ಸಾಮಾಜಿಕವಾಗಿಯೂ ವಿಪರೀತ ಬೆಂಬಲ ಬೇಕು.  ಜೊತೆಗೆ ರಾಜಕೀಯ ಬೆಂಬಲ ಇರಲೇಬೇಕು.  ಇವೆಲ್ಲಾ ಸೇರಿದಾಗ ಮಾತ್ರ ಎವಿಎಮ್ ಯಶಸ್ವಿಯಾಗುತ್ತದೆ.
ಹುನ್ನಾರ
ಡಿಡಿಟಿಯ ಬಳಕೆಯ ಬಗ್ಗೆ WHO ಸಹಮತ ನೀಡಿರುವುದು ಅಮೇರಿಕಾದ ಹುನ್ನಾರ ಎಂದು ಆಫ್ರಿಕಾ ಈಗಾಗಲೇ ಹೇಳಿಕೆ ನೀಡಿದೆ.  ಅವರಲ್ಲಿ ಖರ್ಚಾಗದೇ ಉಳಿದ ಡಿಡಿಟಿಯನ್ನು ತುಂಬಲು ನಮ್ಮ ಹಿಂದುಳಿದ ದೇಶಗಳು ಕಸದ ತೊಟ್ಟಿಯಾಗಬೇಕೆ ಎನ್ನುವ ಪ್ರಶ್ನೆಯೂ ಅವರದು.  ಅದಕ್ಕೆ ಪೂರಕವೆಂಬಂತೆ ವಿಶ್ವಬ್ಯಾಂಕಿನ ಮನವೊಲಿಸುತ್ತಿದೆ.  ಒಟ್ಟಾರೆ ಡಿಡಿಟಿಯ ಬೆಲೆ ದಿನೇ ದಿನೇ ಏರುತ್ತಿರುವುದು ನೋಡಿದರೆ ಇದರ ಲಾಬಿ ಪತ್ರಿಕೆಗಳಲ್ಲಿ ಬರುವ ದಿನ ದೂರವಿಲ್ಲ.
ಶುಕ್ರವಾರ ೨೮-೯-೨೦೦೬ರ ಪ್ರಜಾವಾಣಿಯಲ್ಲಿ ದೇವದುರ್ಗ ತಾಲ್ಲೂಕಿನಲ್ಲಿ ೮೦ ಜನರಿಗೆ ಮಲೇರಿಯಾ ಆಗಿದ್ದು ೧೦ ಜನ ತೀರಿಕೊಂಡಿರುವುದು ಅಧಿಕೃತ ವರದಿಯಾಗಿದೆ.  ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಯಾವುದೇ ಔಷಧಗಳೇ ಇಲ್ಲದೇ ಇರುವ ಕಾರಣ ಇನ್ನಷ್ಟು ಸಾವನ್ನು ನಿರೀಕ್ಷಿಸಲಾಗಿದೆ.
ಇದೇ ಮಲೇರಿಯಾದ ವಿಪರ್ಯಾಸ. ಮಲೇರಿಯಾ ಪತ್ತೆಯಾಗಿ ನೂರಾರು ವರ್ಷಗಳೂ ಕಳೆದರೂ ಮಲೇರಿಯಾ ವಿರುದ್ಧ ಲಸಿಕೆ ಸಿದ್ಧವಾಗಿಲ್ಲ.  ಫ್ಲಾಸ್ಮೋಡಿಯಂ ಇಂದಿಗೂ ನಿಗೂಢ ಕ್ರಿಮಿ.  ಇದರ ಜೀವನಶೈಲಿ, ವಂಶವಾಹಿಗುಣ, ಆಕ್ರಮಣದ ರೀತಿ ಒಂದೂ ಪತ್ತೆಯಾಗಿಲ್ಲ.  ಅದಿರಲಿ ನಮಗೆ ಸೊಳ್ಳೆಗಳ ಬಗ್ಗೆಯೇ ಗೊತ್ತಿಲ್ಲ.  ಸೊಳ್ಳೆಗಳ ಸಂತಾನಭಿವೃದ್ಧಿ, ಕೀಟಸಂಖ್ಯಾ ನೀತಿ, ಆಹಾರಮೂಲಗಳು ಬೆಳವಣಿಗೆಯ ಹಂತಗಳು, ಪ್ಲಾಸ್ಮೋಡಿಯಂ ಸೊಳ್ಳೆಗಳೊಳಗೆ ಸೇರುವ ಸಮಯ, ವಿಧಾನ, ಸೇರಿದ ಮೇಲಿನ ಸ್ಥಿತಿ, ಸೊಳ್ಳೆಗಳಿಗಿರುವ ಮಾನವನ ಆಕರ್ಷಣೆ ಏನೆಲ್ಲಾ ವಿಷಯಗಳ ಬಗ್ಗೆ ನಮಗೆ ತಿಳಿದಿರುವುದು ಬಹಳ ಕಡಿಮೆ.  ಇದೇ ಮಲೇರಿಯಾಕ್ಕೆ, ಡಿಡಿಟಿಗೆ ಇನ್ನಷ್ಟು ಬೆಳೆಯಲು ಸಹಕಾರಿಯಾಗಿದೆ. ಹಾರ್ವರ್ಡ್‌ನ ಜೀವಶಾಸ್ತ್ರಜ್ಞ ಎಲ್ಲಿಸ್ ಮೆಕೆಂಜಿಯವರು ಅನಾಫಿಲಿಸ್ ಗಾಂಬೀಯೇ ಬಗ್ಗೆ ಸಂಶೋಧನೆ ಮಾಡುತ್ತಾ ಅದರ ವಿವರಗಳನ್ನೆಲ್ಲಾ ದಾಖಲಿಸಿದರೆ ಒಂದು ವಿಶ್ವಕೋಶವಾಗುತ್ತದೆ ಎಂದಿದ್ದರು.
ಬಿಲ್‌ಗೇಟ್ಸ್ ಹಾಗೂ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನವು ಮೂರು ವರ್ಷಗಳ ಹಿಂದೆ ಮಲೇರಿಯಾ ಲಸಿಕೆಯ ಸಂಶೋಧನೆಗೆ ೫೦ ಮಿಲಿಯ ಡಾಲರ್‍ಸ್‌ಗಳನ್ನು ತೊಡಗಿಸಿದೆ. ಆದರೂ ಮಲೇರಿಯಾ ನಿವಾರಣೆಗೆ ಬೇರೇನೂ ಪ್ರಯತ್ನಗಳನ್ನು ಮಾಡದೇ WHO ಡಿಡಿಟಿಗೆ ಸಹಮತ ನೀಡುತ್ತಿರುವುದು ಖಂಡನೀಯ ಹಾಗೂ ಅನುಮಾನಾಸ್ಪದವಾಗಿದೆ. ಇನ್ನೂ ನಾವೆಷ್ಟು ವಿಷಮಯವಾಗಬೇಕು?  ತೀರ್ಮಾನ ಜನರದ್ದು.
Written by Poornaprajana Belur and Published by Kanaja

Thursday, January 5, 2012

French farmers will have to pay to use their own seeds


In the world of French farming, unrestricted and royalty-free use of seeds may soon be no more than a happy memory. For several decades seeds have been brought under the protection of plant variety certificates, which enshrine plant breeders' rights.
Resowing such seed was theoretically prohibited, but in practice it was largely tolerated in France. In future it will be strictly controlled, the ruling conservative UMP party having passed a bill to this effect in parliament last November. "Of the 5,000 or so cultivated plant varieties on sale, about 1,600 are protected by a certificate [in France]. The latter category account for 99% of the varieties grown by farmers," says Delphine Guey, of France's Inter-Professional Association for Seeds and Plants.
But until now half of all cereals were obtained from farm-saved seed, according to the National Co-ordination for the Defence of Farm-Saved Seed. In other words, illegally. The authorities seem determined to stop turning a blind eye. Agriculture minister Bruno Le Maire is categorical that such seed "can no longer be royalty-free, as is currently the case".
The recent bill transposes into French law a previously ignored 1994 European regulation on protection of plant varieties. As a result farm-saved seed, which was tolerated until now, is now legal, only provided "a fee is paid to certificate holders [seed companies] to sustain funding of research and efforts to improve genetic resources". Small farmers producing less than 92 tonnes of cereal are exempted.
Soft wheat is the onlytype on which duty has been levied in France since 2001. This "compulsory voluntary contribution" is paid to the federation of seed manufacturers. Farmers must pay €0.50 (66 cents) a tonne when they deliver their crop. This system will be extended to 21 species, the list still not finally settled, said Xavier Beulin, the head of France's main farmers' union (FNSEA).
So "for half the crop species – soy, fruit and vegetables – it is forbidden to use your own seeds, and the other half – cereals and fodder – you have to pay to sow", said Guy Kastler, the head of the Semences Paysannes network and a member of the Peasant Confederation.
Several groups of ecologists and small farmers have expressed concerns at seed manufacturers' increasing control over access to seed, due to property rights being extended to crops and the resulting seed. With the new tax, "even farmers who make no use of commercial seed will have to pay for what they use", said Kastler. He is afraid that the share of farm-saved seed will decline as it becomes more expensive and consequently less attractive to farmers.
With the tax and the ban on sowing their own seed, there is a growing incentive for farmers to buy, rather than produce, seed. This worsens concern about increasing dependence on seed manufacturers.
Beulin, on the other hand, maintains that there is good reason for everyone to contribute to research into crop species, because even farm-saved seed is generally derived from company-bred varieties in the first place. Drawing a parallel with legislation to protect the digital rights of creators of music and film, he suggested that "it is only right for [users of farm-saved seed] to pay their share of funding the creation of new varieties, from which they benefit". A further source of concern is the impact of the new rules on farming diversity. Certainly sowing the same variety – almost always the result of research – does not improve biodiversity, particularly as "for all the main crops, none of the varieties in use were handed down by our ancestors; they were all obtained by selection of new varieties", Beulin said.
Kastler said that replanting your own seeds could lead to variations in a species, thus favouring biodiversity. "New characteristics appear so the plant is better suited to the soil, climate and local conditions. This means there is less need for fertilisers and pesticides. Conversely seed companies adapt plants to suit fertilisers and pesticides, which are the same everywhere," he said. France's plant variety certificates are an alternative to patents on living things, as enforced by the United States. This intellectual property right is held by companies that have developed cultivated species through research, and consequently enjoy a monopoly over sales of the corresponding seed, until such time as it comes into the public domain. Some in the industry, including Kastler, are afraid of gradual slippage towards this patent-based regime, by limiting the right of farmers to use protected seed freely.
However, unlike plant variety certificates, patents place an absolute ban on the use of farm-saved seed, with or without the payment of fees, Guey points out. Plant variety certificates also allow plant breeders unrestricted use of a protected variety to exploit its genetic resources and select new ones. But though they may work on a gene belonging to a particular species they cannot patent it or wholly appropriate it. According to Guey this distinction has helped maintain a degree of diversity among French seed companies, and by extension gives farmers a larger choice of species. However, although France has not agreed to patents on living things, patenting of plant genes is increasingly frequent.


Published in Guardian paper

Wednesday, January 4, 2012

Globally Important Agricultural Heritage Systems (GIAHS)


FAO has officially recognized the Traditional Agricultural System of Koraput  as a Globally Important Agricultural Heritage System (GIAHS) site. This was officially declared on 3rd January 2012 at the Indian Science Congress organized by KIIT University in Bhubaneswar. This is an important recognition of our Tribal System of Agriculture and its conservation will only strengthen our fight against serious environmental challenges like climate change. 

 The official release added "The recognition of the Koraput Traditional Agricultural System as a GIAHS site will guarantee local and international efforts for the conservation of biodiversitysustainable use of its genetic resources, and the recognition of tribal peoples' contribution to biodiversity and knowledge systems, whilst increasing attention to their natural and cultural heritage."

What is Globally Important Agricultural Heritage Systems (GIAHS)



Worldwide, specific agricultural systems and landscapes have been created, shaped and maintained by generations of farmers and herders based on diverse natural resources, using locally adapted management practices. Building on local knowledge and experience, these ingenious agri-cultural systems reflect the evolution of humankind, the diversity of its knowledge, and its profound relationship with nature. These systems have resulted not only in outstanding landscapes, maintenance and adaptation of globally significant agricultural biodiversity, indigenous knowledge systems and resilient ecosystems, but, above all, in the sustained provision of multiple goods and services, food and livelihood security and quality of life.

In order to safeguard and support world's agri-cultural heritage systems in 2002 FAO started an initiative for the conservation and adaptive management of Globally Important Agricultural Heritage systems (GIAHS). The initiative aims to establish the basis for international recognition, dynamic conservation and adaptive management of Globally Important Agricultural Heritage Systems (GIAHS) and their agricultural biodiversity, knowledge systems, food and livelihood security and cultures throughout the world. (Source: FAO  Official Website: http://www.fao.org/nr/giahs/giahs-home/home-more/en/)

The Official Release of FAO on Koraput Region



"The Koraput region in the state of Orissa, India, has a rich assembly of unique floral and faunal diversity. The genetic repository of the region is of great significance in the global context. About 79 plant angiosperm species and one gymnosperm are endemic to the region. In addition, people, who belong to different tribal groups, have conserved and preserved a large number of land races of rice, millets, pulses and medicinal plants, using diverse traditional cultivation practices, which have been developed as an answer to the topographical and ecological diversity of the region. Koraput has been identified as an important centre of origin of rice. The changes in the traditional practices coupled with both, natural and anthropogenic pressures require immediate attention for conservation of these unique species and genotypes for perpetuity."

Thursday, December 29, 2011

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ


ಪುಟ್ಟ ಭೂಮಿಯಲ್ಲಿ ಕೈತೋಟ ಮಾಡಬಹುದು. ಮನೆಯ ಸುತ್ತಲಿನ ಜಾಗದಲ್ಲಿ ತರಕಾರಿ, ಹಣ್ಣು, ಮರಮುಟ್ಟು, ಔಷಧಿ ಸಸ್ಯಗಳನ್ನು ಬೆಳೆಯಬಹುದು. ಸ್ವಲ್ಪ ಬುದ್ಧಿವಂತಿಕೆ, ಕೌಶಲ್ಯ ಪ್ರದರ್ಶಿಸಿದರೆ ಅದನ್ನೇ ಲಾಭದಾಯಕ ಕೃಷಿಯಾಗಿ ಪರಿವರ್ತಿಸಿಕೊಳ್ಳಲು ಕೂಡ ಸಾಧ್ಯವಿದೆ. ಅದನ್ನು ಕಾರ್ಯರೂಪಕ್ಕೆ ತಂದು ಪ್ರತ್ಯಕ್ಷವಾಗಿ ತೋರಿಸಿ ಕೊಟ್ಟಿದ್ದಾರೆ ದಾಸಯ್ಯನದೊಡ್ಡಿಯ ಜಯಪ್ಪ.

ಮನೆಯ ಅಕ್ಕ-ಪಕ್ಕ ಅಲ್ಪಸ್ವಲ್ಪ ಜಮೀನು, ಹಿತ್ತಲು ಇರುವುದು ವಾಡಿಕೆ. ಆದರೆ ಎಲ್ಲರೂ ಆ ಹಿತ್ತಲಲ್ಲಿ ಕೃಷಿ ಮಾಡುವುದಿಲ್ಲ. ನೀರಿನ ಸಮಸ್ಯೆ, ಭದ್ರತೆಯ ಸಮಸ್ಯೆ... ಹೀಗೆ ಹಲವಾರು ಕಾರಣಗಳಿರಬಹುದು. ಆದರೆ ಇದನ್ನು ಎದುರಿಸಿ ಹಿತ್ತಲಲ್ಲಿ ಲಾಭದಾಯಕ ಕೃಷಿ ಮಾಡಿದ್ದಾರೆ ಅವರು.  

ಕನಕಪುರ ತಾಲ್ಲೂಕು ದೊಡ್ಡೂರಿನಿಂದ 22 ಕಿಮಿ ದೂರದ ಕರ್ನಾಟಕ ತಮಿಳುನಾಡು ಗಡಿಯ ತಳಿ ಎಂಬ ಗ್ರಾಮದಿಂದ ಸುಮಾರು ನಾಲ್ಕು ಕಿಲೊಮೀಟರ್ ಸಾಗಿದರೆ ಜಯಪ್ಪನವರ ಸಾಧನೆಯನ್ನು ನೋಡಬಹುದು. ಇದು ಭೌಗೋಳಿಕವಾಗಿ ತಮಿಳುನಾಡಿನಲ್ಲಿದ್ದರೂ ಇಲ್ಲಿನ ಜನರ ಮುಖ್ಯಭಾಷೆ ಕನ್ನಡ. ನಂತರ ತೆಲುಗು, ತಮಿಳು.

ಇಲ್ಲಿ ಕೇವಲ ಹದಿನೆಂಟು ಗುಂಟೆ (ಅರ್ಧ ಎಕರೆಗಿಂತ ಸ್ವಲ್ಪ ಕಡಿಮೆ) ಜಾಗದಲ್ಲಿ ಅದ್ಭುತ ತೋಟ ಮಾಡಿದ್ದಾರೆ. ಮಲೆನಾಡಿನ ಕರಿಮೆಣಸು, ಏಲಕ್ಕಿ, ಕಾಫಿ, ಬಯಲು ಸೀಮೆಯ ಸಜ್ಜೆ, ಹಲಸು ಸೇರಿದಂತೆ ಅರವಕ್ಕೂ ಹೆಚ್ಚು ವಿಧದ ಬೆಳೆಗಳನ್ನು ಹಿತ್ತಲಲ್ಲಿ ಕಾಣಬಹುದು.
 
ಒಂದು ತುದಿಯಲ್ಲಿ ನಿಂತು ನೋಡಿದರೆ ಇನ್ನೊಂದು ತುದಿ ಕಾಣುವುದಿಲ್ಲ. ಅಷ್ಟೊಂದು ದಟ್ಟ ಹಸಿರಿನಿಂದ ಅವರ ಹಿತ್ತಲು ಕಂಗೊಳಿಸುತ್ತದೆ. ಕಳೆದೊಂದು ದಶಕದಿಂದ ಸಾವಯವ ಪದ್ಧತಿಯನ್ನೇ ಗಟ್ಟಿಯಾಗಿ ಅನುಸರಿಸಿಕೊಂಡು ಬಂದಿದ್ದಾರೆ.

ಪ್ರತಿ ವರ್ಷ ನನಗೆ ಇದರಿಂದ 60 ರಿಂದ 70 ಸಾವಿರ ರೂಪಾಯಿ ಬರುತ್ತದೆ. ಈ ವರ್ಷ ಖರ್ಚು ಕಳೆದು 45 ಸಾವಿರ ರೂಪಾಯಿಯಷ್ಟು ಲಾಭ ಬಂದಿದೆ` ಎನ್ನುವಾಗ ಅವರ ಮುಖದಲ್ಲಿ ಹೆಮ್ಮೆ, ಖುಷಿ. ಈ ವರ್ಷ ನೀರಿನ ಕೊರತೆಯಿಂದ ಸ್ವಲ್ಪ ಸಮಸ್ಯೆ ಆಯಿತು ಎನ್ನುತ್ತಾರೆ.

ಆದಾಯದ ಮೂಲಗಳು...
ಅವರ ಹಿತ್ತಲಲ್ಲಿ ಕರಿ ಮೆಣಸು ಬಳ್ಳಿ ಸಿಲ್ವರ್ ಗಿಡದ ಮೇಲೆ ಸೊಂಪಾಗಿ ಬೆಳೆದಿದೆ. ಹತ್ತು ಬಳ್ಳಿಗಳು ಕಾಯಿ ಬಿಟ್ಟಿದ್ದವು. ಐದು ವರ್ಷದ ಹಿಂದೆ ಬಳ್ಳಿಯನ್ನು ನಾಟಿ ಮಾಡಿದ್ದರು. ಮನೆಯಲ್ಲೆೀ ಸಿಗುವ ಕೊಟ್ಟಿಗೆ ಗೊಬ್ಬರ ಹಾಕುತ್ತ ಬಂದಿದ್ದಾರೆ. ಈ ವರ್ಷ ಒಂದು ಬಳ್ಳಿಯಿಂದ ಸರಾಸರಿ ಒಂದು ಕಿಲೊದಂತೆ ಹತ್ತು ಕಿಲೊ ಇಳುವರಿ ಬಂದಿದೆ. ಅದರಿಂದ ಎರಡು ಸಾವಿರ ರೂ ಗಳಿಕೆಯಾಗಿದೆ.

ಅದೇ ಜಾಗದಲ್ಲಿ ಕಾಫಿ ಸಸಿಗಳ ನಡುವೆ 15 ಏಲಕ್ಕಿ ಹಾಕಿದ್ದು ಭರ್ಜರಿ ಬೆಳೆದಿದೆ. ಈ ವರ್ಷ 10 ಏಲಕ್ಕಿ ಗಿಡದಿಂದ ಐದು ಕಿಲೊ ಏಲಕ್ಕಿ  ಕೊಯ್ಲು ಮಾಡಿದ್ದಾರೆ. ಆದರೆ ಇನ್ನೂ ಮಾರಿಲ್ಲ.

ಅದೇ ತಂಡು ಭೂಮಿಯಲ್ಲಿ ಎರಡು ಹಲಸಿನ ಮರಗಳಿವೆ. ಅವರೇ ಹೇಳಿದ ಪ್ರಕಾರ ಒಂದು ಗಿಡದ ಹಣ್ಣು ಬಲು ರುಚಿ. ಮುಂಗಡವಾಗಿ ಹಣ ಕೊಟ್ಟು ಈ ಗಿಡದ ಹಣ್ಣುಗಳನ್ನು ಖರೀದಿ ಮಾಡುತ್ತಾರಂತೆ. ಆ ತಳಿಯನ್ನು ಸಹಜ ಸಮೃದ್ಧ ಸಂಸ್ಥೆಯ ಜಿ. ಕೃಷ್ಣಪ್ರಸಾದ ಕೊಟ್ಟಿದ್ದರಂತೆ. ಹಲಸಿನ ತೊಳೆ ತುಸು ಹಳದಿ ಬಣ್ಣದಲ್ಲಿದ್ದು, ಆಕಾರದಲ್ಲಿ ದೊಡ್ಡದಾಗಿದೆ.

ತಿನ್ನಲು ತುಂಬಾ ಹದವಿರುವ ತಳಿ. ಸುಮಾರು 60 ರಿಂದ 70 ಹಣ್ಣುಗಳು ಹಲಸಿನ ಮರದಿಂದ ಬರುತ್ತವೆ. ಈ ಸಲ ಮೂರು ಸಾವಿರ ರೂ ಆದಾಯ ಸಿಕ್ಕಿದೆ.
ಅದೇ ಹಿತ್ತಲಲ್ಲಿ ಎರಡು ಎರೆಗೊಬ್ಬರ ತೊಟ್ಟಿಯನ್ನು ಕಟ್ಟಿದ್ದಾರೆ.
 
ಅದರಿಂದ ಎರೆಹುಳು ಹಾಗು ಎರೆಗೊಬ್ಬರವನ್ನು ಮಾರುತ್ತಾರೆ. ದಿನಕ್ಕೆ ಒಂದು ತಾಸು ಸಮಯವನ್ನು ಎರೆಗೊಬ್ಬರ ಉತ್ಪಾದನೆ ಕೆಲಸಕ್ಕಾಗಿ ಮೀಸಲಿಟ್ಟಿದ್ದಾರೆ. 

ಅವರ ಉಳಿದ ಜಮೀನಿನಲ್ಲಿ ಸಿಗುವ ಕೃಷಿ ತ್ಯಾಜ್ಯ ಹಾಗು ಸಗಣಿಯನ್ನು ಬಳಸಿಕೊಂಡು ಎರಗೊಬ್ಬರ ಉತ್ಪಾದಿಸುತ್ತಾರೆ. ಒಂದು ಕಿಲೊ ಎರೆಹುಳುವಿಗೆ 300 ರೂ ಹಾಗು ಒಂದು ಕಿಲೊ ಎರೆಗೊಬ್ಬರಕ್ಕೆ 400 ರೂಪಾಯಿ ದರ ಇದೆ. ಇದೊಂದರಿಂದಲೇ 20 ಸಾವಿರ ರೂಪಾಯಿ ಸಂಪಾದಿಸಿದ್ದಾರೆ.

ಮನೆ ಮುಂದೆ ಐದು ವರ್ಷಗಳ ಹಿಂದೆ ಬಾಳೆ ಹಾಕಲಾಗಿತ್ತು. ಈಗಲೂ ಅವರು ಸುಮಾರು ಮೂರು ತಿಂಗಳಿಗೊಮ್ಮೆ ಒಂದು ಬಾಳೆಗೊನೆ ಕೊಯ್ಲು ಮಾಡುತ್ತಾರೆ. ಅದಕ್ಕೆ ಗೊಬರ್ ಗ್ಯಾಸ್ ಸ್ಲರಿ ಹಾಕುತ್ತಾರೆ. ಹೀಗಾಗಿ ತುಂಬಾ ಚೆನ್ನಾಗಿ ಬೆಳೆದಿದೆ. ಬಾಳೆಯಿಂದಲೇ ಒಂದು ಸಾವಿರ ರೂ ಸಿಕ್ಕಿದೆ.

ಇವುಗಳ ಜೊತೆಗೆ ಮನೆಗೆ ಬೇಕಾಗುವಷ್ಟು ತೆಂಗು, ಕಾಫಿ, ಅಡಿಕೆ, ವಿವಿಧ ತರಕಾರಿಗಳು, ಸೊಪ್ಪು, ಗಡ್ಡೆ, ಹೂವುಗಳು, ವೀಳ್ಯದಲೆ, ಜೇನು, ಹಣ್ಣುಗಳು, ಅರಿಸಿಣ, ಶುಂಠಿ, ಔಷಧಿ ಸಸ್ಯ ಹಾಗು ಹಸುಗಳಿಗೆ ಬೇಕಾದ ಹುಲ್ಲು ಬೆಳೆದಿದ್ದಾರೆ.

ಉಳುಮೆ ಕಾಣದ ಹಿತ್ತಲು...
ಕಳೆದ ಹತ್ತು ವರ್ಷಗಳಿಂದ ಹಿತ್ತಲನ್ನು ಉಳುಮೆ ಮಾಡಿಲ್ಲ. ಗಿಡ ನಾಟಿ ಮಾಡುವಾಗ ಮಾತ್ರ ಭೂಮಿಯನ್ನು ಉಳುಮೆ ಮಾಡಿದ್ದರು. ಆದರೂ ಭೂಮಿ ಮಾತ್ರ ತುಂಬಾ ಹದವಿದೆ. ಬರಿಗೈಯಲ್ಲೇ ಒಂದು ಅಡಿಯಷ್ಟು ಅಗಿಯಬಹುದು. ಪ್ರತಿ ವರ್ಷ ಕೃಷಿ ತ್ಯಾಜ್ಯವನ್ನು ಭೂಮಿಗೆ ಸೇರಿಸುತ್ತಾ ಬಂದಿದ್ದಾರೆ. ಹಾಗಾಗಿಯೇ ಭೂಮಿ ಮೃದುವಾಗಿದೆ. 

`ಮೊದಮೊದಲು ಭೂಮಿಯ ಫಲವತ್ತತೆ ಸರಿಯಾಗಿರಲಿಲ್ಲ. ಹಾಗಾಗಿ ಆರಂಭದಲ್ಲಿ ಸಗಣಿ ಗೊಬ್ಬರ ಬಳಸುತ್ತಾ ಬಂದೆ. 3-4 ವರ್ಷ ಒಣಗಿದ ಹಾಗು ಹಸಿ ಕೃಷಿ ತ್ಯಾಜ್ಯವನ್ನು ಸೇರಿಸಿದೆ. ಈಗ ಭೂಮಿಯ ಫಲವತ್ತತೆಯ ಜೊತೆಗೆ ನೀರು ಹಿಡಿದುಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದೆ. ಉಳುಮೆ ಹಾಗು ಗೊಬ್ಬರದ ಖರ್ಚೂ ಇಲ್ಲ` ಎನ್ನುತ್ತಾರೆ.

ಬಹುಬೆಳೆ...
ತದ್ರೂಪಿ ಕಾಡನ್ನು ಕೃಷಿ ಜಮೀನಿನಲ್ಲಿ ಬೆಳೆಸುವುದನ್ನು ನೋಡಿದ್ದೇವೆ. ಆದರೆ ಹಿತ್ತಲಲ್ಲಿ ಕಾಡು ಬೆಳೆಸಿರುವ ಜಯಪ್ಪನವರ ಸಾಧನೆ ಅಮೋಘ. ಕಾಫಿ, ಹಲಸು, ತೆಂಗು, ಅಡಿಕೆ, ಬಾಳೆ, ನಿಂಬೆ, ನಿಂಬೆ ಹುಲ್ಲು, ಏಲಕ್ಕಿ, ಅರಿಸಿಣ, ನೇರಳೆ, ಲೋಳೆಸರ, ನಾಗದಾಳಿ, ಮೆಣಸು, ವೆನಿಲಾ, ಕಾಡುಗೆಣಸು, ಸಿಹಿಗೆಣಸು, ಮರಗೆಣಸು, ನುಗ್ಗೆ, ಇಂಡಿಗೊ, ಕರಿಬೇವು, ಕಾಡು ಕೊತ್ತಂಬರಿ, ಸೀಮೆ ಬದನೆ, ವೆಲ್ವೆಟ್ ಬೀನ್ಸ್, ಗುಲಾಬಿ, ಸೇವಂತಿಗೆ, ಲಾವಂಚ, ನಿಂಬೆ, ಸೀಸಂ, ತೇಗ, ಹುಣಸೆ, ಸಿಲ್ವರ್, ಗ್ಲಿರಿಸಿಡಿಯಾ... ಅಬ್ಬಬ್ಬಾ ಎಂದು ಹುಬ್ಬೇರಿಸಬೇಡಿ. ಇಂಥ ಇನ್ನೂ ಹತ್ತಾರು ಸಸ್ಯ, ಮರಗಳು ಇಲ್ಲಿವೆ. ಬೇರೆ ಕಡೆ ಹೋದಾಗಲೆಲ್ಲಾ ಸಸಿ- ಬೀಜ ತಂದು ನಾಟಿ ಮಾಡುತ್ತಾರೆ.

ಕಾಳುಮೆಣಸು ಮುಖ್ಯ ಬೆಳೆಯಾದರೂ ಜೊತೆಗೆ ಅನೇಕ ಗಿಡ-ಮರಗಳು, ಬೆಳೆಗಳು, ಅಲಂಕಾರಿಕ ಮತ್ತು ಔಷಧಿ ಸಸ್ಯಗಳು, ತರಕಾರಿಗಳು, ಬಳ್ಳಿಗಳನ್ನು ಬೆಳೆಯುತ್ತಿದ್ದೇನೆ. ಅನುಭವದ ಪ್ರಕಾರ ಒಂದಕ್ಕಿಂತ ಹೆಚ್ಚಿನ ಬೆಳೆ ಬೆಳೆದರೆ ಅಧಿಕ ಲಾಭ ಕಾಣಬಹುದು. 

ಒಂದು ಬೆಳೆ ಕೈಕೊಟ್ಟರೆ ಮತ್ತೊಂದು ಬೆಳೆ ಕೈ ಹಿಡಿಯುತ್ತೆ. ಪರೋಕ್ಷವಾಗಿ ರೋಗ ಮತ್ತು ಪೀಡೆಯನ್ನು ನಿಯಂತ್ರಿಸಬಹುದು. ಮನೆಗೆ ಬೇಕಾದ ಎಲ್ಲಾ ತರಕಾರಿಗಳನ್ನು ಜಮೀನಿನಲ್ಲೆ ಬೆಳೆದುಕೊಳ್ಳಬಹುದು. ಮಿಶ್ರಬೆಳೆ ಪದ್ಧತಿ ಆರ್ಥಿಕ ಸಬಲತೆಗೆ ಪೂರಕವಾಗುತ್ತದೆ. ಹಿತ್ತಲಲ್ಲಿ ಹೆಚ್ಚು ಹೆಚ್ಚು ಬೆಳೆ ಬೆಳೆದರೆ ಊಟಕ್ಕೆ ಎನೂ ಕೊರತೆಯಿಲ್ಲ` ಎನ್ನುತ್ತಾರೆ.

ನಿಸರ್ಗದತ್ತ ಹೆಜ್ಜೆ...
`ಭೂತಾಯಿಯನ್ನು ಆಶ್ರಯಿಸಿದ್ದರಿಂದ ಬದುಕು ಸರಳವೆನಿಸುತ್ತಿದೆ. ನಾನು ಮತ್ತು ನನ್ನ ಕುಟಂಬ ನಿಸರ್ಗಕ್ಕೆ ಹತ್ತಿರವಾಗಿದ್ದೇವೆ. ಇದರಿಂದ ಕೆಟ್ಟ ಗುಣಗಳು ಮೂಲೆ ಗುಂಪಾಗುತ್ತವೆ. ಕೃಷಿಯು ಜೀವನದ ಸಾರವನ್ನು ಹೇಳಿಕೊಟ್ಟಿದೆ. ಪರಿಸರಕ್ಕೆ ಹತ್ತಿರವಾಗಿದ್ದಕ್ಕೆ ವಿಷಮುಕ್ತ ಆಹಾರ ಸಿಗುತ್ತದೆ. ಆಸ್ಪತ್ರೆ ಖರ್ಚು ಸಹ ಕಡಿಮೆಯಾಗಿದೆ` ಎನ್ನುವುದು ಅವರ ಸ್ವಾನುಭವದ ಮಾತು. 

Saturday, December 24, 2011

Huvina Hadagali and other places

Important places of Huvina Hadagali 

೧. ಹೊಳಲು : ಈ ಗ್ರಾಮವು ಹೂವಿನ ಹಡಗಲಿ ಪಟ್ಟಣದಿಂದ ಪಶ್ಚಿಮ ದಿಕ್ಕಿಗೆ ೩೬ ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ೧. ಶ್ರೀ ವೀರಭದ್ರ ದೇವಾಲಯ ೨. ಶ್ರೀ ಗೌರೇಶ್ವರ ದೇವಾಲಯ ೩. ಶ್ರೀ ಅನಂತ ಪದ್ಮನಾಭ ದೇವಾಲಯ ೪. ಶ್ರೀ ಕಾಳಿಕಾ ದೇವಿ ದೇವಾಲಯ ೫. ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ೬. ಶ್ರೀ ತ್ರಿಪುರಾಂತಕ ದೇವಾಲಯಗಳು ಇವೆ. ಇಲ್ಲಿನ ಶ್ರೀ ಅನಂತ ಪದ್ಮನಾಭ ಮೂರ್ತಿಯನ್ನು ವಿಜಯನಗರದ ಅರಸರು ನಿರ್ಮಿಸಿದ್ದು ಕಾರಣಾಂತರಗಳಿಂದ ಈ ದೇವಾಲಯವನ್ನು ಇಲ್ಲಿ ನಿರ್ಮಿಸಲಾಗಿದೆ ಎನ್ನುವುದು ಇಲ್ಲಿಯ ಜನರ ಹೇಳಿಕೆಯಾಗಿದೆ. ಈ ಗ್ರಾಮವು ಪ್ರಾಚೀನ ಕಾಲದ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿದ್ದು ನಂತರ ಹೊಯ್ಸಳ, ವಿಜಯನಗರದ ಅರಸರು ಹರಪನಹಳ್ಳಿ ಪಾಳೇಗಾರರ ಆಳ್ವಿಕೆಯಲ್ಲಿತ್ತು. ಇದು ಮೊದಲು ಬ್ರಾಹ್ಮಣರಿಗೆ ಕೊಟ್ಟ ಒಂದು ಆಗ್ರಹಾರವಾಗಿತ್ತು. ಈಗ ಒಂದು ಪಟ್ಟಣವಾಗಿ ಬೆಳೆದಿದೆ.
೨. ಮೈಲಾರ : (ಪುಟ ಸಂಖ್ಯೆ : ೧೨೧) (ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ)
ಮೈಲಾರ ಗ್ರಾಮವು ಹೂವಿನ ಹಡಗಲಿ ಪಟ್ಟಣದಿಂದ ಸುಮಾರು ೩೩ ಕಿ.ಮೀ. ದೂರದಲ್ಲಿದೆ. ಈ ಗ್ರಾಮಕ್ಕೆ ಸುಮಾರು ೨ ಕಿ.ಮೀ. ದೂರದಲ್ಲಿ ತುಂಗಭದ್ರ ನದಿ ಹರಿಯುತ್ತದೆ. ಈ ಗ್ರಾಮಕ್ಕೆ ಇನ್ನೂ ಆರು ಗ್ರಾಮಗಳು ಪ್ರಾಚೀನ ಕಾಲದಲ್ಲಿ ಸೇರಿದ್ದವು. ಆದುದರಿಂದ ಈ ಗ್ರಾಮದ ದೇವರಾದ ಶ್ರೀ ಮೈಲಾರ ಲಿಂಗ ಸ್ವಾಮಿ ದೇವರಿಗೆ ಏಳುಕೋಟಿ ಮೈಲಾರ ಲಿಂಗಸ್ವಾಮಿ ಎಂದು ಹೆಸರು. ಏಕೆಂದರೆ ಈ ಏಳು ಗ್ರಾಮಗಳಿದೆ ಕೋಟೆಗಳಿದ್ದವು. ಈ ಸ್ಥಳಕ್ಕೆ ಪುರಾಣಗಳಲ್ಲಿ ‘ಮೈಲಾರಿ’ ಎಂದು ಕರೆದಿರುವುದು. ಮೈಲಾರಿ ಎಂದರೆ ತ್ರಿಮೂರ್ತಿಗಳ ಸಂಗಮವೆಂದು ಅರ್ಥ. ಮೈಲಾರ ಅಡು ನುಡಿಯಲ್ಲಿ ಅಕ್ಷರ ಬದಲಾವಣೆಯಿಂದ ಮೈಲಾರವಾಗಿರುವುದು. ಅಮಿರರನ್ನು ಸಂಹರಿಸಿದ ಮರುದಿನ ಪರಮಾತ್ಮನು ಬಿಲ್ಲನ್ನು ಅರ್ಧ ಭಾಗಕ್ಕೆ ಏರಿ ರೈತರಿಗೆ ಬೇಕಾದ ಮಳೆ, ಬೆಳೆ ಭವಿಷ್ಯವನ್ನು ನುಡಿದನು. ಈ ಕಾರ್ಯಕ್ರಮಕ್ಕೆ ಕಾರ್ಣಿಕೋತ್ಸವ ಎಂದು ಕರೆಯುವರು. ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ ಜಾತ್ರೆ ಜರುಗುವುದು. ಈ ದಿನದಲ್ಲಿ ಕೂಡ ಕುರುಬ ಜನಾಂಗಕ್ಕೆ ಸೇರಿದ ಬೀರಪ್ಪನ ಭಿಲ್ಲನ್ನು ಏರಿ ಕಾಣಿಕವನ್ನು ನುಡಿಯುವರು. ಈ ಜಾತ್ರೆಗೆ ಜನರ ಸಾಗರವೇ ಹರಿದುಬರುತ್ತದೆ.

ಮೊದಲಘಟ್ಟ : (ಪುಟ ಸಂಖ್ಯೆ : ೧೧೬) (ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ)
ಮೊದಲಘಟ್ಟ ಗ್ರಾಮ ಹೂವಿನಹಡಗಲಿ ಪಟ್ಟಣದಿಂದ ಸುಮಾರು ೮ ಕಿ.ಮೀ. ದೂರದಲ್ಲಿ ತುಂಗಭದ್ರ ನದಿ ತೀರದಲ್ಲಿರುವ ಒಂದು ಚಿಕ್ಕ ಗ್ರಾಮವಾಗಿದೆ.  ಈ ತುಂಗಭದ್ರ ನದಿಗೆ ವಿಜಯನಗರದ ಅರಸರು ಮೊದಲು ಆಣೆಕಟ್ಟನ್ನು ನಿರ್ಮಾಣ ಮಾಡಲು ತೀರ್ಮಾನಿಸಿ ಈ ನದಿಗೆ ಮೊದಲು ಒಡ್ಡನ್ನು ಕಟ್ಟಿದರು. ನಂತರ ಕಾರಣಾಂತರಗಳಿಂದ ಈ ಆಣೆಕಟ್ಟೆ ಈಗಿನ ಹೊಸಪೇಟೆ ಪಟ್ಟಣಕ್ಕೆ ೫ ಕಿ.ಮೀ.ದೂರದಲ್ಲಿ ತುಂಗಭದ್ರ ಆಣೆಕಟ್ಟಾಗಿ ನಿರ್ಮಾಣವಾಯಿತು.  ಆದರೆ ವಿಜಯನಗರ ಅರಸರು ನಿರ್ಮಿಸಿದ ಒಡ್ಡಿನ ಅವಶೇಷಗಳು ಈಗಲೂ ಉಳಿದುಕೊಂಡಿದ್ದು ಮೊದಲನೇ ಆಣೇಕಟ್ಟು ಇದು ಆಗಿರುವುದರಿಂದ ಇದಕ್ಕೆ ಮೊದಲ ಘಟ್ಟ ಎಂಬ ಹೆಸರು ಬಂದಿತು. ಈ ನದಿ ತೀರದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನವಿದ್ದು ಪ್ರತಿವರ್ಷ ಡಿಸೆಂಬರ್ / ಜನವರಿ ತಿಂಗಳಲ್ಲಿ ಜಾತ್ರೆ ನಡೆಯುತ್ತದೆ. ಇದು ಒಂದು ಪ್ರಸಿದ್ಧ ತಾಣವಾಗಿ ಬೆಳೆದಿದೆ.

. ಕುರುವತಿ : (ಪುಟ ಸಂಖ್ಯೆ : ೧೬೯) (ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ)
ಕುರುವತ್ತಿ ಗ್ರಾಮ ಹೂವಿನ ಹಡಗಲಿ ಪಟ್ಟಣದಿಂದ ಸುಮಾರು ೩೬ ಕಿ.ಮೀ. ದೂರದಲ್ಲಿದೆ. ಈ ಗ್ರಾಮವು ತುಂಗಭದ್ರ ನದಿ ತೀರದಲ್ಲಿದೆ. ಈ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನವಿದೆ. ಈ ದೇವಸ್ಥಾನವನ್ನು ಚಾಲುಕ್ಯರ ಅಹವಮಲ್ಲದೇವನು ನಿರ್ಮಿಸಿದನು. ಈ ದೇವಾಲಯ ಕಪ್ಪುಶಿಲೆಯಿಂದ ಕೂಡಿದೆ. ಈ ದೇವಸ್ಥಾನದ ಭಿತ್ತಿ ಚಿತ್ರಗಳು ಬಲು ಸುಂದರವಾಗಿರುವುವು. ಈ ದೇವಸ್ಥಾನವನ್ನು ಚಾಲುಕ್ಯರು ನಿರ್ಮಿಸಿದರು. ಹೊಯ್ಸಳರು ಈ ದೇವಸ್ಥಾನಕ್ಕೆ ಹೊಸ ಹೊಸ ಭಾಗಗಳನ್ನು ಸೇರಿಸಿಕೊಂಡು ಚಾಲುಕ್ಯ, ಹೊಯ್ಸಳರಿಗೆ ಕೊಂಡಿಯಾಗಿದೆ. ಈ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ದಕ್ಷಿಣದ ವಾರಣಾಸಿಯೆಂದು ಪ್ರಸಿದ್ದಿ ಪಡೆದಿತ್ತು. ಇಲ್ಲಿ ಸೋಮೇಶ್ವರನ ದರ್ಶನವಾದ್ದರಿಂದ ಇದು ಒಂದು ಕುರುಹು ಆಯಿತು. ಆದ್ದರಿಂದ ಕುರುಹಿನ + ವರತಿ, ಕುರುವತ್ತಿ ಎಂಬ ಹೆಸರು ಬಂದಿತು. ಪ್ರತಿವರ್ಷ ಫೆಬ್ರವರಿ ಮತ್ತು ಮಾರ್ಚಿ ತಿಂಗಳಲ್ಲಿ ಇಲ್ಲಿ ರಥೋತ್ಸವ ಜರುಗುತ್ತದೆ. ಇದಕ್ಕೆ ಬಸವಣ್ಣ ಜಾತ್ರೆಯೆಂದು ಕರೆಯುವರು. ರೈತರು ತಮ್ಮ ಎತ್ತುಗಳಿಗೆ ಕುರುವತ್ತಿ ಮತ್ತು ಮಹದೇವರೆಂದು ಹೆಸರಿಟ್ಟುಕೊಳ್ಳುವರು.

ಕುಮಾರನಹಳ್ಳಿ ತಾಂಡ :

ಬೆಟ್ಟದ ಮಲ್ಲೇಶ್ವರ ದೇವಸ್ಥಾನ
ಕುಮಾರನಹಳ್ಳಿ ತಾಂಡ ಹೂವಿನಹಡಗಳಿ ಪಟ್ಟಣದಿಂದ ಸುಮಾರು ೧೩ ಕಿ.ಮೀ. ದೂರದಲ್ಲಿದೆ. ಹೂವಿನ ಹಡಗಲಿಯಿಂದ ಹರಪನಹಳ್ಳಿಗೆ ಹೋಗುವ ದಾರಿಯಲ್ಲಿ ಬರುತ್ತದೆ. ಈ ತಾಂಡದ ಬೆಟ್ಟದ ಪ್ರದೇಶದಲ್ಲಿ ಇದ್ದು ಇಲ್ಲಿ ಹೆಚ್ಚಿನ ಜನ ಲಂಬಾಣಿ ಜನಾಂಗದವರು ವಾಸಮಾಡುತ್ತಿದ್ದಾರೆ. ಇಲ್ಲಿರುವ ಬೆಟ್ಟದ ಮೇಲೆ ಶ್ರೀ ಮಲ್ಲೇಶ್ವರ ದೇವಸ್ಥಾನವಿದ್ದು ಇದು ಬೆಟ್ಟದ ಮಲ್ಲಪ್ಪ ಎಂದು ಹೆಸರು ಪಡೆದಿದೆ. ಇದು ನೋಡಲು ಕಣ್ಣಿಗೆ ಹಬ್ಬವೇಸರಿ. ಇದು ಪ್ರಕೃತಿ ಮಡಿಲಲ್ಲಿದ್ದು ಎಲ್ಲರನ್ನೂ ಕೈಬೀಸಿ ಕರೆಯುವ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.
ಇಲ್ಲಿಂದ ಸುಮಾರು ೩ ಕಿ.ಮೀ ದೂರದಲ್ಲಿ ಮಸಲವಾಡ ಎಂಬ ಗ್ರಾಮವಿದ್ದು ಇಲ್ಲಿ ಶ್ರೀ ವೀರಣ್ಣ ದೇವಸ್ಥಾನವಿದೆ. ಇದು ಐತಿಹಾಸಿಕ ಸ್ಥಳವಾಗಿದ್ದು ಇಲ್ಲಿ ಕೆಲವು ಶಿಲಾ ಶಾಸನಗಳು ಇವೆ. ಇವುಗಳ ರಕ್ಷಣೆಗಾಗಿ ಭಾರತೀಯ ಪುರಾತತ್ವ ಇಲಾಖೆ ಕಾಯೋನ್ಮುಖವಾಗಿದೆ.
ಹಿರೇ ಹಡಗಲಿ : (ಪುಟ ಸಂಖ್ಯೆ : ೧೭೭) (ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ)
ಹಿರೇ ಹಡಗಳಿ ಗ್ರಾಮವು ಹೂವಿನ ಹಡಗಲಿ ಪಟ್ಟಣದಿಂದ ಸುಮಾರು ೧೭ ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ಎರಡು ಪ್ರಾಚೀನ ಕಾಲದ ದೇವಾಲಯಗಳು ಇವೆ. ಅವು ೧. ಶ್ರೀ ಭೀಮೇಶ್ವರ ದೇವಸ್ಥಾನ ಮತ್ತು ೨. ಶ್ರೀ ಕಲ್ಲೇಶ್ವರ ದೇವಸ್ಥಾನ. ಇವುಗಳಲ್ಲಿ ಒಂದು ಹೊರವಲಯದಲ್ಲಿದೆ. ಶ್ರೀ ಭೀಮೇಶ್ವರ ದೇವಾಲಯ ಗಡಿಯಲ್ಲಿರುವ ಶಿಲಾಶಾಸನವು ಚಾಲುಕ್ಯರ ಅರಸನಾದ ಶ್ರೀ ತ್ರೈಲೋಕ್ಯಮಲ್ಲದೇವನ ವಂಶಾವಳಿ ಕುರಿತು ಸಂಪೂರ್ಣ ಮಾಹಿತಿ ನೀಡುತ್ತದೆ.
ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನವು ಕೂಡ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿದೆ. ನಂತರ ಹೊಯ್ಸಳರ ಕಾಲದಲ್ಲಿ ಈ ದೇವಸ್ಥಾನ ಅಭಿವೃದ್ಧಿ ಹೊಂದಿದ್ದು ಇಲ್ಲಿನ ವಾಸ್ತುಶಿಲ್ಪ ಚೆನ್ನಾಗಿದೆ. ಇಲ್ಲಿನ ಈ ರಾಷ್ಟ್ರೀಯ ಸ್ಮಾರಕಗಳ ರಕ್ಷಣೆಗಾಗಿ ಭಾರತ ಪುರಾತತ್ವ ಇಲಾಖೆಯು ಸಿಬ್ಬಂದಿಯನ್ನು ನೇಮಿಸಿದ್ದು ಮುಂದಿನ ಪೀಳಿಗೆಗೆ ಕಾದಿರಿಸಲು ಪಣ ತೊಟ್ಟಿದೆ.

ಹೂವಿನ ಹಡಗಲಿ : (ಪುಟ ಸಂಖ್ಯೆ : ೧೭೯) (ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ)
ಹೂವಿನ ಹಡಗಲಿ ಪಟ್ಟಣ ಬಳ್ಳಾರಿ ಜಿಲ್ಲೆಯಲ್ಲಿ ಒಂದು ತಾಲೂಕು ಕೇಂದ್ರವಾಗಿದ್ದು ಇದು ಶೈಕ್ಷಣಿಕವಾಗಿ ಮುಂದುವರೆದ ತಾಲೂಕಾಗಿದೆ. ಇಲ್ಲಿ ಮೂರು ಐತಿಹಾಸಿಕ ದೇವಾಲಯಗಳು ಇವೆ.
೧. ಶ್ರೀ ಕಲ್ಲೇಶ್ವರ ದೇವಾಲಯ
೨. ಶ್ರೀ ಕೇಶವ ಸ್ವಾಮಿ ದೇವಾಲಯ
೩. ಶ್ರೀ ಶಶಿಧರ ದೇವಾಲಯ.
ಈ ದೇವಾಲಯಗಳು ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿವೆ. ಶಶಿಧರನ ಗುಡಿಯಲ್ಲಿ ಈಶ್ವರ, ಸೂರ್ಯನಾರಾಯಣ ಮತ್ತು ಬಾಲಕೃಷ್ಣ ಮೂರ್ತಿಗಳು ಇವೆ. ಶ್ರೀ ಕಲ್ಲೇಶ್ವರ ಮತ್ತು ಕೇಶವ ದೇಗುಲಗಳು ಸುಂದರವಾಗಿವೆ. ಇಲ್ಲಿನ ಶ್ರೀ ಯೋಗನರಸಿಂಹ ಸ್ವಾಮಿ ಮೂರ್ತಿಯು ಕಪ್ಪು ಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಇಲ್ಲಿ ಒಂದು ಬಾಲವನ ಇದ್ದು ಮಕ್ಕಳಿಗೆ ಮನೋರಂಜನೆ ನೀಡುತ್ತದೆ.
ಹೊಳಗುಂದಿ : ಹೊಳಗುಂದಿ ಗ್ರಾಮ ಹೂವಿನ ಹಡಗಲಿ ತಾಲೂಕಿಗೆ ಸೇರಿದೆ. ಈ ಗ್ರಾಮವು ಹಡಗಲಿ ಪಟ್ಟಣದಿಂದ ಹೊಸಪೇಟೆ ಪಟ್ಟಣಕ್ಕೆ ಹೋಗುವ ದಾರಿಯಲ್ಲಿ ೧೦ ಕಿ.ಮೀ. ದೂರದಲ್ಲಿದೆ. ಈ ಗ್ರಾಮದ ವಾಯುವ್ಯ ದಿಕ್ಕಿನಲ್ಲಿ ಈ ಗ್ರಾಮಕ್ಕೆ ಹೊಂದಿಕೊಂಡು ಒಂದು ಪರ್ವತವಿದೆ. ಈ ಪರ್ವತದ ಬದಿಯಲ್ಲಿ ಒಂದು ನಂದಿ ವಿಗ್ರಹವಿರುವುದು. ಪರ್ವತದ ಮೇಲೆ ಶಿದ್ದೇಶ್ವರ ದೇವರ ದೇಗುಲವಿರುವುದು. ಈ ಗ್ರಾಮದಲ್ಲಿ ಪ್ರಾಚೀನ ಕಾಲದ ಕಲ್ಲೇಶ್ವರ, ವೀರಭದ್ರ, ಭಿಲ್ಲೇಶ್ವರ, ಬಾಳೇಶ್ವರ ದೇಗುಲಗಳಿವೆ. ಈ ದೇವಸ್ಥಾನಗಳು ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿವೆ. ಈ ದೇವಸ್ಥಾನವನ್ನು ಚಾವುಂಡರಸನು ನಿರ್ಮಿಸಿದ ಬಗ್ಗೆ ಶಿಲಾಶಸನದಲ್ಲಿದೆ. ಶಾಸನದಲ್ಲಿ ಈ ಗ್ರಾಮಕ್ಕೆ ಪೊಳಲ್ಗುಂದೆ ಎಂದು ಕರೆಯಲಾಗಿದೆ. ಪೊಳಲ್ ಎಂದರೆ ಪಟ್ಟ್ಟಣ ಗೊಂದೆ ಎಂದರೆ ನಂದಿ ಎಂದು ಹೇಳಬಹುದು. ಆದುದರಿಂದ ಈ ಗ್ರಾಮಕ್ಕೆ ಬಸವಪಟ್ಟಣ ಎಂದು ಕರೆಯಬಹುದು.
ಮಾಗಳ : ಮಾಗಳ ಗ್ರಾಮವು ಹೂವಿನ ಹಡಗಲಿ ಪಟ್ಟಣದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿದೆ. ಮಾಗಳ ಗ್ರಾಮದ ಹತ್ತಿರ ಶ್ರೀ ರಂಗಾಪುರ ನರಸಿಂಹಸ್ವಾಮಿ ಗುಡಿ ಚಾಲುಕ್ಯ ಅರಸ ತ್ರೈಲೋಕ್ಯ ಮಲ್ಲ ದೇವನ ಕಾಲದಲ್ಲಿ ಶ್ರೀ ನರಸಿಂಹದೇವರಿಗೆ ಮತ್ತು ಗಣಪತಿ ದೇವರಿಗೆ ಸೇವಾ ಕಾರ್ಯಕ್ಕಾಗಿ ಕೆಲ ಭೂಮಿಯನ್ನು ದತ್ತಿ ಕೊಟ್ಟರು. ಆಗ ಗ್ರಾಮದ ಹೆಸರು ಮಾಗಳ. ಇಲ್ಲಿನ ಸೂರ್ಯನಾರಾಯಣ ಸ್ವಾಮಿ ಗಡಿಯನ್ನು ತ್ರಿಕೂಟಾ ದೇವಾಲಯವೆಂದು, ಶಿವ, ವಿಷ್ಣು ಮತ್ತು ಸೂರ್ಯದೇವರಿಗಾಗಿ ಕಟ್ಟಿಸಿದರು. ಈ ದೇವಾಲಯ ಕಪ್ಪು ಕಲ್ಲಿನಿಂದ ನಿರ್ಮಾಣಗೊಂಡು ಸುಂದರವಾಗಿದೆ.
ಶ್ರೀ ವೇಣುಗೋಪಾಲ ಸ್ವಾಮಿ ಗುಡಿ ಶಾಸನ ಬ್ರಾಹ್ಮಣ ಸೇನಾಪತಿ ಮತ್ತು ಅರಸನ ಮಂತ್ರಿಯಾಗಿದ್ದ ಮಾಧವನ ಶೌರ್ಯ ಪರಾಕ್ರಮವನ್ನು ಹೊಗಳಿದೆ. ಈ ಗ್ರಾಮದ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ತುಂಗಭದ್ರಾ ನದಿಯು ಹರಿದಿದೆ. ಈ ತೀರದ ಒಂದು ದಡದಲ್ಲಿ ಮಾವಿನತೋಪು ಬೆಳೆದಿದ್ದು ಇದನ್ನು ಮಾವಿನ ಮರದ ಕೊಳವೆಂದು ಕರೆಯುತ್ತಿದ್ದರು. ಶಾಸನದಲ್ಲಿ ಇದನ್ನು ‘ಮಾಂಗ’ ಎಂದು ಕರೆಯುತ್ತಿದ್ದು ನಂತರ ‘ಮಾಗಳ’ವಾಗಿ ಪರಿವರ್ತನೆಯಾಗಿದೆ.
ಹುಳೇಗುಡ್ಡ ಏತನೀರಾವರಿ ಯೋಜನೆ : ಇದನ್ನು ಸಿಂಗಟಾಲೂರು ಏತ ನೀರಾವರಿ ಯೋಜನೆ ಎಂದು ಕರೆಯುತ್ತಾರೆ. ಸಿಂಗಟಾಲೂರು ಹಾವೇರಿ ಜಿಲ್ಲೆಗೆ ಸೇರಿರುವುದರಿಂದ ಪುಳೇಗುಡ್ಡ ಏತನೀರಾವರಿ ಯೋಜನೆ ಎಂದು ಕರೆಯುತ್ತಾರೆ. ಮತ್ತು ಇಲ್ಲಿ ಗಾಳಿ ಯಂತ್ರಗಳು (ವಿಂಡ್ ಮಿಲ್) ಇವೆ. ಇವು ಮಕ್ಕಳಿಗೆ ಗಾಳಿಯನ್ನು ಒಂದು ಶಕ್ತಿಯಾಗಿ ಬಳಕೆ ಮಾಡುವ ಬಗ್ಗೆ ತಿಳಿಸುತ್ತದೆ.